ದರ್ಶನ್ ಪುಟ್ಟಣ್ಣಯ್ಯ ಕಳೆದ 2022 ಡಿಸೆಂಬರ್ 23ರಂದು ಮೇಲುಕೋಟೆ ಕ್ಷೇತ್ರಕ್ಕೆ ಬಂದು ಚುನಾವಣಾ ಪೂರ್ವ ಸಿದ್ದತೆ ನಡೆಸಿದ್ದರು. ಇಲ್ಲಿಯವರೆಗೂ ದರ್ಶನ್ ಕ್ಷೇತ್ರದಲ್ಲಿದ್ದು, ಚುನಾವಣೆ ತಯಾರಿ ನಡೆಸಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ದರ್ಶನ್ ಪತ್ನಿ ಶಿಲ್ಪ ಅಮೆರಿಕದಿಂದ ಬಂದು ದರ್ಶನ್ಗೆ ಬೆಂಬಲವಾಗಿ ನಿಂತಿದ್ದರು. ಬಳಿಕ ತೆರಳಿದ್ದರು. ಚುನಾವಣೆ ಬಳಿಕ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರ ಬಿಟ್ಟು ವಾಪಸ್ಸು ಹೋಗುತ್ತಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.