‘ಭಾರತವು ಚಾತುರ್ವರ್ಣ ವ್ಯವಸ್ಥೆಯಲ್ಲಿ ನಲುಗುತ್ತಿರುವಾಗ ಶರಣರು ಸಮಾನತೆ ಸಾರಿದರು. ಇಂತಹ ವಚನ ಚಳವಳಿಯ ಹಾದಿಯಲ್ಲಿ ನಡೆಯಬೇಕಾದ ಹೊಣೆ ಎಲ್ಲ ವಿವೇಕವಂತರ ಮೇಲಿದೆ. ಇಂತಹ ಸಂದರ್ಭದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನ ನಡೆಯುತ್ತಿದೆ. ಮಂಗಳೂರು, ಉಡುಪಿಯ ಅಭಿಯಾನ ವಚನ ತತ್ವಕ್ಕೆ ವಿರುದ್ಧವಾಗಿದೆ‘ ಎಂದು ಆರೋಪಿಸಿದರು.