<ul><li><p>ಮೇ 19ರಂದು ಮಹಾಕುಂಭಾಭಿಷೇಕ</p></li><li><p>ಸುತ್ತೂರು ಮತ್ತು ಆದಿಚುಂಚನಗಿರಿ ಶ್ರೀಗಳು ಭಾಗಿ </p></li><li><p>ಶಿಥಿಲಗೊಂಡ ದೇವಾಲಯಕ್ಕೆ ಹೊಸರೂಪ </p></li></ul>.<p><strong>ಮಂಡ್ಯ</strong>: ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಕೀಲಾರ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಆರಾಧ್ಯ ದೈವ ಸೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದೆ. ದೇವಾಲಯದ ಮೂಲಸ್ವರೂಪಕ್ಕೆ ಧಕ್ಕೆ ಬಾರದ ರೀತಿ ಆಧುನಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿರುವುದು ವಿಶೇಷ ಎನಿಸಿದೆ.</p>.<p>ಸುಮಾರು 750 ವರ್ಷಗಳ ಹಿಂದೆ ಮಾಂಡವ್ಯ ಪ್ರದೇಶದ ಕೀಲಾರ ಗ್ರಾಮದಲ್ಲಿ ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಸಾಮಂತ ರಾಜರು ಹಾಗೂ ಮಾಂಡಲೀಕರು ಸೋಮೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದರೆಂಬ ಐತಿಹ್ಯವಿದೆ. </p>.<p>ಶಿಥಿಲಗೊಂಡಿರುವ ದೇವಾಲಯವನ್ನು ಗ್ರಾಮಸ್ಥರು, ದೇವರ ಕುಲದವರು, ಭಕ್ತರು, ಆಗಮ ಪಂಡಿತರು, ವಿದ್ವಾಂಸರು, ಜ್ಯೋತಿಷಿಗಳ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಸೋಮೇಶ್ವರ ದೇವಾಲಯ ಟ್ರಸ್ಟ್, ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಮತ್ತು ಧಾರ್ಮಿಕ ದತ್ತಿ ಇಲಾಖೆ, ಧರ್ಮಸ್ಥಳ ಮಂಜುನಾಥೇಶ್ವರಸ್ವಾಮಿ ದೇವಾಲಯದ ಸಹಕಾರದಿಂದ ಒಟ್ಟು ₹3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.</p>.<p>ದೇವಾಲಯದಲ್ಲಿ ನವಗ್ರಹ ದೇವಸ್ಥಾನ, ಧ್ವಜಸ್ತಂಭ, ನಂದಿ ಮಂಟಪ, ಬಲಿಪೀಠ, ದೀಪಸ್ತಂಭ, ಚಂಡೀಕೇಶ್ವರ ಸನ್ನಿಧಿ, ನಾಗರಕಲ್ಲು, ಪಂಚ ಕಳಸಗಳನ್ನೊಳಗೊಂಡ ರಾಜಗೋಪುರ, ಶಿಲಾ ಕಾಂಪೌಂಡ್, ಪಾಕಶಾಲೆ, ದೇವಾಲಯದ ಒಳ ಪ್ರಾಕಾರಕ್ಕೆ ನೆಲಹಾಸಿನಿಂದಿಗೆ ಸುಂದರವಾಗಿ ನಿರ್ಮಾಣ ಮಾಡಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ.</p>.<p><strong>ನಾಲ್ಕು ದಿನ ನಡೆಯುವ ದೇವತಾ ಕಾರ್ಯ:</strong></p>.<p>ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದ್ದು, ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯಿದೆ.</p>.<p>16ರಂದು ಬೆಳಿಗ್ಗೆ 9.30ರಿಂದ ವಿವಿಧ ಧಾರ್ಮಿಕ ಕೈಂಕರ್ಯ ಮತ್ತು ಗಂಗಾದಿ ಸಪ್ತ ತೀರ್ಥ ಅವಾಹನೆ ಪ್ರಾಕಾರ ಪ್ರವೇಶ ಕಾರ್ಯಕ್ರಮ ಇರಲಿದೆ. ದೇವಸ್ಥಾನದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ನಿಶ್ಚಲಾನಂದನಾಥ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನಸ್ವಾಮಿ ಸಾನ್ನಿಧ್ಯ ವಹಿಸುವರು.</p>.<p>17ರಂದು ಬೆಳಿಗ್ಗೆ 7.30ರಿಂದ ಮಹಾಗಣಪತಿ ಪೂಜಾ, ಹೋಮ, ವಸ್ತು ಮಂಡಲಾರಾಧನೆ, ಸಂಜೆ 7 ಗಂಟೆಯ ನಂತರ ನಿರ್ಭಯಾನಂದ ರಾಮಾರ್ಯರು ಭಜನಾ ಕಾರ್ಯಕ್ರಮ ನಡೆಸಿಕೊಡುವರು.</p>.<p>18ರಂದು ಬೆಳಿಗ್ಗಿನಿಂದ ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 7 ಗಂಟೆಗೆ ಜಿ.ವಿ. ಅಮರೇಶಶಾಸ್ತ್ರಿ ಗುರೂಜಿ ಅವರಿಂದ ಪ್ರವಚನ ಇರಲಿದೆ.</p>.<p>ಮೇ 19ರಂದು ಬೆಳಿಗ್ಗೆ 9.20ರಿಂದ ಪುಣ್ಯಾಹವಾಚನ, ಪ್ರಧಾನ ಕಳಶಾರಾಧನೆ ಪರಿವಾರ ಸಹಿತ ಸ್ವಾಮಿಯವರಿಗೆ ಮಹಾಕುಂಭಾಭಿಷೇಕ, ವಿಮಾನಗೋಪುರ, ರಾಜಗೋಪುರ ಕಳಸಗಳಿಗೆ ಮಹಾಕುಂಭಾಭಿಷೇಕ ನಡೆಯಲಿದೆ.</p>.<p>ಮೇ 18ರಂದು ನಡೆಯುವ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಹಾಗೂ ಆಶೀರ್ವಚನ ನೀಡುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ಗೌಡ ಆಗಮಿಸಲಿದ್ದಾರೆ.</p>.<p><strong>40 ಮಂದಿ ಪೌರೋಹಿತ್ಯ</strong></p><p> ‘ಜಲಪೋಷಣೆಗಾಗಿ ಕೀಲಾರ ಗ್ರಾಮದ ಪ್ರತಿ ಮನೆಯಿಂದಲೂ ಒಬ್ಬರಂತೆ ಮೀಸಲು ನೀರು ತರುವ ಕಾರ್ಯದಲ್ಲಿ ತೊಡಗಲಿದ್ದು ಅನ್ನಸಂತರ್ಪಣೆಯೂ ಇರುತ್ತದೆ. ಹೋಮ ಹವನ ನಡೆಸಲು ಉತ್ತರ ಕರ್ನಾಟಕದಿಂದ 40ಕ್ಕೂ ಹೆಚ್ಚು ಪುರೋಹಿತರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 42 ಗ್ರಾಮದ ಕುಳದವರು ಸೇರಿದಂತೆ ಭಕ್ತರು ಭಾಗವಹಿಸಬೇಕು’ ಎಂದು ಸೋಮೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಜಯರಾಮೇಗೌಡ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<ul><li><p>ಮೇ 19ರಂದು ಮಹಾಕುಂಭಾಭಿಷೇಕ</p></li><li><p>ಸುತ್ತೂರು ಮತ್ತು ಆದಿಚುಂಚನಗಿರಿ ಶ್ರೀಗಳು ಭಾಗಿ </p></li><li><p>ಶಿಥಿಲಗೊಂಡ ದೇವಾಲಯಕ್ಕೆ ಹೊಸರೂಪ </p></li></ul>.<p><strong>ಮಂಡ್ಯ</strong>: ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಕೀಲಾರ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಆರಾಧ್ಯ ದೈವ ಸೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದೆ. ದೇವಾಲಯದ ಮೂಲಸ್ವರೂಪಕ್ಕೆ ಧಕ್ಕೆ ಬಾರದ ರೀತಿ ಆಧುನಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿರುವುದು ವಿಶೇಷ ಎನಿಸಿದೆ.</p>.<p>ಸುಮಾರು 750 ವರ್ಷಗಳ ಹಿಂದೆ ಮಾಂಡವ್ಯ ಪ್ರದೇಶದ ಕೀಲಾರ ಗ್ರಾಮದಲ್ಲಿ ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ಸಾಮಂತ ರಾಜರು ಹಾಗೂ ಮಾಂಡಲೀಕರು ಸೋಮೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದರೆಂಬ ಐತಿಹ್ಯವಿದೆ. </p>.<p>ಶಿಥಿಲಗೊಂಡಿರುವ ದೇವಾಲಯವನ್ನು ಗ್ರಾಮಸ್ಥರು, ದೇವರ ಕುಲದವರು, ಭಕ್ತರು, ಆಗಮ ಪಂಡಿತರು, ವಿದ್ವಾಂಸರು, ಜ್ಯೋತಿಷಿಗಳ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಸೋಮೇಶ್ವರ ದೇವಾಲಯ ಟ್ರಸ್ಟ್, ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಮತ್ತು ಧಾರ್ಮಿಕ ದತ್ತಿ ಇಲಾಖೆ, ಧರ್ಮಸ್ಥಳ ಮಂಜುನಾಥೇಶ್ವರಸ್ವಾಮಿ ದೇವಾಲಯದ ಸಹಕಾರದಿಂದ ಒಟ್ಟು ₹3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.</p>.<p>ದೇವಾಲಯದಲ್ಲಿ ನವಗ್ರಹ ದೇವಸ್ಥಾನ, ಧ್ವಜಸ್ತಂಭ, ನಂದಿ ಮಂಟಪ, ಬಲಿಪೀಠ, ದೀಪಸ್ತಂಭ, ಚಂಡೀಕೇಶ್ವರ ಸನ್ನಿಧಿ, ನಾಗರಕಲ್ಲು, ಪಂಚ ಕಳಸಗಳನ್ನೊಳಗೊಂಡ ರಾಜಗೋಪುರ, ಶಿಲಾ ಕಾಂಪೌಂಡ್, ಪಾಕಶಾಲೆ, ದೇವಾಲಯದ ಒಳ ಪ್ರಾಕಾರಕ್ಕೆ ನೆಲಹಾಸಿನಿಂದಿಗೆ ಸುಂದರವಾಗಿ ನಿರ್ಮಾಣ ಮಾಡಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ.</p>.<p><strong>ನಾಲ್ಕು ದಿನ ನಡೆಯುವ ದೇವತಾ ಕಾರ್ಯ:</strong></p>.<p>ದೇವಾಲಯದ ಜೀರ್ಣೋದ್ಧಾರ, ಮಹಾ ಕುಂಭಾಭಿಷೇಕ ಮಹೋತ್ಸವವು ಮೇ 16ರಿಂದ 19ವರೆಗೆ ನಡೆಯಲಿದ್ದು, ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯಿದೆ.</p>.<p>16ರಂದು ಬೆಳಿಗ್ಗೆ 9.30ರಿಂದ ವಿವಿಧ ಧಾರ್ಮಿಕ ಕೈಂಕರ್ಯ ಮತ್ತು ಗಂಗಾದಿ ಸಪ್ತ ತೀರ್ಥ ಅವಾಹನೆ ಪ್ರಾಕಾರ ಪ್ರವೇಶ ಕಾರ್ಯಕ್ರಮ ಇರಲಿದೆ. ದೇವಸ್ಥಾನದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ನಿಶ್ಚಲಾನಂದನಾಥ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನಸ್ವಾಮಿ ಸಾನ್ನಿಧ್ಯ ವಹಿಸುವರು.</p>.<p>17ರಂದು ಬೆಳಿಗ್ಗೆ 7.30ರಿಂದ ಮಹಾಗಣಪತಿ ಪೂಜಾ, ಹೋಮ, ವಸ್ತು ಮಂಡಲಾರಾಧನೆ, ಸಂಜೆ 7 ಗಂಟೆಯ ನಂತರ ನಿರ್ಭಯಾನಂದ ರಾಮಾರ್ಯರು ಭಜನಾ ಕಾರ್ಯಕ್ರಮ ನಡೆಸಿಕೊಡುವರು.</p>.<p>18ರಂದು ಬೆಳಿಗ್ಗಿನಿಂದ ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 7 ಗಂಟೆಗೆ ಜಿ.ವಿ. ಅಮರೇಶಶಾಸ್ತ್ರಿ ಗುರೂಜಿ ಅವರಿಂದ ಪ್ರವಚನ ಇರಲಿದೆ.</p>.<p>ಮೇ 19ರಂದು ಬೆಳಿಗ್ಗೆ 9.20ರಿಂದ ಪುಣ್ಯಾಹವಾಚನ, ಪ್ರಧಾನ ಕಳಶಾರಾಧನೆ ಪರಿವಾರ ಸಹಿತ ಸ್ವಾಮಿಯವರಿಗೆ ಮಹಾಕುಂಭಾಭಿಷೇಕ, ವಿಮಾನಗೋಪುರ, ರಾಜಗೋಪುರ ಕಳಸಗಳಿಗೆ ಮಹಾಕುಂಭಾಭಿಷೇಕ ನಡೆಯಲಿದೆ.</p>.<p>ಮೇ 18ರಂದು ನಡೆಯುವ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಹಾಗೂ ಆಶೀರ್ವಚನ ನೀಡುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ಗೌಡ ಆಗಮಿಸಲಿದ್ದಾರೆ.</p>.<p><strong>40 ಮಂದಿ ಪೌರೋಹಿತ್ಯ</strong></p><p> ‘ಜಲಪೋಷಣೆಗಾಗಿ ಕೀಲಾರ ಗ್ರಾಮದ ಪ್ರತಿ ಮನೆಯಿಂದಲೂ ಒಬ್ಬರಂತೆ ಮೀಸಲು ನೀರು ತರುವ ಕಾರ್ಯದಲ್ಲಿ ತೊಡಗಲಿದ್ದು ಅನ್ನಸಂತರ್ಪಣೆಯೂ ಇರುತ್ತದೆ. ಹೋಮ ಹವನ ನಡೆಸಲು ಉತ್ತರ ಕರ್ನಾಟಕದಿಂದ 40ಕ್ಕೂ ಹೆಚ್ಚು ಪುರೋಹಿತರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 42 ಗ್ರಾಮದ ಕುಳದವರು ಸೇರಿದಂತೆ ಭಕ್ತರು ಭಾಗವಹಿಸಬೇಕು’ ಎಂದು ಸೋಮೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಜಯರಾಮೇಗೌಡ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>