ಮುಂಗಡವಾಗಿ ಮೊಟ್ಟೆ ಬಿಲ್, ತಿಂಗಳಿಗೆ ಸರಿಯಾಗಿ ಬಾಡಿಗೆ, ಗ್ಯಾಸ್, ಗೌರವಧನವನ್ನು ಪಾವತಿಸಬೇಕು. ಬಾಕಿ ಇರುವ ಅರಿಯರ್ಸ್, ಮರಣ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಹಾಯಕಿಯರಿಗೆ ಮುಂಬಡ್ತಿ ನೀಡುವಾಗ ಇರುವ ವಯಸ್ಸಿನ ಮಿತಿಯನ್ನು ತೆಗೆದು ಹಾಕಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹30ಸಾವಿರ, ಸಹಾಯಕಿಯರಿಗೆ ₹21ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.