ಮಂಡ್ಯ: ನಗರದ ಸಂಜಯ್ ವೃತ್ತದಲ್ಲಿ ರೈತರೊಬ್ಬರು ಮೊಬೈಲ್ ಟವರ್ ಏರಿ ಆತ್ಮಹತ್ಯೆಯ ಬೆದರಿಕೆ ಹಾಕಿದರು. ಅವರ ಮನವೊಲಿಸಿ ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟರು.
ಮದ್ದೂರು ತಾಲ್ಲೂಕು ಬಿದಿರಮೊಳೆ ಗ್ರಾಮದ ರೈತ ಮೋಹನ್ ಟವರ್ ಏರಿದವರು. ಬೆಕ್ಕಳಲೆ ಸಹಕಾರ ಬ್ಯಾಂಕ್ ನಲ್ಲಿರುವ ತನ್ನ ಕೃಷಿ ಸಾಲವನ್ನು ಉದ್ದೇಶಪೂರ್ವಕವಾಗಿ ಸಾಲ ಮನ್ನಾ ಯೋಜನೆಯಿಂದ ಹೊರಗಿಟ್ಟಿದ್ದಾರೆ ಎಂಬುದು ರೈತರ ಆರೋಪ.