ಬತ್ತಿದ್ದ ಲೋಕಪಾವನಿ, ವೀರವೈಷ್ಣವಿ: ಪ್ರತಿ ವರ್ಷವೂ ವಾಡಿಕೆಯಷ್ಟು ಮಳೆಯಾದಾಗ ವೀರವೈಷ್ಣವಿ ಮತ್ತು ಲೋಕಪಾವನಿ ನದಿ ಮೂಲಗಳ ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆ ನಿರ್ವಹಣೆಗೆ ರೈತರಿಗೆ ಸಹಕಾರಿಯಾಗುತ್ತಿದ್ದು, ಅಂತರ್ಜಲ ಮಟ್ಟವೂ ಸುಧಾರಿಸುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತಲೂ ಅತ್ಯಂತ ಕನಿಷ್ಠ ಮಳೆಯಾಗಿದ್ದು, ನದಿ ಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿತ್ತು.