ಈ ವಿಚಾರ ತಿಳಿದ ಶಾಸಕ ಸಿ.ಎಸ್.ಪುಟ್ಟರಾಜು ಸ್ಥಳಕ್ಕೆ ಬಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‘ಜಿಲ್ಲಾ ಸಮಿತಿ ತೀರ್ಮಾನದಂತೆ ಗಣಿ ಚಟುವಟಿಕೆಗೆ ಅವಕಾಶವಿದೆ. ರಾಜ್ಯ ಮಟ್ಟದ ಕಮಿಟಿಯಲ್ಲೂ ಸರ್ಕಾರದ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ನೀವು ಯಾವುದೋ ಬದನೆಕಾಯಿ ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ, ಗಾಡಿಗಳನ್ನು ಹಿಡಿದರೆ ನಾನು ಸುಮ್ಮನಿರುವುದಿಲ್ಲ’ ಎಂದರು. ನಂತರ ಅಧಿಕಾರಿಗಳು ಲಾರಿಗಳನ್ನು ಜಪ್ತಿ ಮಾಡದೆ, ಪ್ರಕರಣವನ್ನೂ ದಾಖಲಿಸದೆ ಬಿಟ್ಟು ಕಳುಹಿಸಿದರು.