<p><strong>ಕುಷ್ಟಗಿ</strong>: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಒಂದೇ ತಾಸಿನಲ್ಲಿ ಮೂವರು ರೈತರ ಕಿಸೆಗೆ ಕತ್ತರಿ ಹಾಕಿ ₹82 ಸಾವಿರ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.</p>.<p> ತಾಲ್ಲೂಕಿನ ಹೊಸಹಳ್ಳಿ ಹನುಮಂತ ಹಂಚಿನಾಳ, ನಿಲೋಗಲ್ ಗ್ರಾಮದ ಹನುಮಪ್ಪ ರಗಣಿ ಮತ್ತು ತಾವರಗೇರಾದ ಶರಣಪ್ಪ ನಾರಿನಾಳ ಹಣ ಕಳೆದುಕೊಂಡ ರೈತರು. ಎಲ್ಲರೂ ಅಂಗಿಯ ಒಳಗೆ ಕಿಸೆ ಇರುವ ಬನಿಯನ್ ತೊಟ್ಟಿದ್ದು ಆ ಕಿಸೆಗೆ ಬ್ಲೇಡ್ ಹಾಕಿದ್ದನ್ನು ರೈತರು ತೋರಿಸಿದರು.</p>.<p>ಎಮ್ಮೆ ಮಾರಿ ಬಂದ ಹಣದೊಂದಿಗೆ ಹನುಮಸಾಗರದ ಬಸ್ ಮೂಲಕ ಹೊಸಳ್ಳಿ ತೆರಳುತ್ತಿದ್ದ ಹನುಮಂತ ಹಂಚಿನಾಳ ಅವರ ಬಳಿ ₹24 ಸಾವಿರ ದೋಚಿದರು. ಕಿಸೆಗಳ್ಳತನದ ಸಂದರ್ಭ ₹10 ಸಾವಿರ ಹಣದ ಕಟ್ಟು ಕಳಚಿ ಹನುಮಂತ ಅವರ ಕಾಲಿನ ಮೇಲೆ ಬಿದ್ದಿದ್ದೆ. ಅದನ್ನು ಎತ್ತಿಕೊಳ್ಳುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ. ₹14 ಸಾವಿರ ಹಣ ಹೋಗಿ ಹತ್ತು ಸಾವಿರವಾದರೂ ಉಳಿದದ್ದೇ ಸಮಾಧಾನದ ಸಂಗತಿ ಎಂದು ರೈತ ಹೇಳಿದರು. ಅದೇ ಬಸ್ ಏರುತ್ತಿದ್ದ ಹನುಮಪ್ಪ ರಗಣಿ ಅವರ ಜೇಬಿಗೆ ಕತ್ತರಿ ಹಾಕಿ ₹8,500 ಹಣ ಲಪಟಾಯಿಸಲಾಗಿದೆ.</p>.<p>ಮತ್ತೊಬ್ಬ ರೈತ ಶರಣಪ್ಪ ನಾರಿನಾಳ ಎಂಬುವವರು ಕುರಿ ಖರೀದಿಸಲು ಬಸ್ಸಿನಲ್ಲಿ ಹೋಗುತ್ತಿದ್ದಾಗ ₹60 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. </p>.<p>ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದರಾದರೂ ಕಳ್ಳರ ಸುಳಿವು ದೊರೆಯಲಿಲ್ಲ. ನಂತರ ಪೊಲೀಸ್ ಠಾಣೆಗೆ ಬಂದ ರೈತರು ಮಾಹಿತಿ ನೀಡಿದರು. ಈ ಬಗ್ಗೆ ರೈತರಿಂದ ಲಿಖಿತ ದೂರು ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳಿದರು.</p>.<p> ಪೊಲೀಸರು ನಿಗಾ ವಹಿಸದ ಕಾರಣ ಮುಗ್ಧರು, ರೈತರನ್ನು ಗುರಿಯಾಗಿಸಿಕೊಂಡೆ ಕಿಸೆಗಳ್ಳತನ ಮಾಡುತ್ತಿದ್ದು, ಕಳ್ಳರಿಗೆ ಅಂಜಿಕೆ, ಅಳುಕು ಇಲ್ಲದಂತಾಗಿದೆ. ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಪ್ರಮುಖ ಹುಸೇನಪ್ಪ ಹಿರೇಮನಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಒಂದೇ ತಾಸಿನಲ್ಲಿ ಮೂವರು ರೈತರ ಕಿಸೆಗೆ ಕತ್ತರಿ ಹಾಕಿ ₹82 ಸಾವಿರ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.</p>.<p> ತಾಲ್ಲೂಕಿನ ಹೊಸಹಳ್ಳಿ ಹನುಮಂತ ಹಂಚಿನಾಳ, ನಿಲೋಗಲ್ ಗ್ರಾಮದ ಹನುಮಪ್ಪ ರಗಣಿ ಮತ್ತು ತಾವರಗೇರಾದ ಶರಣಪ್ಪ ನಾರಿನಾಳ ಹಣ ಕಳೆದುಕೊಂಡ ರೈತರು. ಎಲ್ಲರೂ ಅಂಗಿಯ ಒಳಗೆ ಕಿಸೆ ಇರುವ ಬನಿಯನ್ ತೊಟ್ಟಿದ್ದು ಆ ಕಿಸೆಗೆ ಬ್ಲೇಡ್ ಹಾಕಿದ್ದನ್ನು ರೈತರು ತೋರಿಸಿದರು.</p>.<p>ಎಮ್ಮೆ ಮಾರಿ ಬಂದ ಹಣದೊಂದಿಗೆ ಹನುಮಸಾಗರದ ಬಸ್ ಮೂಲಕ ಹೊಸಳ್ಳಿ ತೆರಳುತ್ತಿದ್ದ ಹನುಮಂತ ಹಂಚಿನಾಳ ಅವರ ಬಳಿ ₹24 ಸಾವಿರ ದೋಚಿದರು. ಕಿಸೆಗಳ್ಳತನದ ಸಂದರ್ಭ ₹10 ಸಾವಿರ ಹಣದ ಕಟ್ಟು ಕಳಚಿ ಹನುಮಂತ ಅವರ ಕಾಲಿನ ಮೇಲೆ ಬಿದ್ದಿದ್ದೆ. ಅದನ್ನು ಎತ್ತಿಕೊಳ್ಳುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ. ₹14 ಸಾವಿರ ಹಣ ಹೋಗಿ ಹತ್ತು ಸಾವಿರವಾದರೂ ಉಳಿದದ್ದೇ ಸಮಾಧಾನದ ಸಂಗತಿ ಎಂದು ರೈತ ಹೇಳಿದರು. ಅದೇ ಬಸ್ ಏರುತ್ತಿದ್ದ ಹನುಮಪ್ಪ ರಗಣಿ ಅವರ ಜೇಬಿಗೆ ಕತ್ತರಿ ಹಾಕಿ ₹8,500 ಹಣ ಲಪಟಾಯಿಸಲಾಗಿದೆ.</p>.<p>ಮತ್ತೊಬ್ಬ ರೈತ ಶರಣಪ್ಪ ನಾರಿನಾಳ ಎಂಬುವವರು ಕುರಿ ಖರೀದಿಸಲು ಬಸ್ಸಿನಲ್ಲಿ ಹೋಗುತ್ತಿದ್ದಾಗ ₹60 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. </p>.<p>ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದರಾದರೂ ಕಳ್ಳರ ಸುಳಿವು ದೊರೆಯಲಿಲ್ಲ. ನಂತರ ಪೊಲೀಸ್ ಠಾಣೆಗೆ ಬಂದ ರೈತರು ಮಾಹಿತಿ ನೀಡಿದರು. ಈ ಬಗ್ಗೆ ರೈತರಿಂದ ಲಿಖಿತ ದೂರು ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳಿದರು.</p>.<p> ಪೊಲೀಸರು ನಿಗಾ ವಹಿಸದ ಕಾರಣ ಮುಗ್ಧರು, ರೈತರನ್ನು ಗುರಿಯಾಗಿಸಿಕೊಂಡೆ ಕಿಸೆಗಳ್ಳತನ ಮಾಡುತ್ತಿದ್ದು, ಕಳ್ಳರಿಗೆ ಅಂಜಿಕೆ, ಅಳುಕು ಇಲ್ಲದಂತಾಗಿದೆ. ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಪ್ರಮುಖ ಹುಸೇನಪ್ಪ ಹಿರೇಮನಿ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>