<p><strong>ನಾಗಮಂಗಲ</strong>: ಗಣೇಶೋತ್ಸವದ ಅಂಗವಾಗಿ ಇಲ್ಲಿನ ಶ್ರೀರಾಮ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ತಾಲ್ಲೂಕಿನ ಕೆಂಚೇಗೌಡನ ಕೊಪ್ಪಲು ಗ್ರಾಮದ ಯೋಗೇಶ್ ನಿಗದಿತ ಸಮಯದಲ್ಲಿ ಆರು ಮುದ್ದೆ ಉಣ್ಣುವ ಮೂಲಕ ಪ್ರಥಮಸ್ಥಾನ ಪಡೆದರು.</p>.<p>ತಾಲ್ಲೂಕಿನ ಪಾಲಾಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 30 ನಿಮಿಷದಲ್ಲಿ ಆರು ಮುದ್ದೆ ತಿಂದ ಯೋಗೇಶ್ಗೆ ಒಂದು ಟಗರು, ಐದು ಮುದ್ದೆ ತಿಂದು ಎರಡನೇ ಸ್ಥಾನ ಪಡೆದ ನವೀನ್ ದೊಂದೇಮಾದಳ್ಳಿ ಅವರಿಗೆ ₹ 10 ಸಾವಿರ, ಮೂರು ಮುದ್ದೆ ತಿಂದು ಮೂರನೇ ಬಹುಮಾನ ಪಡೆದ ಪಾಲಾಗ್ರಹಾರ ಶರತ್ ಕುಮಾರ್ಗೆ ₹ ಐದು ಸಾವಿರ, 4 ಮತ್ತು 5ನೇ ಸ್ಥಾನ ಪಡೆದ ರಾಜಣ್ಣ ಕುಪ್ಪಳ್ಳಿ ಮತ್ತು ದೊಂದೇಮಾದಹಳ್ಳಿ ಅರುಣ್ ಕುಮಾರ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.</p>.<p>ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 30 ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಆತುರದಲ್ಲಿ ಸ್ಪರ್ಧೆಗಳು ಮಾಡುತ್ತಿದ್ದ ಕಸರತ್ತುಗಳು ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದವು.</p>.<p>ಗ್ರಾಮದ ಮುಖಂಡರಾದ ಪಿ.ಡಿ.ತಿಮ್ಮಯ್ಯ, ಪಿ.ಆರ್.ರಮೇಶ್, ವಕೀಲ ಪಿ.ಸಿ.ಮಂಜುನಾಥ್, ನಾರಾಯಣ, ಆನಂದ್, ಗ್ರಾಮ ಪಂಚಾಯಿತಿ ಸದಸ್ಯ ವಿನಯ್ ಕುಮಾರ್, ಯುವಕ ಸಂಘದ ಅಧ್ಯಕ್ಷ ಮಂಜುನಾಥ, ಖಜಾಂಚಿ ನವೀನ್, ಹೇಮಂತ್, ಗುರುಪ್ರಸಾದ್, ಶಿಕ್ಷಕ ಪಿ.ಆರ್.ರಾಮಚಂದ್ರ ಮತ್ತು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ</strong>: ಗಣೇಶೋತ್ಸವದ ಅಂಗವಾಗಿ ಇಲ್ಲಿನ ಶ್ರೀರಾಮ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ತಾಲ್ಲೂಕಿನ ಕೆಂಚೇಗೌಡನ ಕೊಪ್ಪಲು ಗ್ರಾಮದ ಯೋಗೇಶ್ ನಿಗದಿತ ಸಮಯದಲ್ಲಿ ಆರು ಮುದ್ದೆ ಉಣ್ಣುವ ಮೂಲಕ ಪ್ರಥಮಸ್ಥಾನ ಪಡೆದರು.</p>.<p>ತಾಲ್ಲೂಕಿನ ಪಾಲಾಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 30 ನಿಮಿಷದಲ್ಲಿ ಆರು ಮುದ್ದೆ ತಿಂದ ಯೋಗೇಶ್ಗೆ ಒಂದು ಟಗರು, ಐದು ಮುದ್ದೆ ತಿಂದು ಎರಡನೇ ಸ್ಥಾನ ಪಡೆದ ನವೀನ್ ದೊಂದೇಮಾದಳ್ಳಿ ಅವರಿಗೆ ₹ 10 ಸಾವಿರ, ಮೂರು ಮುದ್ದೆ ತಿಂದು ಮೂರನೇ ಬಹುಮಾನ ಪಡೆದ ಪಾಲಾಗ್ರಹಾರ ಶರತ್ ಕುಮಾರ್ಗೆ ₹ ಐದು ಸಾವಿರ, 4 ಮತ್ತು 5ನೇ ಸ್ಥಾನ ಪಡೆದ ರಾಜಣ್ಣ ಕುಪ್ಪಳ್ಳಿ ಮತ್ತು ದೊಂದೇಮಾದಹಳ್ಳಿ ಅರುಣ್ ಕುಮಾರ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.</p>.<p>ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 30 ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಆತುರದಲ್ಲಿ ಸ್ಪರ್ಧೆಗಳು ಮಾಡುತ್ತಿದ್ದ ಕಸರತ್ತುಗಳು ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದವು.</p>.<p>ಗ್ರಾಮದ ಮುಖಂಡರಾದ ಪಿ.ಡಿ.ತಿಮ್ಮಯ್ಯ, ಪಿ.ಆರ್.ರಮೇಶ್, ವಕೀಲ ಪಿ.ಸಿ.ಮಂಜುನಾಥ್, ನಾರಾಯಣ, ಆನಂದ್, ಗ್ರಾಮ ಪಂಚಾಯಿತಿ ಸದಸ್ಯ ವಿನಯ್ ಕುಮಾರ್, ಯುವಕ ಸಂಘದ ಅಧ್ಯಕ್ಷ ಮಂಜುನಾಥ, ಖಜಾಂಚಿ ನವೀನ್, ಹೇಮಂತ್, ಗುರುಪ್ರಸಾದ್, ಶಿಕ್ಷಕ ಪಿ.ಆರ್.ರಾಮಚಂದ್ರ ಮತ್ತು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>