ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ | ಬೆಲೆ ಕುಸಿತ: ಸೇವಂತಿಗೆ ಬೆಳೆ ನಾಶಪಡಿಸಿದ ರೈತ

Published 20 ಸೆಪ್ಟೆಂಬರ್ 2023, 14:52 IST
Last Updated 20 ಸೆಪ್ಟೆಂಬರ್ 2023, 14:52 IST
ಅಕ್ಷರ ಗಾತ್ರ

ಮೇಲುಕೋಟೆ: ಸೇವಂತಿಗೆ ಹೂವಿನ ಬೆಲೆ ಕುಸಿತದಿಂದ ಕಂಗಾಲಾದ ಹೋಬಳಿಯ ಸುಂಕಾತೊಣ್ಣೂರು ರೈತ ಎಸ್.ಡಿ. ಯೋಗರಾಜು ಅವರು ಕಂಚನಹಳ್ಳಿ ಬಳಿ 2 ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಬೆಳೆಯನ್ನು ಬುಧವಾರ ರೋಟವೇಟರ್ ಬಳಸಿ ನಾಶಪಡಿಸಿದರು.

‘ಕರ್ಣಾಟಕ ಬ್ಯಾಂಕ್‌ನಲ್ಲಿ ₹2 ಲಕ್ಷ ಸಾಲ ಹಾಗೂ ಕೈಸಾಲ ಸೇರಿ ₹3.60 ಲಕ್ಷ ಖರ್ಚು ಮಾಡಿದ್ದೆ. ಗೌರಿ– ಗಣೇಶ ಹಬ್ಬದಲ್ಲಿ ಉತ್ತಮ ಲಾಭ ಸಿಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಕೆ.ಜಿ. ಹೂವು ₹10ನಂತೆ ಮಾರಾಟವಾಗುತ್ತಿದೆ. ಬಂಡವಾಳವೂ ಕೈಸೇರುವ ಸಾಧ್ಯತೆ ಇಲ್ಲ. ಹೀಗಾಗಿ, ಬೆಳೆಯನ್ನು ನಾಶಪಡಿಸಿದ್ದೇನೆ. ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ಯೋಗರಾಜು ಕೋರಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ನಿರ್ದೇಶಕಿ ಸೌಮ್ಯಾ ಎಸ್.ಪಿ, ‘ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ನಾಶವಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಬೆಲೆ ಕುಸಿತದಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ಬೆಳೆದಿರುವುದರಿಂದ ಬೆಲೆ ಕುಸಿತ ಉಂಟಾಗಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ಸಿಗಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT