‘ಕರ್ಣಾಟಕ ಬ್ಯಾಂಕ್ನಲ್ಲಿ ₹2 ಲಕ್ಷ ಸಾಲ ಹಾಗೂ ಕೈಸಾಲ ಸೇರಿ ₹3.60 ಲಕ್ಷ ಖರ್ಚು ಮಾಡಿದ್ದೆ. ಗೌರಿ– ಗಣೇಶ ಹಬ್ಬದಲ್ಲಿ ಉತ್ತಮ ಲಾಭ ಸಿಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಕೆ.ಜಿ. ಹೂವು ₹10ನಂತೆ ಮಾರಾಟವಾಗುತ್ತಿದೆ. ಬಂಡವಾಳವೂ ಕೈಸೇರುವ ಸಾಧ್ಯತೆ ಇಲ್ಲ. ಹೀಗಾಗಿ, ಬೆಳೆಯನ್ನು ನಾಶಪಡಿಸಿದ್ದೇನೆ. ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ಯೋಗರಾಜು ಕೋರಿದರು.