ಗಂಗಾವತಿ: ಮಠದಲ್ಲೇ ಮೊಟ್ಟೆ, ಬಾಳೆಹಣ್ಣು ತಿನ್ನುತ್ತೇವೆ; ವಿದ್ಯಾರ್ಥಿನಿ ಆಕ್ರೋಶ

ಗಂಗಾವತಿ (ಕೊಪ್ಪಳ ಜಿಲ್ಲೆ): ನಗರದಲ್ಲಿ ಶನಿವಾರ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್ಎಫ್ಐ) ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಎಂಎನ್ಎಂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಂಜಲಿ ಮೊಟ್ಟೆ ವಿರೋಧಿಸುವ ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಳು.
‘ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದನ್ನು ಮಠಾಧೀಶರು ವಿರೋಧಿಸುವುದು ಮುಂದುವರಿಸಿದಲ್ಲಿ, ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ ಮತ್ತು ಬಾಳೆಹಣ್ಣು ಸೇವಿಸುತ್ತೇವೆ’ ಎಂದು ಆಕೆ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ನಾವು ಮೊಟ್ಟೆ ತಿಂದ್ರೇನೆ ಬದುಕುತ್ತೇವೆ. ಇಲ್ಲದಿದ್ದರೆ, ಸತ್ತು ಹೋಗುತ್ತೇವೆ. ನಾವು ಮೊಟ್ಟೆ ಸೇವಿಸುವುದು ಬೇಕಾ ಇಲ್ಲವೇ, ಮೊಟ್ಟೆ ವಿತರಣೆ ಮಾಡದಿರುವುದು ಬೇಕಾ. ನಮ್ಮ ಬೆನ್ನಿಗೆ ಯಾರೂ ಇಲ್ಲ ಅಂತ ತಿಳಿದಿರಾ ಹೇಗೆ. ಶಾಲೆ, ಪೋಷಕರು, ಶಿಕ್ಷಕರು, ಎಸ್ಎಫ್ಐ ಸಂಘಟನೆಯವರು ಇದ್ದಾರೆ. ಮೊಟ್ಟೆ ವಿತರಿಸಲು ಮಠಾಧೀಶರು ವಿರೋಧ ವ್ಯಕ್ತಪಡಿಸಿದರೆ, ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ, ಬಾಳೆ
ಹಣ್ಣು ಸೇವಿಸುತ್ತೇವೆ’ ಎಂದು ಅಂಜಲಿ ಹೇಳಿದಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.