<p><strong>ನಾಗಮಂಗಲ</strong>: ‘ನಾವು ಗುರಿ ಸಾಧಿಸಲು ಹೊರಟಾಗ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟುವ ಜನರಿಗಿಂತ ಟೀಕಿಸುವ ಜನರೇ ಹೆಚ್ಚಿರುತ್ತಾರೆ. ಟೀಕೆಗಳನ್ನು ನಿರ್ಲಕ್ಷಿಸಿ ಮುನ್ನಡೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಸಾಧ್ಯ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ ವಿತರಣಾ ಮುಖ್ಯಸ್ಥ ಅಂಬುಜಾಕ್ಷನ್ ನಾಯರ್ ಹೇಳಿದರು.</p>.<p>ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ, ಉದ್ಯೋಗ ಮಾಹಿತಿ ಕೋಶ, ಐಕ್ಯುಎಸಿ ವಿಭಾಗ, ಟಿಸಿಎಸ್, ಸಿಎಸ್ಆರ್ ಯೂತ್ ಎಂಪ್ಲಾಯ್ಮೆಂಟ್ ಘಟಕ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಗ್ರಾಮೀಣ ಸಂಸ್ಕೃತಿಯು ನೈಜ ಸಂಸ್ಕೃತಿಯಾಗಿದ್ದು, ಮನಸ್ಸುಗಳ ಮತ್ತು ಸಮಾಜದ ನಡುವೆ, ನಂಬಿಕೆ ನಿರ್ಮಾಣವಾಗಬೇಕು. ಉದ್ಯೋಗ ವನ್ನು ಅರಸಿ ಹೊರಟಾಗ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳಬೇಕು ಎಂದರು.</p>.<p>ಅವಕಾಶಗಳು, ತರಬೇತಿ, ಸಮಾಜ ಸೇವೆ ಲಕುರಿತು ಅವರು ವಿವರಿಸಿದರು.</p>.<p>ಶೃಂಗೇರಿ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಹಾಸನದ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಜೀವನದಲ್ಲಿ ಗುರಿ ಸಾಧನೆಗೆ ಕೌಶಲ್ಯ ಅಗತ್ಯವಾಗಿದೆ. ಕೌಶಲವೇ ಜೀವನದ ಸಾರತಿಯಾಗಿರುತ್ತದೆ. ಸ್ಪರ್ಧಾತ್ಮಕ ಯುಗಕ್ಕೆ ಯುವ ಪೀಳಿಗೆಯನ್ನು ಸಜ್ಜುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.</p>.<p>ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎಚ್.ಟಿ.ಕೃಷ್ಟೇಗೌಡ, ವಿವೇಕ್ ಜವಲಗಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೋಶ ವಿಭಾಗದ ಡಾ.ಎಂ.ರವಿಕುಮಾರ್, ಎಂ.ಗುಣವತಿ, ಕೆ.ಬಿ.ಚಂದ್ರಕಲಾ, ಶರತ್ ಬಾಬು, ಎನ್.ಆರ್.ವೇದವತಿ, ಆರ್.ಮೋಹನ್ ಕುಮಾರ್, ಇಂದುಶ್ರೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ</strong>: ‘ನಾವು ಗುರಿ ಸಾಧಿಸಲು ಹೊರಟಾಗ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟುವ ಜನರಿಗಿಂತ ಟೀಕಿಸುವ ಜನರೇ ಹೆಚ್ಚಿರುತ್ತಾರೆ. ಟೀಕೆಗಳನ್ನು ನಿರ್ಲಕ್ಷಿಸಿ ಮುನ್ನಡೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಸಾಧ್ಯ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ ವಿತರಣಾ ಮುಖ್ಯಸ್ಥ ಅಂಬುಜಾಕ್ಷನ್ ನಾಯರ್ ಹೇಳಿದರು.</p>.<p>ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ, ಉದ್ಯೋಗ ಮಾಹಿತಿ ಕೋಶ, ಐಕ್ಯುಎಸಿ ವಿಭಾಗ, ಟಿಸಿಎಸ್, ಸಿಎಸ್ಆರ್ ಯೂತ್ ಎಂಪ್ಲಾಯ್ಮೆಂಟ್ ಘಟಕ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಗ್ರಾಮೀಣ ಸಂಸ್ಕೃತಿಯು ನೈಜ ಸಂಸ್ಕೃತಿಯಾಗಿದ್ದು, ಮನಸ್ಸುಗಳ ಮತ್ತು ಸಮಾಜದ ನಡುವೆ, ನಂಬಿಕೆ ನಿರ್ಮಾಣವಾಗಬೇಕು. ಉದ್ಯೋಗ ವನ್ನು ಅರಸಿ ಹೊರಟಾಗ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳಬೇಕು ಎಂದರು.</p>.<p>ಅವಕಾಶಗಳು, ತರಬೇತಿ, ಸಮಾಜ ಸೇವೆ ಲಕುರಿತು ಅವರು ವಿವರಿಸಿದರು.</p>.<p>ಶೃಂಗೇರಿ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಹಾಸನದ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಜೀವನದಲ್ಲಿ ಗುರಿ ಸಾಧನೆಗೆ ಕೌಶಲ್ಯ ಅಗತ್ಯವಾಗಿದೆ. ಕೌಶಲವೇ ಜೀವನದ ಸಾರತಿಯಾಗಿರುತ್ತದೆ. ಸ್ಪರ್ಧಾತ್ಮಕ ಯುಗಕ್ಕೆ ಯುವ ಪೀಳಿಗೆಯನ್ನು ಸಜ್ಜುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.</p>.<p>ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎಚ್.ಟಿ.ಕೃಷ್ಟೇಗೌಡ, ವಿವೇಕ್ ಜವಲಗಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೋಶ ವಿಭಾಗದ ಡಾ.ಎಂ.ರವಿಕುಮಾರ್, ಎಂ.ಗುಣವತಿ, ಕೆ.ಬಿ.ಚಂದ್ರಕಲಾ, ಶರತ್ ಬಾಬು, ಎನ್.ಆರ್.ವೇದವತಿ, ಆರ್.ಮೋಹನ್ ಕುಮಾರ್, ಇಂದುಶ್ರೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>