ಮದ್ದೂರು: ಸಮಯಕ್ಕೆ ಸರಿಯಾಗಿ ಮಳೆಬಾರದೆ ಹಾಗೂ ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸದ್ದರಿಂದ ಸಮೀಪದ ಚನ್ನಸಂದ್ರದಲ್ಲಿ ಒಣಗಿದ 1.15 ಎಕರೆ ಕಬ್ಬನ್ನು ರೈತ ಟ್ರ್ಯಾಕ್ಟರ್ ರೂಟರ್ ಬಳಸಿ ಹರಗಿ, ನೆಲಸಮ ಮಾಡಿದ್ದಾರೆ.
ರೈತ ಲಕ್ಷ್ಮಣ್ ಅವರು ಸುಮಾರು ₹ 1 ಲಕ್ಷ ಖರ್ಚು ಮಾಡಿ ಏಳು ತಿಂಗಳಿಂದ ಕಬ್ಬು ಬೆಳೆಸಿದ್ದರು. ಆದರೆ, ನೀರಿನ ಕೊರತೆಯಿಂದಾಗಿ ಕಬ್ಬು ಸಂಪೂರ್ಣ ಒಣಗಿತ್ತು. ಇದರಿಂದ ಬೇಸರಗೊಂಡ ಲಕ್ಷ್ಮಣ್ ಹರಗಿ ಜಮೀನನ್ನು ಸಮತಟ್ಟು ಮಾಡಿದರು.