<p><strong>ಕೊಪ್ಪಳ:</strong> ವಿದ್ಯುತ್ ಪರಿವರ್ತಕ ಕೆಟ್ಟಿದೆ ಎಂದು ತಪ್ಪು ಮಾಹಿತಿ ನೀಡಿದ ಲೈನ್ಮನ್ಗಳ ವಿರುದ್ಧ ತಾಲ್ಲೂಕಿನ ಟನಕನಕಲ್ ಗ್ರಾಮದ ರೈತರು ಸೋಮವಾರ ಇಲ್ಲಿನ ಜೆಸ್ಕಾಂ ಕಚೇರಿ ಎದುರು ಟ್ರಾನ್ಸ್ ಫಾರ್ಮರ್ ಸಹಿತ ಆಗಮಿಸಿ ಪ್ರತಿಭಟನೆ ನಡೆಸಿದರು.<br /> <br /> ಗ್ರಾಮದ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ಕೆಟ್ಟಿದೆ ಎಂದು ಹೇಳಿ ರೈತರಿಂದ ಹಣ ಸುಲಿಯುತ್ತಿದ್ದಾರೆ. ಮೂವರು ಲೈನ್ಮನ್ಗಳು ಈ ದಂಧೆಯಲ್ಲಿ ನಿರತರಾಗಿದ್ದಾರೆ. ಎಷ್ಟೋ ಬಾರಿ ಸರಿಯಿದ್ದ ಟ್ರಾನ್ಸ್ಫಾರ್ಮರ್ನ್ನು ತೆಗೆಸಿ ದುರಸ್ತಿ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ. ಇದಕ್ಕೆ ವೀರಾಪುರ ಗ್ರಾಮದಲ್ಲಿ ಟಿಸಿ ದುರಸ್ತಿ ಮಾಡುವವನ ಕುಮ್ಮಕ್ಕೂ ಇದೆ ಎಂದು ಆರೋಪಿಸಿದರು.<br /> <br /> ಟನಕನಕಲ್ ಗ್ರಾಮದ ರೈತರು ಇದರಿಂದಾಗಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕೂಡಲೇ ಇಂಥ ಲೈನ್ಮನ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.<br /> <br /> ರೈತಮುಖಂಡರಾದ ಕಲ್ಲಪ್ಪ ಹೂಗಾರ, ರಾಜು ಮಲಕಟ್ಟೆ, ನೀಲಪ್ಪ ಅರಳಿಗಿಡ, ಮಲ್ಲಪ್ಪ, ಮೈಲಾರಪ್ಪ ಶಾನಭೋಗ, ಮಂಜಪ್ಪ ಇಟ್ಟಂಗಿ, ಗವಿಸಿದ್ದಪ್ಪ ಈಶ್ವರಗೌಡ್ರ, ಕಲ್ಲಪ್ಪ ಹೂಗಾರ, ಸಿದ್ದಪ್ಪ ಹದ್ದಿನ, ಮಂಜುನಾಥ ಅಬಕಾರಿ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ವಿದ್ಯುತ್ ಪರಿವರ್ತಕ ಕೆಟ್ಟಿದೆ ಎಂದು ತಪ್ಪು ಮಾಹಿತಿ ನೀಡಿದ ಲೈನ್ಮನ್ಗಳ ವಿರುದ್ಧ ತಾಲ್ಲೂಕಿನ ಟನಕನಕಲ್ ಗ್ರಾಮದ ರೈತರು ಸೋಮವಾರ ಇಲ್ಲಿನ ಜೆಸ್ಕಾಂ ಕಚೇರಿ ಎದುರು ಟ್ರಾನ್ಸ್ ಫಾರ್ಮರ್ ಸಹಿತ ಆಗಮಿಸಿ ಪ್ರತಿಭಟನೆ ನಡೆಸಿದರು.<br /> <br /> ಗ್ರಾಮದ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ಕೆಟ್ಟಿದೆ ಎಂದು ಹೇಳಿ ರೈತರಿಂದ ಹಣ ಸುಲಿಯುತ್ತಿದ್ದಾರೆ. ಮೂವರು ಲೈನ್ಮನ್ಗಳು ಈ ದಂಧೆಯಲ್ಲಿ ನಿರತರಾಗಿದ್ದಾರೆ. ಎಷ್ಟೋ ಬಾರಿ ಸರಿಯಿದ್ದ ಟ್ರಾನ್ಸ್ಫಾರ್ಮರ್ನ್ನು ತೆಗೆಸಿ ದುರಸ್ತಿ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ. ಇದಕ್ಕೆ ವೀರಾಪುರ ಗ್ರಾಮದಲ್ಲಿ ಟಿಸಿ ದುರಸ್ತಿ ಮಾಡುವವನ ಕುಮ್ಮಕ್ಕೂ ಇದೆ ಎಂದು ಆರೋಪಿಸಿದರು.<br /> <br /> ಟನಕನಕಲ್ ಗ್ರಾಮದ ರೈತರು ಇದರಿಂದಾಗಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕೂಡಲೇ ಇಂಥ ಲೈನ್ಮನ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.<br /> <br /> ರೈತಮುಖಂಡರಾದ ಕಲ್ಲಪ್ಪ ಹೂಗಾರ, ರಾಜು ಮಲಕಟ್ಟೆ, ನೀಲಪ್ಪ ಅರಳಿಗಿಡ, ಮಲ್ಲಪ್ಪ, ಮೈಲಾರಪ್ಪ ಶಾನಭೋಗ, ಮಂಜಪ್ಪ ಇಟ್ಟಂಗಿ, ಗವಿಸಿದ್ದಪ್ಪ ಈಶ್ವರಗೌಡ್ರ, ಕಲ್ಲಪ್ಪ ಹೂಗಾರ, ಸಿದ್ದಪ್ಪ ಹದ್ದಿನ, ಮಂಜುನಾಥ ಅಬಕಾರಿ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>