₹6 ಕೋಟಿ ನಷ್ಟ: ಬೃಂದಾವನ ನಿರ್ವಹಣೆಯ ಗುತ್ತಿಗೆಯನ್ನು ಕೆಸಿಐಸಿ ಸಂಸ್ಥೆ ಪಡೆದಿತ್ತು. ಕಾವೇರಿ ನೀರಾವರಿ ನಿಗಮಕ್ಕೆ ಮಾಸಿಕ ₹1.05 ಕೋಟಿ ನೀಡುವ ಒಪ್ಪಂದದೊಡನೆ ಈ ಸಂಸ್ಥೆ ಗುತ್ತಿಗೆ ಪಡೆದಿತ್ತು. ಕೆಸಿಐಸಿ ಸಂಸ್ಥೆ ಗುತ್ತಿಗೆ ಪಡೆದ 3 ತಿಂಗಳಲ್ಲೇ ಎಲ್ಲೆಡೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮಾ.23ರಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು.