<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ‘ನಮಗೆ ಜನ್ಮ ಕೊಟ್ಟ ತಂದೆ–ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳು ದೇವರಿಗೆ ಸಮಾನರಾದವರು ಎಂಬುದನ್ನು ಸನಾತನ ಹಿಂದೂ ಧರ್ಮ ಸಾರಿ ಹೇಳುತ್ತದೆ’ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. </p>.<p>ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬಿ.ಜಿ.ಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸರ್ವಧರ್ಮ ಸಮ್ಮೇಳನ’ದಲ್ಲಿ ಹಿಂದೂ ಧರ್ಮದ ಕುರಿತ ಉಪನ್ಯಾಸ ನೀಡಿದರು. </p>.<p>‘ವಸುದೈವ ಕುಟುಂಬಕಂ’ ಎಂದರೆ ಜಗತ್ತು ಒಂದು ಕುಟುಂಬ, ವಿವಿಧ ಧರ್ಮಗಳ ಸಮನ್ವಯದಿಂದ ಎಲ್ಲರೂ ಶಾಂತಿಯುತ ಬದುಕು ನಡೆಸಬೇಕು ಎಂಬ ಆಶಯದಿಂದ ಬಾಲಗಂಗಾಧರನಾಥ ಸ್ವಾಮೀಜಿ ‘ಸರ್ವಧರ್ಮ ಸಮ್ಮೇಳನ’ ಆರಂಭಿಸಿದರು’ ಎಂದರು. </p>.<p>‘ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಆತ್ಮವನ್ನು ಅಸ್ತ್ರಗಳಿಂದ ಕೊಲ್ಲಲು ಸಾಧ್ಯವಿಲ್ಲ. ಹಿಂದೂ ಧರ್ಮ ಪ್ರಾರಂಭವಾಗಿದ್ದು ಪ್ರಕೃತಿಯಿಂದ. ಆ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮದ ಎಲ್ಲಾ ಆರಾಧನೆಗಳು ಪಂಚಭೂತಗಳಿಂದ ಆಗಿದೆ. ನಾವು ಮಾಡುವು ಆಚಾರ ವಿಚಾರಗಳನ್ನೇ ಧರ್ಮ ಎಂದು ಕರೆಯಲಾಗುತ್ತದೆ’ ಎಂದು ಪ್ರತಿಪಾದಿಸಿದರು.</p>.<p>ಬೆಂಗಳೂರಿನ ಮಹಾಬೋಧಿ ಸಂಶೋಧನಾ ಕೇಂದ್ರದ ಮಾರ್ಗದರ್ಶಕ ರಾಜೇಂದ್ರ ಸುಪನ್ಯೋ ಮಾತನಾಡಿ, ‘ವಸುದೈವ ಕುಟುಂಬದಲ್ಲಿ ಅರಳಿದ ಕಮಲ ಬುದ್ಧ. ಯಾರು ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುತ್ತಾರೋ ಅವರೇ ಬುದ್ಧರು’ ಎಂದರು. </p>.<p>ಜೈನ ಧರ್ಮದ ಕುರಿತು ಶ್ರವಣಬೆಳಗೊಳ ದಿಗಂಬರ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ರೈಸ್ತ ಧರ್ಮದ ಕುರಿತು ರೆವರೆಂಡ್ ಫಾದರ್ ಸ್ಟ್ಯಾನಿ ಡಿಸೋಜಾ ಮತ್ತು ಇಸ್ಲಾಂ ಧರ್ಮದ ಬಗ್ಗೆ, ಉಡುಪಿಯ ಉಪನ್ಯಾಸಕ ಮಹಮದ್ ಸಾದ್ವಿಕ್ ಧರ್ಮಗಳ ಸಾರವನ್ನು ತಿಳಿಸಿದರು. </p>.<p>ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುರುಷೋತ್ತಮಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಶೇಖರನಾಥ ಸ್ವಾಮೀಜಿ, ಸತ್ಕೀರ್ತಿನಾಥ ಮತ್ತು ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ‘ನಮಗೆ ಜನ್ಮ ಕೊಟ್ಟ ತಂದೆ–ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳು ದೇವರಿಗೆ ಸಮಾನರಾದವರು ಎಂಬುದನ್ನು ಸನಾತನ ಹಿಂದೂ ಧರ್ಮ ಸಾರಿ ಹೇಳುತ್ತದೆ’ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. </p>.<p>ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬಿ.ಜಿ.ಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸರ್ವಧರ್ಮ ಸಮ್ಮೇಳನ’ದಲ್ಲಿ ಹಿಂದೂ ಧರ್ಮದ ಕುರಿತ ಉಪನ್ಯಾಸ ನೀಡಿದರು. </p>.<p>‘ವಸುದೈವ ಕುಟುಂಬಕಂ’ ಎಂದರೆ ಜಗತ್ತು ಒಂದು ಕುಟುಂಬ, ವಿವಿಧ ಧರ್ಮಗಳ ಸಮನ್ವಯದಿಂದ ಎಲ್ಲರೂ ಶಾಂತಿಯುತ ಬದುಕು ನಡೆಸಬೇಕು ಎಂಬ ಆಶಯದಿಂದ ಬಾಲಗಂಗಾಧರನಾಥ ಸ್ವಾಮೀಜಿ ‘ಸರ್ವಧರ್ಮ ಸಮ್ಮೇಳನ’ ಆರಂಭಿಸಿದರು’ ಎಂದರು. </p>.<p>‘ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಆತ್ಮವನ್ನು ಅಸ್ತ್ರಗಳಿಂದ ಕೊಲ್ಲಲು ಸಾಧ್ಯವಿಲ್ಲ. ಹಿಂದೂ ಧರ್ಮ ಪ್ರಾರಂಭವಾಗಿದ್ದು ಪ್ರಕೃತಿಯಿಂದ. ಆ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮದ ಎಲ್ಲಾ ಆರಾಧನೆಗಳು ಪಂಚಭೂತಗಳಿಂದ ಆಗಿದೆ. ನಾವು ಮಾಡುವು ಆಚಾರ ವಿಚಾರಗಳನ್ನೇ ಧರ್ಮ ಎಂದು ಕರೆಯಲಾಗುತ್ತದೆ’ ಎಂದು ಪ್ರತಿಪಾದಿಸಿದರು.</p>.<p>ಬೆಂಗಳೂರಿನ ಮಹಾಬೋಧಿ ಸಂಶೋಧನಾ ಕೇಂದ್ರದ ಮಾರ್ಗದರ್ಶಕ ರಾಜೇಂದ್ರ ಸುಪನ್ಯೋ ಮಾತನಾಡಿ, ‘ವಸುದೈವ ಕುಟುಂಬದಲ್ಲಿ ಅರಳಿದ ಕಮಲ ಬುದ್ಧ. ಯಾರು ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುತ್ತಾರೋ ಅವರೇ ಬುದ್ಧರು’ ಎಂದರು. </p>.<p>ಜೈನ ಧರ್ಮದ ಕುರಿತು ಶ್ರವಣಬೆಳಗೊಳ ದಿಗಂಬರ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ರೈಸ್ತ ಧರ್ಮದ ಕುರಿತು ರೆವರೆಂಡ್ ಫಾದರ್ ಸ್ಟ್ಯಾನಿ ಡಿಸೋಜಾ ಮತ್ತು ಇಸ್ಲಾಂ ಧರ್ಮದ ಬಗ್ಗೆ, ಉಡುಪಿಯ ಉಪನ್ಯಾಸಕ ಮಹಮದ್ ಸಾದ್ವಿಕ್ ಧರ್ಮಗಳ ಸಾರವನ್ನು ತಿಳಿಸಿದರು. </p>.<p>ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುರುಷೋತ್ತಮಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಶೇಖರನಾಥ ಸ್ವಾಮೀಜಿ, ಸತ್ಕೀರ್ತಿನಾಥ ಮತ್ತು ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>