<p><strong>ಮಂಡ್ಯ</strong>: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಮತ್ತು ವಿಶೇಷ ಸವಲತ್ತುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಸ್ವಾಗತಿಸಿದ ಮಂಡ್ಯ ಬಾಡೂಟ ಬಳಗದ ಕಾರ್ಯಕರ್ತರು ನಗರದಲ್ಲಿ ಚಿಕನ್ ಕಬಾಬ್ ಹಂಚಿ ತಿಂದು ಶನಿವಾರ ಸಂಭ್ರಮಿಸಿದರು.</p>.<p>‘ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿದ ಬಾಡೂಟ ಬಳಗದವರು ಘೋಷಣೆಗಳನ್ನು ಕೂಗಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಪರ ಕೆಲಸಗಳಲ್ಲಿ ತೊಡಗಬೇಕಾದ ಜೋಶಿ ಅವರು ಬೈಲಾ ತಿದ್ದುಪಡಿ ಮೂಲಕ ಸರ್ವಾಧಿಕಾರಿಯಾಗಲು ಹೊರಟಿದ್ದರು’ ಎಂದು ಬಳಗದ ಎಂ.ಬಿ. ನಾಗಣ್ಣಗೌಡ ಆರೋಪಿಸಿದರು.</p>.<p>ಬಳಗದ ತಿಮ್ಮೇಗೌಡ ಮಾತನಾಡಿ, ‘ಜೋಶಿಯವರ ವಿರುದ್ದ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಸಹ ನಡೆದಿತ್ತು. ಹಾಗಾಗಿ ರಾಜ್ಯ ಸರ್ಕಾರ ಜೋಶಿ ಅವರ ಸಂಪುಟ ಸ್ಥಾನಮಾನ ಹಿಂಪಡೆದಿದೆ. ಈ ಹಿನ್ನಲೆಯಲ್ಲಿ ನಮ್ಮ ಬಳಗದ ಸದಸ್ಯರೆಲ್ಲರೂ ಒಂದಗೂಡಿ ಸಾರ್ವಜನಿಕರಿಗೆ ಕಬಾಬು ಹಂಚುತ್ತಿದ್ದೇವೆ, ಈಗಲಾದರೂ ಜೋಶಿ ಅವರು ಕನ್ನಡದ ಕೆಲಸ ಮಾಡಿಕೊಂಡ ಹೋಗಬೇಕು’ ಎಂದು ಸಲಹೆ ನೀಡಿದರು.</p>.<p>ಮುಖಂಡರಾದ ತಿಮ್ಮೇಗೌಡ, ಶ್ರೀಕಾಂತ್, ಎಂ.ವಿ.ಕೃಷ್ಣ, ಟಿ.ಡಿ.ನಾಗರಾಜು ಭಾಗವಹಿಸಿದ್ದುರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಮತ್ತು ವಿಶೇಷ ಸವಲತ್ತುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಸ್ವಾಗತಿಸಿದ ಮಂಡ್ಯ ಬಾಡೂಟ ಬಳಗದ ಕಾರ್ಯಕರ್ತರು ನಗರದಲ್ಲಿ ಚಿಕನ್ ಕಬಾಬ್ ಹಂಚಿ ತಿಂದು ಶನಿವಾರ ಸಂಭ್ರಮಿಸಿದರು.</p>.<p>‘ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿದ ಬಾಡೂಟ ಬಳಗದವರು ಘೋಷಣೆಗಳನ್ನು ಕೂಗಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಪರ ಕೆಲಸಗಳಲ್ಲಿ ತೊಡಗಬೇಕಾದ ಜೋಶಿ ಅವರು ಬೈಲಾ ತಿದ್ದುಪಡಿ ಮೂಲಕ ಸರ್ವಾಧಿಕಾರಿಯಾಗಲು ಹೊರಟಿದ್ದರು’ ಎಂದು ಬಳಗದ ಎಂ.ಬಿ. ನಾಗಣ್ಣಗೌಡ ಆರೋಪಿಸಿದರು.</p>.<p>ಬಳಗದ ತಿಮ್ಮೇಗೌಡ ಮಾತನಾಡಿ, ‘ಜೋಶಿಯವರ ವಿರುದ್ದ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಸಹ ನಡೆದಿತ್ತು. ಹಾಗಾಗಿ ರಾಜ್ಯ ಸರ್ಕಾರ ಜೋಶಿ ಅವರ ಸಂಪುಟ ಸ್ಥಾನಮಾನ ಹಿಂಪಡೆದಿದೆ. ಈ ಹಿನ್ನಲೆಯಲ್ಲಿ ನಮ್ಮ ಬಳಗದ ಸದಸ್ಯರೆಲ್ಲರೂ ಒಂದಗೂಡಿ ಸಾರ್ವಜನಿಕರಿಗೆ ಕಬಾಬು ಹಂಚುತ್ತಿದ್ದೇವೆ, ಈಗಲಾದರೂ ಜೋಶಿ ಅವರು ಕನ್ನಡದ ಕೆಲಸ ಮಾಡಿಕೊಂಡ ಹೋಗಬೇಕು’ ಎಂದು ಸಲಹೆ ನೀಡಿದರು.</p>.<p>ಮುಖಂಡರಾದ ತಿಮ್ಮೇಗೌಡ, ಶ್ರೀಕಾಂತ್, ಎಂ.ವಿ.ಕೃಷ್ಣ, ಟಿ.ಡಿ.ನಾಗರಾಜು ಭಾಗವಹಿಸಿದ್ದುರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>