ನಾಗಮಂಗಲ: ತಾಲ್ಲೂಕಿನ ವ್ಯಾಪ್ತಿಯಲ್ಲಿ ವನಮಹೋತ್ಸವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಪೊಲೀಸ್ ವಸತಿ ಗೃಹಗಳ ಸಮುಚ್ಛಯದ ಆವರಣದಲ್ಲಿ ತಾಲ್ಲೂಕು ಅರಣ್ಯ ಇಲಾಖೆ ಮತ್ತು ನಾಗಮಂಗಲ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಮತ್ತು ವನಮಹೋತ್ಸವ ಸಪ್ತಾಹಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಸಮುಚ್ಛಯದಲ್ಲಿ ಹಲಸು, ಜಂಬುನೇರಳೆ , ವಿವಿಧ ಬಗೆಯ ಗಿಡಗಳನ್ನು ನೀಡಲಾಯಿತು. ತಾಲ್ಲೂಕಿನ ತೊಳಲಿ, ಕಾಚೇನಹಳ್ಳಿ ಸೇರಿದಂತೆವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಡಲಾಯಿತು.
ತಹಶಿಲ್ದಾರ್ ನಹೀಂ ಉನ್ನೀಸಾ, ಎಸಿಎಫ್ ಶಂಕರೇಗೌಡ, ಆರ್ ಎಫ್ ಒ ಮಂಜುನಾಥ್, ಡಿಆರ್ ಎಫ್ ಒ ಪ್ರಕಾಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್, ಸಿಪಿಐ ನಿರಂಜನ್ ಸೇರಿದಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.