<p><strong>ಪಾಂಡವಪುರ (ಮಂಡ್ಯ): </strong>ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ ಬುಧವಾರ ಕೆಲಕಾಲ ಆತಂಕ ಸೃಷ್ಟಿಸಿತ್ತು. ನಿಜವಾದ ಹುಲಿಯೇ ಸತ್ತು ಕೆರೆಯಲ್ಲಿ ತೇಲುತ್ತಿರುವುದಾಗಿ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿಬಿಟ್ಟಿರುವುದು ಅವಾಂತರಕ್ಕೆ ಕಾರಣವಾಯಿತು.</p>.<p>ಗ್ರಾಮಗಳಲ್ಲಿ ನಡೆಯುವ ಮಹದೇಶ್ವರಸ್ವಾಮಿ ಜಾತ್ರೆ, ಹುಲಿವಾಹನೋತ್ಸವ ಸಂದರ್ಭದಲ್ಲಿ ಬಳಸುವ ಹುಲಿವೇಷದ ಪರಿಕರ, ಹುಲಿ ಗೊಂಬೆಗಳನ್ನು ಬಹಳ ದಿನಗಳ ಹಿಂದೆಯೇ ತೊಣ್ಣೂರು ಕೆರೆಗೆ ಬಿಡಲಾಗಿತ್ತು. ಮಳೆಯಾಗಿ ಕೆರೆಗೆ ಹೊಸ ನೀರು ಹರಿದು ಬಂದಿದ್ದರಿಂದ, ಹುಲಿ ಚರ್ಮದಂತಿರುವ ಗೊಂಬೆಯ ಮೇಲ್ಪದರವು ಮೇಲೆ ಬಂದು ತೇಲುತ್ತಿತ್ತು.</p>.<p>ಕೆಲವರು ಇವುಗಳ ಛಾಯಾಚಿತ್ರ ತೆಗೆದು, ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಹುಲಿ ಕೊಂದು ಕೆರೆಗೆ ಎಸೆದಿದ್ದಾಗಿಯೂ ಚರ್ಚೆಗಳು ನಡೆದವು. ಈ ವಿಚಾರ ಅರಣ್ಯ ಇಲಾಖೆಗೂ ತಲುಪಿತು.</p>.<p>ಈ ಬಗ್ಗೆ ಸ್ಪಷ್ಟನೆ ನೀಡಿದ ಆರ್ಎಫ್ಒ ಪುಟ್ಟಸ್ವಾಮಿ, ‘ಇವು ಮರ, ಪ್ಲಾಸ್ಟಿಕ್ನಿಂದ ಮಾಡಿದ ಹುಲಿಯ ಗೊಂಬೆಗಳು, ನಿಜವಾದ ಹುಲಿ ಅಲ್ಲ. ಸುಳ್ಳು ಸುದ್ದಿ ಹರಡಿಸಿ ಆತಂಕ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ (ಮಂಡ್ಯ): </strong>ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ ಬುಧವಾರ ಕೆಲಕಾಲ ಆತಂಕ ಸೃಷ್ಟಿಸಿತ್ತು. ನಿಜವಾದ ಹುಲಿಯೇ ಸತ್ತು ಕೆರೆಯಲ್ಲಿ ತೇಲುತ್ತಿರುವುದಾಗಿ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿಬಿಟ್ಟಿರುವುದು ಅವಾಂತರಕ್ಕೆ ಕಾರಣವಾಯಿತು.</p>.<p>ಗ್ರಾಮಗಳಲ್ಲಿ ನಡೆಯುವ ಮಹದೇಶ್ವರಸ್ವಾಮಿ ಜಾತ್ರೆ, ಹುಲಿವಾಹನೋತ್ಸವ ಸಂದರ್ಭದಲ್ಲಿ ಬಳಸುವ ಹುಲಿವೇಷದ ಪರಿಕರ, ಹುಲಿ ಗೊಂಬೆಗಳನ್ನು ಬಹಳ ದಿನಗಳ ಹಿಂದೆಯೇ ತೊಣ್ಣೂರು ಕೆರೆಗೆ ಬಿಡಲಾಗಿತ್ತು. ಮಳೆಯಾಗಿ ಕೆರೆಗೆ ಹೊಸ ನೀರು ಹರಿದು ಬಂದಿದ್ದರಿಂದ, ಹುಲಿ ಚರ್ಮದಂತಿರುವ ಗೊಂಬೆಯ ಮೇಲ್ಪದರವು ಮೇಲೆ ಬಂದು ತೇಲುತ್ತಿತ್ತು.</p>.<p>ಕೆಲವರು ಇವುಗಳ ಛಾಯಾಚಿತ್ರ ತೆಗೆದು, ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಹುಲಿ ಕೊಂದು ಕೆರೆಗೆ ಎಸೆದಿದ್ದಾಗಿಯೂ ಚರ್ಚೆಗಳು ನಡೆದವು. ಈ ವಿಚಾರ ಅರಣ್ಯ ಇಲಾಖೆಗೂ ತಲುಪಿತು.</p>.<p>ಈ ಬಗ್ಗೆ ಸ್ಪಷ್ಟನೆ ನೀಡಿದ ಆರ್ಎಫ್ಒ ಪುಟ್ಟಸ್ವಾಮಿ, ‘ಇವು ಮರ, ಪ್ಲಾಸ್ಟಿಕ್ನಿಂದ ಮಾಡಿದ ಹುಲಿಯ ಗೊಂಬೆಗಳು, ನಿಜವಾದ ಹುಲಿ ಅಲ್ಲ. ಸುಳ್ಳು ಸುದ್ದಿ ಹರಡಿಸಿ ಆತಂಕ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>