<p><strong>ಗಂಗಾವತಿ: </strong>ಡೈಲಿ ಮಾರ್ಕೆಟ್ಗೆ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿದ ನಗರಸಭೆಯ ಪೌರಾಯುಕ್ತ ಸಿ.ಆರ್. ರಂಗಸ್ವಾಮಿ ಅವರ ಮುಂದೆ ಸ್ಥಳಿಯ ವಾಸಿಗಳು ಸ್ವಚ್ಛತೆ ಕೊರತೆ ಹಿನ್ನೆಲೆ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.<br /> <br /> ಕೋಳಿ ಮಾಂಸದ ವ್ಯಾಪಾರಿಗಳು ನಿತ್ಯ ಬಿಡುತ್ತಿರುವ ತ್ಯಾಜ್ಯ ನೀರು ಒಂದೆಡೆ ನಿಂತು ಇಡೀ ಮಾರ್ಕೆಟ್ ಪ್ರದೇಶದಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ. ಇದರಿಂದ ತರಕಾರಿ ಕೊಳ್ಳಲು ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ ಖರೀದಿಸಬೇಕಾದ ಸ್ಥಿತಿ ಬಂದಿದೆ.<br /> <br /> ಕೇವಲ ಗ್ರಾಹಕರು ಮಾತ್ರವಲ್ಲ, ನಿತ್ಯ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ನಡೆಸುತ್ತಿರುವ ನೂರಾರು ವರ್ತಕರಿಗೆ ತೀವ್ರ ತೊಂದರೆಯಾಗಿದೆ. ರೋಗ ರುಜ್ಜೀನಕ್ಕೆ ಕಾರಣವಾಗುತ್ತಿದೆ ಎಂದು ಕಿರಾಣಿ ವರ್ತಕ ಹನುಮಂತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಗಂಗಾವತಿ ವಾಯ್ಸ್ ಮತ್ತು ಪವನ್ ಬಾರ್ ಮುಂದಿರುವ ಖಾಲಿ ಪ್ರದೇಶದಲ್ಲಿ ಕೋಳಿ, ತರಕಾರಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಕಸ ಸಂಗ್ರಹವಾಗಿ ಹಂದಿ–ನಾಯಿಗಳ ಬೀಡಾಗಿದೆ. ಅಲ್ಲಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಕಷ್ಟು ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದರು.<br /> <br /> ಇದೇ ಸ್ಥಳದಲ್ಲಿದ್ದ ನಗರಸಭೆಯ ಸಾರ್ವಜನಿಕ ಶೌಚಾಲಯವನ್ನು ನೆಲಸಮ ಮಾಡಿದ ಹಿಂದಿನ ನಗರಸಭೆಯ ಸದಸ್ಯ ಒಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳ ಕಬಳಿಸಲು ಯತ್ನಿಸಿದ್ದಾರೆ. ಕೂಡಲೆ ತ್ಯಾಜ್ಯವನ್ನು ತೆರವು ಮಾಡಿ, ಖಾಸಗಿ ಆಸ್ತಿಯಾಗಿದ್ದರೆ ನೋಟಿಸ್ ಜಾರಿ ಮಾಡಬೇಕು.<br /> <br /> ನಿಗದಿತ ಅವಧಿಯೊಳಗೆ ನೋಟಿಸ್ಗೆ ಉತ್ತರ ದೊರೆಯದಿದ್ದರೆ ನಗರಸಭೆ ಸ್ಥಳವನ್ನು ವಶಪಡಿಸಿಕೊಂಡು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವಂತೆ ಮಹಿಳೆಯರಾದ ರೇಣುಕಮ್ಮ, ಶಾರದಮ್ಮ ಇತರರು ಪೌರಾಯುಕ್ತರನ್ನು ಒತ್ತಾಯಿಸಿದರು.<br /> <br /> ಇದಕ್ಕೆ ಸ್ಪಂದಿಸಿದ ಪೌರಾಯುಕ್ತ ಕೂಡಲೆ ಚಿಕನ್ ಸೆಂಟರ್ ವರ್ತಕರಿಗೆ ನೋಟಿಸ್ ಜಾರಿ ಮಾಡುವಂತೆ ಅಧೀನ ಸಿಬ್ಬಂದಿಗೆ ಸೂಚಿಸಿದರು. ಸೋಮವಾರದೊಳಗೆ ತ್ಯಾಜ್ಯವನ್ನು ತೆರವು ಮಾಡಿ ಸಾಗಿಸುವುದಾಗಿ ಸ್ಥಳೀಯರಿಗೆ ಪೌರಾಯುಕ್ತ ಭರವಸೆ ನೀಡಿದರು.<br /> <br /> ಪೌರಾಯುಕ್ತ ಭೇಟಿ ನೀಡಿದ ಕೇವಲ ಒಂದು ಗಂಟೆಯಲ್ಲೆ ಸಿಬ್ಬಂದಿ ಬ್ಲಿಚಿಂಗ್ ಪೌಡರ್ ಸುರಿದು ವಾಸನೆ ತಡೆದರು. 4ನೇ ವಾರ್ಡಿ ಡಿನ ಸದಸ್ಯ ಬಿ. ನಾಗರಾಜ, ಪರಿಸರ ಎಂಜಿನಿಯರ್ ಶರಣಪ್ಪ, ಆರೋಗ್ಯ ನಿರೀಕ್ಷಕರಾದ ದತ್ತಾತ್ರೇಯ ಹೆಗಡೆ, ಕಿಶನ್ರಾವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಡೈಲಿ ಮಾರ್ಕೆಟ್ಗೆ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿದ ನಗರಸಭೆಯ ಪೌರಾಯುಕ್ತ ಸಿ.ಆರ್. ರಂಗಸ್ವಾಮಿ ಅವರ ಮುಂದೆ ಸ್ಥಳಿಯ ವಾಸಿಗಳು ಸ್ವಚ್ಛತೆ ಕೊರತೆ ಹಿನ್ನೆಲೆ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.<br /> <br /> ಕೋಳಿ ಮಾಂಸದ ವ್ಯಾಪಾರಿಗಳು ನಿತ್ಯ ಬಿಡುತ್ತಿರುವ ತ್ಯಾಜ್ಯ ನೀರು ಒಂದೆಡೆ ನಿಂತು ಇಡೀ ಮಾರ್ಕೆಟ್ ಪ್ರದೇಶದಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ. ಇದರಿಂದ ತರಕಾರಿ ಕೊಳ್ಳಲು ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ ಖರೀದಿಸಬೇಕಾದ ಸ್ಥಿತಿ ಬಂದಿದೆ.<br /> <br /> ಕೇವಲ ಗ್ರಾಹಕರು ಮಾತ್ರವಲ್ಲ, ನಿತ್ಯ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ನಡೆಸುತ್ತಿರುವ ನೂರಾರು ವರ್ತಕರಿಗೆ ತೀವ್ರ ತೊಂದರೆಯಾಗಿದೆ. ರೋಗ ರುಜ್ಜೀನಕ್ಕೆ ಕಾರಣವಾಗುತ್ತಿದೆ ಎಂದು ಕಿರಾಣಿ ವರ್ತಕ ಹನುಮಂತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಗಂಗಾವತಿ ವಾಯ್ಸ್ ಮತ್ತು ಪವನ್ ಬಾರ್ ಮುಂದಿರುವ ಖಾಲಿ ಪ್ರದೇಶದಲ್ಲಿ ಕೋಳಿ, ತರಕಾರಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಕಸ ಸಂಗ್ರಹವಾಗಿ ಹಂದಿ–ನಾಯಿಗಳ ಬೀಡಾಗಿದೆ. ಅಲ್ಲಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಕಷ್ಟು ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದರು.<br /> <br /> ಇದೇ ಸ್ಥಳದಲ್ಲಿದ್ದ ನಗರಸಭೆಯ ಸಾರ್ವಜನಿಕ ಶೌಚಾಲಯವನ್ನು ನೆಲಸಮ ಮಾಡಿದ ಹಿಂದಿನ ನಗರಸಭೆಯ ಸದಸ್ಯ ಒಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳ ಕಬಳಿಸಲು ಯತ್ನಿಸಿದ್ದಾರೆ. ಕೂಡಲೆ ತ್ಯಾಜ್ಯವನ್ನು ತೆರವು ಮಾಡಿ, ಖಾಸಗಿ ಆಸ್ತಿಯಾಗಿದ್ದರೆ ನೋಟಿಸ್ ಜಾರಿ ಮಾಡಬೇಕು.<br /> <br /> ನಿಗದಿತ ಅವಧಿಯೊಳಗೆ ನೋಟಿಸ್ಗೆ ಉತ್ತರ ದೊರೆಯದಿದ್ದರೆ ನಗರಸಭೆ ಸ್ಥಳವನ್ನು ವಶಪಡಿಸಿಕೊಂಡು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವಂತೆ ಮಹಿಳೆಯರಾದ ರೇಣುಕಮ್ಮ, ಶಾರದಮ್ಮ ಇತರರು ಪೌರಾಯುಕ್ತರನ್ನು ಒತ್ತಾಯಿಸಿದರು.<br /> <br /> ಇದಕ್ಕೆ ಸ್ಪಂದಿಸಿದ ಪೌರಾಯುಕ್ತ ಕೂಡಲೆ ಚಿಕನ್ ಸೆಂಟರ್ ವರ್ತಕರಿಗೆ ನೋಟಿಸ್ ಜಾರಿ ಮಾಡುವಂತೆ ಅಧೀನ ಸಿಬ್ಬಂದಿಗೆ ಸೂಚಿಸಿದರು. ಸೋಮವಾರದೊಳಗೆ ತ್ಯಾಜ್ಯವನ್ನು ತೆರವು ಮಾಡಿ ಸಾಗಿಸುವುದಾಗಿ ಸ್ಥಳೀಯರಿಗೆ ಪೌರಾಯುಕ್ತ ಭರವಸೆ ನೀಡಿದರು.<br /> <br /> ಪೌರಾಯುಕ್ತ ಭೇಟಿ ನೀಡಿದ ಕೇವಲ ಒಂದು ಗಂಟೆಯಲ್ಲೆ ಸಿಬ್ಬಂದಿ ಬ್ಲಿಚಿಂಗ್ ಪೌಡರ್ ಸುರಿದು ವಾಸನೆ ತಡೆದರು. 4ನೇ ವಾರ್ಡಿ ಡಿನ ಸದಸ್ಯ ಬಿ. ನಾಗರಾಜ, ಪರಿಸರ ಎಂಜಿನಿಯರ್ ಶರಣಪ್ಪ, ಆರೋಗ್ಯ ನಿರೀಕ್ಷಕರಾದ ದತ್ತಾತ್ರೇಯ ಹೆಗಡೆ, ಕಿಶನ್ರಾವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>