ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ನಡೆದಿದ್ದು, ಶಾಲೆಗೆ ರಜೆ ಇದ್ದ ಕಾರಣ ಆಡವಾಡಲು ಹೋಗಿದ್ದರು. ತಾಂಡಾದಲ್ಲಿ ಹೊಲದಲ್ಲಿಯೇ ಇವರ ಕುಟುಂಬದವರ ಮನೆ ಇದೆ. ಅಲ್ಲಿ ಆಟವಾಡುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದು ಸೌಂದರ್ಯ ರತ್ನಪ್ಪ ಪೂಜಾರ (11) ಹಾಗೂ ಲಕ್ಷ್ಮಿ ಶರಣಪ್ಪ ಪೂಜಾರ (10) ಮೃತಪಟ್ಟಿದ್ದಾರೆ. ಮೃತರು ಸಹೋದರ ಸಂಬಂಧಿಗಳ ಮಕ್ಕಳು.