ಮಡಿಕೇರಿ: ನಗರದ ಆಕಾಶವಾಣಿ ಬಳಿ ಮಣ್ಣು ಕುಸಿದಿದ್ದು 7 ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಣ್ಣು ತೇವಗೊಂಡು ಮಂಗಳವಾರ ದಿಢೀರ್ ಕುಸಿದಿದೆ.
2018ರಲ್ಲೂ ಇದೇ ಸ್ಥಳದಲ್ಲಿ ಗುಡ್ಡ ಕುಸಿದಿತ್ತು. ಆಕಾಶವಾಣಿ ಟವರ್ಗೆ ಹಾನಿಯಾಗದಂತೆ ಮಣ್ಣು ಕುಸಿದಿದ್ದ ಸ್ಥಳದಲ್ಲಿ ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ.
ಮಣ್ಣು ಕುಸಿಯುತ್ತಿದ್ದನ್ನು ಕಂಡ ಕಾರ್ಮಿಕರು ರಸ್ತೆಗೆ ಓಡಿಬಂದ ಪರಿಣಾಮ ದುರಂತ ತಪ್ಪಿದೆ. ಅಪಾಯದ ಅರಿವಿದ್ದರೂ ತಡೆಗೋಡೆ ನಿರ್ಮಾಣ ಕಾಮಗಾರಿ ವಿಳಂಬ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ನನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.