ರಥೋತ್ಸವಕ್ಕೆ ಮುನ್ನ ನಡೆದ ತಿರುಗಣಿ ಉತ್ಸವದ ಜೊತೆಗೆ ಕಾಲಭೈರವೇಶ್ವರ ಸ್ವಾಮಿ ಪುಷ್ಕರಿಣಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ಗಂಗಾಧರೇಶ್ವರ ಸ್ವಾಮಿಯನ್ನು ಇರಿಸಿ ಸ್ವಾಮೀಜಿ ಅವರು ಭಾಗಿಯಾದರು. ಬೆಟ್ಟದ ಮಹಾದ್ವಾರದಲ್ಲಿ ಜನರು ಗಂಧದಕಡ್ಡಿ ಮತ್ತು ಕರ್ಪೂರವನ್ನು ಬೆಳಗಿಸಿದರು. ಅಲ್ಲದೆ, ಬಣ್ಣ, ಬಣ್ಣದ ವಿಶೇಷ ವಿದ್ಯುತ್ ದೀಪಗಳಿಂದ ಬೆಟ್ಟವನ್ನು ಶೃಂಗರಿಸಲಾಗಿತ್ತು. ರಥೋತ್ಸವದಲ್ಲಿ ಆಯೋಜಿಸಲಾಗಿದ್ದ ಸಿಡಿಮದ್ದು, ಪಟಾಕಿ ಪ್ರದರ್ಶನ ನೋಡುಗರ ಗಮನ ಸೆಳೆಯಿತು.