ತಾಲ್ಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಇಲ್ಲ, ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ಸರ್ಕಾರದ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಶಂಕರ್ (ಪ್ರಭಾರ), ಪುರಸಭಾ ಸದಸ್ಯೆ ಸರ್ವಮಂಗಳ, ಇಲಾಖೆಯ ಸಿಬ್ಬಂದಿ ಉಮೇಶ್, ಶ್ರೀನಿವಾಸ್ ಜತೆಗಿದ್ದರು.