ಭಾರತೀನಗರ: ಸಾಂಬಾರ್ ಪಾತ್ರೆಗೆ ಹಲ್ಲಿ ಬಿದ್ದಿರುವುದನ್ನು ಗಮನಿಸದೆ, ಇಲ್ಲಿನ ಅಂಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ಬಡಿಸಿದ ಬಿಸಿಯೂಟ ಸೇವಿಸಿದ 29 ಮಕ್ಕಳು ಅಸ್ವಸ್ಥರಾಗಿ ಮಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳು ವಾಂತಿ ಮಾಡಿಕೊಂಡ ಕೂಡಲೇ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಿದರು.
‘ಸಾಂಬಾರಿಗೆ ಹಲ್ಲಿ ಬಿದ್ದಿರುವುದು ಅರಿವಿಗೆ ಬರದೆ ಘಟನೆ ಜರುಗಿದೆ. ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದು ಶಿಕ್ಷಕ ಮಹೇಶ್ ಹೇಳಿದರು.