<p><strong>ಮಂಡ್ಯ:</strong> ಭ್ರಷ್ಟಾಚಾರ, ಹಗರಣ ಪ್ರಕರಣಗಳು ಹಲವಾರು ಕಾಂಗ್ರೆಸ್ ಸಚಿವರಿಗೆ ಸುತ್ತಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷದ ರಾಜ್ಯ ರಾಜಕಾರಣ ಅಯೋಮಯ ಸ್ಥಿತಿಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪ ಮಾಡಿದರು. </p><p>ಮೈಸೂರಿನಿಂದ ಬೆಂಗಳೂರಿಗೆ ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದಾಗ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಬುಧವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.</p><p>ಒಳ್ಳೆಯ ಕಾರಣಕ್ಕೆ ಈ ಸರ್ಕಾರ ಸುದ್ದಿಯಾಗುತ್ತಿಲ್ಲ. ಕೆಟ್ಟ ರಾಜಕಾರಣದಿಂದ ಪ್ರಚಾರದಲ್ಲಿದೆ. ರಾಜ್ಯದಲ್ಲಿ ನಿತ್ಯ ನಡೆಯುತ್ತಿರುವ ಅತ್ಯಾಚಾರ, ಡ್ರಗ್ಸ್, ದರೋಡೆ ಇವು ಒಳ್ಳೆಯ ಕಾರಣವೇನು? ರೈತರ ಆತ್ಮಹತ್ಯೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಮುಂತಾದ ರೀತಿಯಲ್ಲಿ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿದೆ ಎಂದು ದೂರಿದರು. </p><p>‘ಗಾಂಧಿ ದೇಹಕ್ಕೆ ಗುಂಡೊಡೆದಿದ್ದು ಗೋಡ್ಸೆ, ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್. ಗಾಂಧಿ ತತ್ವ ಮದ್ಯಪಾನ ನಿಷೇಧ ಆಗಬೇಕು, ಆದರೆ ಇವರು ಕಿರಾಣಿ ಅಂಗಡಿಗಳೆಲ್ಲಾ ಅಕ್ರಮ ಮದ್ಯ ಸಿಗುವಂತೆ ಮಾಡಿದ್ದಾರೆ’ ಎಂದು ದೂರಿದರು.</p><p>‘ಗಾಂಧಿ ಸ್ವದೇಶಿಗೆ ಒತ್ತು ಕೊಟ್ಟರೆ, ಇವರ (ಕಾಂಗ್ರೆಸ್) ನಾಯಕತ್ವನೇ ವಿದೇಶಿ. ಗಾಂಧಿ ಪ್ರಾಮಾಣಿಕತೆಯ ಪ್ರತಿರೂಪವಾದರೆ ಇವತ್ತಿನ ಕಾಂಗ್ರೆಸ್ ಭ್ರಷ್ಟಾಚಾರದ ಪ್ರತಿರೂಪವಾಗಿ ಬದಲಾಗಿದೆ ಎಂದರು. </p><p>ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್, ಸದಾನಂದ, ಚಂದಗಾಲು ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ವಿವೇಕ್, ಇಂಡುವಾಳು ಸಚ್ಚಿದಾನಂದ, ಕೇಶವ್, ಸಿ.ಟಿ.ಮಂಜುನಾಥ್, ಒಬಿಸಿ ಆನಂದ್, ನಾಗನಂದ, ವೈರಮುಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಭ್ರಷ್ಟಾಚಾರ, ಹಗರಣ ಪ್ರಕರಣಗಳು ಹಲವಾರು ಕಾಂಗ್ರೆಸ್ ಸಚಿವರಿಗೆ ಸುತ್ತಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷದ ರಾಜ್ಯ ರಾಜಕಾರಣ ಅಯೋಮಯ ಸ್ಥಿತಿಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪ ಮಾಡಿದರು. </p><p>ಮೈಸೂರಿನಿಂದ ಬೆಂಗಳೂರಿಗೆ ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದಾಗ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಬುಧವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.</p><p>ಒಳ್ಳೆಯ ಕಾರಣಕ್ಕೆ ಈ ಸರ್ಕಾರ ಸುದ್ದಿಯಾಗುತ್ತಿಲ್ಲ. ಕೆಟ್ಟ ರಾಜಕಾರಣದಿಂದ ಪ್ರಚಾರದಲ್ಲಿದೆ. ರಾಜ್ಯದಲ್ಲಿ ನಿತ್ಯ ನಡೆಯುತ್ತಿರುವ ಅತ್ಯಾಚಾರ, ಡ್ರಗ್ಸ್, ದರೋಡೆ ಇವು ಒಳ್ಳೆಯ ಕಾರಣವೇನು? ರೈತರ ಆತ್ಮಹತ್ಯೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಮುಂತಾದ ರೀತಿಯಲ್ಲಿ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿದೆ ಎಂದು ದೂರಿದರು. </p><p>‘ಗಾಂಧಿ ದೇಹಕ್ಕೆ ಗುಂಡೊಡೆದಿದ್ದು ಗೋಡ್ಸೆ, ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್. ಗಾಂಧಿ ತತ್ವ ಮದ್ಯಪಾನ ನಿಷೇಧ ಆಗಬೇಕು, ಆದರೆ ಇವರು ಕಿರಾಣಿ ಅಂಗಡಿಗಳೆಲ್ಲಾ ಅಕ್ರಮ ಮದ್ಯ ಸಿಗುವಂತೆ ಮಾಡಿದ್ದಾರೆ’ ಎಂದು ದೂರಿದರು.</p><p>‘ಗಾಂಧಿ ಸ್ವದೇಶಿಗೆ ಒತ್ತು ಕೊಟ್ಟರೆ, ಇವರ (ಕಾಂಗ್ರೆಸ್) ನಾಯಕತ್ವನೇ ವಿದೇಶಿ. ಗಾಂಧಿ ಪ್ರಾಮಾಣಿಕತೆಯ ಪ್ರತಿರೂಪವಾದರೆ ಇವತ್ತಿನ ಕಾಂಗ್ರೆಸ್ ಭ್ರಷ್ಟಾಚಾರದ ಪ್ರತಿರೂಪವಾಗಿ ಬದಲಾಗಿದೆ ಎಂದರು. </p><p>ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್, ಸದಾನಂದ, ಚಂದಗಾಲು ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ವಿವೇಕ್, ಇಂಡುವಾಳು ಸಚ್ಚಿದಾನಂದ, ಕೇಶವ್, ಸಿ.ಟಿ.ಮಂಜುನಾಥ್, ಒಬಿಸಿ ಆನಂದ್, ನಾಗನಂದ, ವೈರಮುಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>