ತಂದೆಶಿವಣ್ಣ ಬಿಸಿಎಂ ಹಾಸ್ಟೆಲ್ನಲ್ಲಿ ಅಡುಗೆ ಸಹಾಯಕ. ತಾಯಿ ಶಕುಂತಲಾ ಶಿಕ್ಷಕಿ. ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲೇ ಓದಿ, ನಂತರ ವಿಜ್ಞಾನ ವಿಷಯ ಆಯ್ದುಕೊಂಡ ಈ ಹುಡುಗಿ ಪ್ರಸ್ತುತ ಗುಜರಾತ್ನ ನವಸಾರಿ ಕೃಷಿ ವಿದ್ಯಾಲಯದಲ್ಲಿ ಪುಷ್ಪ ಕೃಷಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದಾರೆ. ಪುಷ್ಪ ಕೃಷಿ ಮೂಲಕ ರೈತರ ಆರ್ಥಿಕ ಸ್ಥಿತಿಗತಿ ಸುಧಾರಿಸಬೇಕು. ರಫ್ತು ಉತ್ತೇಜಿಸಬೇಕು. ಅದಕ್ಕಾಗಿ ಬೇಡಿಕೆ ಇರುವ ಪುಷ್ಪ ತಳಿ ಅಭಿವೃದ್ಧಿಪಡಿಸಿ, ಲಾಭದಾಯಕ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ನೆರವಾಗಬೇಕು ಎಂಬ ಧ್ಯೇಯ ವಿದ್ಯಾಶ್ರೀ ಅವರದು.