‘ಕಳಪೆ ಕಾಮಗಾರಿ ನಡೆಸಿದರೂ ಪರಿಶೀಲನೆ ನಡೆಸದೆ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡತ್ತಿದ್ದಾರೆ ಎಂದು ಸಬ್ಬನಕುಪ್ಪೆ ಗ್ರಾ.ಪಂ. ಸದಸ್ಯ ಚಿದಂಬರ ಹೇಳಿದರು. ವಸತಿ ಯೋಜನೆಯಡಿ ಸಾಮಾನ್ಯ ವರ್ಗದ ಜನರಿಗೆ ಬೇಡಿಕೆಯಷ್ಟು ಮನೆ ಕಟ್ಟಿಸಿಕೊಡಲು ಆಗುತ್ತಿಲ್ಲ. ಅನುಪಾತ ಹೆಚ್ಚಿಸಿ ಎಂದು ಕೆ.ಎಂ. ಮಲ್ಲೇಶ್ ಮನವಿ ಮಾಡಿದರು. ಸಅಂಬಂಧಿಸಿದವರ ಜತೆ ಚರ್ಚಿಸುತ್ತೇನೆ ಎಂದು ಅತೀಕ್ ಹೇಳಿದರು.
ಗ್ರಾ.ಪಂ. ಸದಸ್ಯರು ಹಾಗೂ ಉನ್ನತ ಅಧಿಕಾರಿಗಳ ನಡುವೆ ಅರ್ಧ ತಾಸು ಚರ್ಚೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫೀಕರ್ ಉಲ್ಲಾ ಮಾತನಾಡಿದರು. ತಾ.ಪಂ. ಇಒ ಭೈರಪ್ಪ, ಸಹಾಯಕ ನಿರ್ದೇಶಕ ಎಸ್.ಬಿ. ಶಿವಕುಮಾರ್ ಇತರರು ಇದ್ದರು.