ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಸರ್ಕಾರವೂ ಮಾಡಲಾಗದ ರೀತಿಯಲ್ಲಿ ಬಡವರ ಕಲ್ಯಾಣಕ್ಕೆ ಪೂರಕ ಶಕ್ತಿಯಾಗಿ ಶ್ರೀಮಠ ನಿಂತಿದೆ. ಪ್ರತಿ ಕುಟುಂಬದ ಸಬಲತೆಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸಿ ಬಡವರ ಕಾಮಧೇನುವಾಗಿದೆ’ ಎಂದರು. ಇಡೀ ರಾಜ್ಯದಲ್ಲಿ ಸರ್ಕಾರೇತರ ಕೃಷಿ ವಿಜ್ಞಾನ ಕಾಲೇಜು ಕರ್ನಾಟಕ ಸರ್ಕಾರದ ಸಹಕಾರದಿಂದ ಶ್ರೀಗಳ ಆಶೀರ್ವಾದದಿಂದ ಸಾಕಾರಗೊಂಡಿರುವುದು ಶ್ರೀಮಠದ ಹೆಗ್ಗಳಿಕೆಯಲ್ಲೊಂದು. ಮುಂದುವರಿದು ಪಶು ವೈದ್ಯಕೀಯ ಕಾಲೇಜನ್ನೂ ಸ್ಥಾಪಿಸುವ ಗುರುಗಳ ಉದ್ದೇಶವು ಸದ್ಯದಲ್ಲೇ ಕೈಗೂಡಲಿದೆ ಶುಭವಾಗಲಿ ಎಂದರು.