ಪ್ರಾಧಿಕಾರ ರಚನೆ ಸರಿಯಲ್ಲ: ಕರ್ನಾಟಕವು ನಿಜಲಿಂಗಪ್ಪ, ಚಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ ಏಕೀಕರಣವಾಗಿ, ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ರಚನೆಯಾಗಿದ್ದು, ಕರ್ನಾಟಕ ಅಖಂಡವಾಗಿರಬೇಕು ಎಂದು ಕನ್ನಡಿಗರ ಬಯಕೆಯಾಗಿದೆ. ಆದ್ದರಿಂದ ಅದಕ್ಕೆ ಚ್ಯುತಿಯಾಗುವ ಕೆಲಸವನ್ನು ಮಾಡಬಾರದು. ಬೆಳಗಾವಿಯಲ್ಲಿ ನಾಡುನುಡಿಯ ಬಗ್ಗೆ ಆಗಿಂದಾಗ್ಗೆ ಗಲಾಟೆ ನಡೆಯುತ್ತಿರುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಯಾವುದೋ ಘಳಿಗೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಮತ್ತೆ ವಿಮರ್ಶಿಸಬೇಕು ಎಂದರು.