ಬ್ರಿಟಿಷರು ಬಂದಿದ್ದರಿಂದ ಒಳ್ಳೆಯದೂ ಆಗಿದೆ ಕೆಟ್ಟದ್ದೂ ಆಗಿದೆ. ಫ್ರೇಸರ್ ನೀಡಿದ ಶಿಕ್ಷಣದಿಂದ ಸಾಕಷ್ಟು ಒಳ್ಳೆಯದು ಆಗಿದೆ. ಬೆಂಗಳೂರಿನ ಫ್ರೇಸರ್ ಟೌನ್ ಹೆಸರು ಬದಲಿಸಿ ಅದನ್ನು ಪುಲಕೇಶಿನಗರ ಮಾಡಿದ್ದೇವೆ. ಅಂದು ರಾಜರು ಜನತೆಯ ಶತ್ರುವಾಗಿದ್ದರು. ರಾಜರು, ಪುರೋಹಿತರು ಮೇಲು ಕೀಳು ಹೇಳುವ ಪಾತಕಿಗಳಾಗಿದ್ದರು. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಫ್ರೇಸರ್ ಅವರು ನಾಲ್ವಡಿ ಅವರನ್ನು ಸಂತೆ, ಜಾತ್ರೆ, ದಲಿತ ಕೇರಿಗೆ ಕರೆದುಕೊಂಡು ಹೋಗುತ್ತಿದ್ದರು. ದಲಿತರಿಗೆ ಶಿಕ್ಷಣ ನೀಡಿದ್ದರು. ರಾಜರು ಪಾವನ ಆಗುವುದನ್ನು ಹೇಳಿಕೊಟ್ಟಿದ್ದರು ಎಂದು ಬಣ್ಣಿಸಿದರು.