<p><strong>ಮಂಡ್ಯ:</strong> ನಾಟಿ ಬೆಳ್ಳುಳ್ಳಿ ಬೆಲೆ ತೀವ್ರ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಕೆ.ಜಿಗೆ ₹400ರ ಗಡಿ ದಾಟಿದೆ. ಗ್ರಾಹಕರ ಜೇಬಿಗೆ ಭಾರವಾಗಿದ್ದು, ಕಂಗಾಲಾಗುವಂತೆ ಮಾಡಿದೆ. ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ತರಿಸಿದೆ.</p>.<p>ಬುಧವಾರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ₹400ಕ್ಕೆ ಮಾರಾಟವಾಗುತ್ತಿದೆ. ಫಾರಂ ಬೆಳ್ಳುಳ್ಳಿ ಬೆಲೆ ಕೂಡ ₹200 ದಾಟಿದೆ. ಸ್ಥಳೀಯ ರೈತರಿಂದ ಮಾರುಕಟ್ಟೆಗೆ ಬೆಳ್ಳುಳ್ಳಿ ಬರುತ್ತಿಲ್ಲ. ಜೊತೆಗೆ ಬೆಂಗಳೂರು, ಮೈಸೂರು ಮಾರುಕಟ್ಟೆಯಿಂದಲೂ ಮಾಲು ಬಾರದ ಕಾರಣ ಬೆಲೆಯು ತೀವ್ರಗತಿಯಲ್ಲಿ ಏರುತ್ತಿದೆ. ಬೆಲೆ ಏರಿಕೆಯಿಂದಾಗಿ ಕೆಲವು ವರ್ತಕರು ಬೆಳ್ಳುಳ್ಳಿ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ.</p>.<p>ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ₹100ಕ್ಕೆ 5 ಕೆ.ಜಿ ದೊರೆಯುತ್ತಿದೆ. ಕಳೆದ ವಾರವಷ್ಟೇ ನಾಲ್ಕು ಕೆ.ಜಿ.ಯಂತೆ ನೀಡಲಾಗುತ್ತಿತ್ತು. ಈ ವಾರ ಬೆಲೆ ಮತ್ತಷ್ಟು ಇಳಿಕೆ ಕಂಡಿದೆ. ಸ್ಥಳೀಯ ರೈತರು ಸೇರಿದಂತೆ ಹೊರಗಿನ ಮಾರುಕಟ್ಟೆಗಳಿಂದ ಅಪಾರ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಹರಿದು ಬರುತ್ತಿದ್ದು, ಬೆಲೆ ಇಳಿಕೆಗತಿಯಲ್ಲಿ ಸಾಗುತ್ತಿದೆ.</p>.<p>ಇನ್ನುಳಿದಂತೆ ತರಕಾರಿ ಬೆಲೆ ನಿಯಂತ್ರಣದಲ್ಲಿದೆ. ಟೊಮೆಟೊ ₹20, ಮಂಗಳೂರುಸೌತೆ, ಎಲೆಕೋಸು, ಬೂದುಗುಂಬಳ, ಬೆಂಡೆಕಾಯಿ, ಸಿಹಿಗುಂಬಳ, ಈರುಳ್ಳಿ ₹30, ಮರಗೆಣಸು, ಬೀಟ್ರೂಟ್, ಮೂಲಂಗಿ, ಹೂಕೋಸು, ಹಾಗಲಕಾಯಿ, ಸೌತೆಕಾಯಿ, ಫಾರಂಬೀನ್ಸ್, ಆಲೂಗೆಡ್ಡೆ, ಸಿಹಿಗೆಣಸು ₹40ರಂತೆ ಮಾರಾಟ ಮಾಡಲಾಗುತ್ತಿದೆ.</p>.<p>ಸೀಮೆಬದನೆಕಾಯಿ, ಕ್ಯಾರೆಟ್, ಬದನೆಕಾಯಿ, ಪಡವಲಕಾಯಿ, ಸೋರೆಕಾಯಿ ₹50, ಗೆಡ್ಡೆಕೋಸು, ದಪ್ಪಮೆಣಸಿನಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ತಗಣಿಕಾಯಿ, ಅವರೆಕಾಯಿ, ಹಸಿರು ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ನಾಟಿ ಬೀನ್ಸ್ ₹60, ರಾಜ್ಈರುಳ್ಳಿ, ಹಸಿಬಟಾಣಿ ₹150ರಂತೆ ಮಾರಾಟ ಮಾಡಲಾಗುತ್ತಿದೆ.</p>.<p>ಸೊಪ್ಪುಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಇಳಿಕೆ ಕಂಡಿದೆ. ಚಿಕ್ಕಿಸೊಪ್ಪು ₹30ಕ್ಕೆ ಒಂದು ಕಟ್ಟು ದೊರೆಯುತ್ತಿದ್ದು ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ₹5, ಪಾಲಾಕ್, ದಂಟು, ಕರಿಬೇವು, ಪುದಿನಾ, ಕೀರೆ ₹10, ಕಿಲ್ಕೀರೆ ₹15, ಫಾರಂ ಕೊತ್ತಂಬರಿ, ಮೆಂತೆ, ಚಿಕ್ಕಿಸೊಪ್ಪು ₹25– 30ರಂತೆ ಪ್ರತಿ ಕಂತೆಗೆ ಮಾರಾಟವಾಗುತ್ತಿವೆ.</p>.<p>ಹೂವುಗಳಲ್ಲಿ ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹40, ಸೇವಂತಿಗೆ ₹60, ಬಿಳಿ ಸೇವಂತಿ, ಬಟನ್ಸ್ ₹80, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ, ಸುಗಂಧರಾಜ, ಗಣಗಲೆ ₹150, ಕಾಕಡ ₹300, ಕನಕಾಂಬರ ₹800, ಮಲ್ಲಿಗೆ ₹1 ಸಾವಿರದಂತೆ ಮಾರಾಟವಾಗುತ್ತಿವೆ.</p>.<p>ಮಾರು ತುಳಸಿ ₹30, ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹40, ಸೇವಂತಿಗೆ ₹30– ₹40 ಗಣಗಲೆ, ಬಿಳಿಸೇವಂತಿಗೆ, ಬಟನ್ಸ್ ₹50, ಕಾಕಡ, ಮರಳೆ ₹70, ಕನಕಾಂಬರ, ಮಲ್ಲಿಗೆ ₹80– ₹100ರಂತೆ ದೊರೆಯುತ್ತಿವೆ.</p>.<p>ಹಣ್ಣುಗಳ ಬೆಲೆ ಸಾಧಾರಣವಾಗಿವೆ. ಅವುಗಳಲ್ಲಿ ಪಪ್ಪಾಯ ₹20, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಏಲಕ್ಕಿಬಾಳೆ, ಅನಾನಸ್ ₹50ರಿಂದ ₹55, ಸೀಬೆ, ಕಿತ್ತಳೆ ₹50ರಿಂದ ₹60, ಮೂಸಿಂಬೆ ₹70, ಕಂದ್ರಾಕ್ಷಿ ₹80, ಕಪ್ಪು ದ್ರಾಕ್ಷಿ, ಕಿವಿಹಣ್ಣು (ಬಾಕ್ಸ್) ₹100, ದಾಳಿಂಬೆ ₹160, ಡೆಲ್ಲಿ ಸೇಬು ₹180, ಶಿಮ್ಲಾ ಸೇಬು, ಶರತ್ ದ್ರಾಕ್ಷಿ ₹200ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾಗುತ್ತಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಾಟಿ ಬೆಳ್ಳುಳ್ಳಿ ಬೆಲೆ ತೀವ್ರ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಕೆ.ಜಿಗೆ ₹400ರ ಗಡಿ ದಾಟಿದೆ. ಗ್ರಾಹಕರ ಜೇಬಿಗೆ ಭಾರವಾಗಿದ್ದು, ಕಂಗಾಲಾಗುವಂತೆ ಮಾಡಿದೆ. ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ತರಿಸಿದೆ.</p>.<p>ಬುಧವಾರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ₹400ಕ್ಕೆ ಮಾರಾಟವಾಗುತ್ತಿದೆ. ಫಾರಂ ಬೆಳ್ಳುಳ್ಳಿ ಬೆಲೆ ಕೂಡ ₹200 ದಾಟಿದೆ. ಸ್ಥಳೀಯ ರೈತರಿಂದ ಮಾರುಕಟ್ಟೆಗೆ ಬೆಳ್ಳುಳ್ಳಿ ಬರುತ್ತಿಲ್ಲ. ಜೊತೆಗೆ ಬೆಂಗಳೂರು, ಮೈಸೂರು ಮಾರುಕಟ್ಟೆಯಿಂದಲೂ ಮಾಲು ಬಾರದ ಕಾರಣ ಬೆಲೆಯು ತೀವ್ರಗತಿಯಲ್ಲಿ ಏರುತ್ತಿದೆ. ಬೆಲೆ ಏರಿಕೆಯಿಂದಾಗಿ ಕೆಲವು ವರ್ತಕರು ಬೆಳ್ಳುಳ್ಳಿ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ.</p>.<p>ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ₹100ಕ್ಕೆ 5 ಕೆ.ಜಿ ದೊರೆಯುತ್ತಿದೆ. ಕಳೆದ ವಾರವಷ್ಟೇ ನಾಲ್ಕು ಕೆ.ಜಿ.ಯಂತೆ ನೀಡಲಾಗುತ್ತಿತ್ತು. ಈ ವಾರ ಬೆಲೆ ಮತ್ತಷ್ಟು ಇಳಿಕೆ ಕಂಡಿದೆ. ಸ್ಥಳೀಯ ರೈತರು ಸೇರಿದಂತೆ ಹೊರಗಿನ ಮಾರುಕಟ್ಟೆಗಳಿಂದ ಅಪಾರ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಹರಿದು ಬರುತ್ತಿದ್ದು, ಬೆಲೆ ಇಳಿಕೆಗತಿಯಲ್ಲಿ ಸಾಗುತ್ತಿದೆ.</p>.<p>ಇನ್ನುಳಿದಂತೆ ತರಕಾರಿ ಬೆಲೆ ನಿಯಂತ್ರಣದಲ್ಲಿದೆ. ಟೊಮೆಟೊ ₹20, ಮಂಗಳೂರುಸೌತೆ, ಎಲೆಕೋಸು, ಬೂದುಗುಂಬಳ, ಬೆಂಡೆಕಾಯಿ, ಸಿಹಿಗುಂಬಳ, ಈರುಳ್ಳಿ ₹30, ಮರಗೆಣಸು, ಬೀಟ್ರೂಟ್, ಮೂಲಂಗಿ, ಹೂಕೋಸು, ಹಾಗಲಕಾಯಿ, ಸೌತೆಕಾಯಿ, ಫಾರಂಬೀನ್ಸ್, ಆಲೂಗೆಡ್ಡೆ, ಸಿಹಿಗೆಣಸು ₹40ರಂತೆ ಮಾರಾಟ ಮಾಡಲಾಗುತ್ತಿದೆ.</p>.<p>ಸೀಮೆಬದನೆಕಾಯಿ, ಕ್ಯಾರೆಟ್, ಬದನೆಕಾಯಿ, ಪಡವಲಕಾಯಿ, ಸೋರೆಕಾಯಿ ₹50, ಗೆಡ್ಡೆಕೋಸು, ದಪ್ಪಮೆಣಸಿನಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ತಗಣಿಕಾಯಿ, ಅವರೆಕಾಯಿ, ಹಸಿರು ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ನಾಟಿ ಬೀನ್ಸ್ ₹60, ರಾಜ್ಈರುಳ್ಳಿ, ಹಸಿಬಟಾಣಿ ₹150ರಂತೆ ಮಾರಾಟ ಮಾಡಲಾಗುತ್ತಿದೆ.</p>.<p>ಸೊಪ್ಪುಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಇಳಿಕೆ ಕಂಡಿದೆ. ಚಿಕ್ಕಿಸೊಪ್ಪು ₹30ಕ್ಕೆ ಒಂದು ಕಟ್ಟು ದೊರೆಯುತ್ತಿದ್ದು ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ₹5, ಪಾಲಾಕ್, ದಂಟು, ಕರಿಬೇವು, ಪುದಿನಾ, ಕೀರೆ ₹10, ಕಿಲ್ಕೀರೆ ₹15, ಫಾರಂ ಕೊತ್ತಂಬರಿ, ಮೆಂತೆ, ಚಿಕ್ಕಿಸೊಪ್ಪು ₹25– 30ರಂತೆ ಪ್ರತಿ ಕಂತೆಗೆ ಮಾರಾಟವಾಗುತ್ತಿವೆ.</p>.<p>ಹೂವುಗಳಲ್ಲಿ ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹40, ಸೇವಂತಿಗೆ ₹60, ಬಿಳಿ ಸೇವಂತಿ, ಬಟನ್ಸ್ ₹80, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ, ಸುಗಂಧರಾಜ, ಗಣಗಲೆ ₹150, ಕಾಕಡ ₹300, ಕನಕಾಂಬರ ₹800, ಮಲ್ಲಿಗೆ ₹1 ಸಾವಿರದಂತೆ ಮಾರಾಟವಾಗುತ್ತಿವೆ.</p>.<p>ಮಾರು ತುಳಸಿ ₹30, ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹40, ಸೇವಂತಿಗೆ ₹30– ₹40 ಗಣಗಲೆ, ಬಿಳಿಸೇವಂತಿಗೆ, ಬಟನ್ಸ್ ₹50, ಕಾಕಡ, ಮರಳೆ ₹70, ಕನಕಾಂಬರ, ಮಲ್ಲಿಗೆ ₹80– ₹100ರಂತೆ ದೊರೆಯುತ್ತಿವೆ.</p>.<p>ಹಣ್ಣುಗಳ ಬೆಲೆ ಸಾಧಾರಣವಾಗಿವೆ. ಅವುಗಳಲ್ಲಿ ಪಪ್ಪಾಯ ₹20, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಏಲಕ್ಕಿಬಾಳೆ, ಅನಾನಸ್ ₹50ರಿಂದ ₹55, ಸೀಬೆ, ಕಿತ್ತಳೆ ₹50ರಿಂದ ₹60, ಮೂಸಿಂಬೆ ₹70, ಕಂದ್ರಾಕ್ಷಿ ₹80, ಕಪ್ಪು ದ್ರಾಕ್ಷಿ, ಕಿವಿಹಣ್ಣು (ಬಾಕ್ಸ್) ₹100, ದಾಳಿಂಬೆ ₹160, ಡೆಲ್ಲಿ ಸೇಬು ₹180, ಶಿಮ್ಲಾ ಸೇಬು, ಶರತ್ ದ್ರಾಕ್ಷಿ ₹200ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾಗುತ್ತಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>