ಮಂಡ್ಯ: ‘ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪೋನ್ ಕದ್ದಾಲಿಕೆ ಮಾಡಿರುವುದು ಪಾಪದ ಕೆಲಸ. ನಾನು ಸ್ವಾಮೀಜಿಗಳ ಕ್ಷಮೆ ಕೋರುತ್ತೇನೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿರುವುದು ನನಗೆ ಆಘಾತ ಉಂಟು ಮಾಡಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ದೇವರೇ ಶಿಕ್ಷೆ ನೀಡಲಿದ್ದಾನೆ’ ಎಂದರು.