<p><strong>ಮಂಡ್ಯ:</strong> ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ’ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದ್ದು, ಜಾನುವಾರು ಹಾಗೂ ಕೋಳಿ ಆಹಾರವಾಗಿ ಬಳಕೆಯಾಗುತ್ತಿದೆ.</p>.<p>ಕಲ್ಲು–ಮಣ್ಣು ಮಿಶ್ರಿತವಾಗಿರುವ ತೊಗರಿಬೇಳೆಯು ಹುಳ ಹಿಡಿದು ಮುಗ್ಗಲುಹಿಡಿದಿದೆ. ಕಳಪೆ ಗುಣಮಟ್ಟದ ಬೇಳೆ ನೀಡಿರುವುದಕ್ಕೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಬೇಳೆ ಕಳಪೆ ಗುಣಮಟ್ಟದ್ದಾಗಿದೆ.ತೊಳೆದರೆ ವಾಸನೆ ಹೋಗುತ್ತಿಲ್ಲ. ಸಾಂಬಾರು ಮಾಡಿದರೆ ಅದನ್ನು ಊಟ ಮಾಡಲು ಆಗುವುದಿಲ್ಲ. ಹೀಗಾಗಿ, ಅದನ್ನು ಜಾನುವಾರು, ಕೋಳಿಗಳಿಗೆ ನೀಡುತ್ತಿದ್ದೇವೆ. ಉಣ್ಣಲಾಗದ ಬೇಳೆಯನ್ನು ಏಕೆ ನೀಡಬೇಕಿತ್ತು?’ ಎಂದು ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಪಿಎಲ್ ಕಾರ್ಡ್ದಾರರನ್ನು ಹೊರತು ಪಡಿಸಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ದಾರರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಹೆಚ್ಚಿನವರು ಬಡವರು, ಕೂಲಿ ಕಾರ್ಮಿಕರು. ಅಂದು ದುಡಿದು ಅಂದೇ ಊಟ ಮಾಡುವಂಥವರು.</p>.<p>‘ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದೇವೆ. ಕೆಲಸವಿಲ್ಲ. ಕಷ್ಟ ಕಾಲದಲ್ಲಿ ಅಕ್ಕಿ ಜೊತೆ ಪೌಷ್ಟಿಕ ಬೇಳೆ ಸಿಕ್ಕಿದೆ ಎಂದುಕೊಂಡೆವು. ಆದರೆ, ಇದು ಮೂರುಕಾಸಿಗೂ ಪ್ರಯೋಜನ ಇಲ್ಲವಾಗಿದೆ’ ಎಂದು ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿಯ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>'ಮಂಡ್ಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಬೇಳೆ ವಿತರಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಅಧಿಕಾರಿಗಳು ಕೂಡಲೇ ಇದನ್ನು ವಾಪಸು ಪಡೆದು, ಗುಣಮಟ್ಟದ ಬೇಳೆ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಆಗ್ರಹಿಸಿದರು.</p>.<p>**</p>.<p>ಕೆಲವೆಡೆ ಬಂದಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದೆ ಎಂಬ ದೂರುಗಳಿವೆ. ಅದನ್ನು ವಾಪಸು ಪಡೆದು ಹೊಸ ದಾಸ್ತಾನು ತರಿಸಿ ವಿತರಿಸಲಾಗುತ್ತದೆ.<br /><em><strong>-ಕುಮುದಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ’ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದ್ದು, ಜಾನುವಾರು ಹಾಗೂ ಕೋಳಿ ಆಹಾರವಾಗಿ ಬಳಕೆಯಾಗುತ್ತಿದೆ.</p>.<p>ಕಲ್ಲು–ಮಣ್ಣು ಮಿಶ್ರಿತವಾಗಿರುವ ತೊಗರಿಬೇಳೆಯು ಹುಳ ಹಿಡಿದು ಮುಗ್ಗಲುಹಿಡಿದಿದೆ. ಕಳಪೆ ಗುಣಮಟ್ಟದ ಬೇಳೆ ನೀಡಿರುವುದಕ್ಕೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಬೇಳೆ ಕಳಪೆ ಗುಣಮಟ್ಟದ್ದಾಗಿದೆ.ತೊಳೆದರೆ ವಾಸನೆ ಹೋಗುತ್ತಿಲ್ಲ. ಸಾಂಬಾರು ಮಾಡಿದರೆ ಅದನ್ನು ಊಟ ಮಾಡಲು ಆಗುವುದಿಲ್ಲ. ಹೀಗಾಗಿ, ಅದನ್ನು ಜಾನುವಾರು, ಕೋಳಿಗಳಿಗೆ ನೀಡುತ್ತಿದ್ದೇವೆ. ಉಣ್ಣಲಾಗದ ಬೇಳೆಯನ್ನು ಏಕೆ ನೀಡಬೇಕಿತ್ತು?’ ಎಂದು ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಪಿಎಲ್ ಕಾರ್ಡ್ದಾರರನ್ನು ಹೊರತು ಪಡಿಸಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ದಾರರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಹೆಚ್ಚಿನವರು ಬಡವರು, ಕೂಲಿ ಕಾರ್ಮಿಕರು. ಅಂದು ದುಡಿದು ಅಂದೇ ಊಟ ಮಾಡುವಂಥವರು.</p>.<p>‘ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದೇವೆ. ಕೆಲಸವಿಲ್ಲ. ಕಷ್ಟ ಕಾಲದಲ್ಲಿ ಅಕ್ಕಿ ಜೊತೆ ಪೌಷ್ಟಿಕ ಬೇಳೆ ಸಿಕ್ಕಿದೆ ಎಂದುಕೊಂಡೆವು. ಆದರೆ, ಇದು ಮೂರುಕಾಸಿಗೂ ಪ್ರಯೋಜನ ಇಲ್ಲವಾಗಿದೆ’ ಎಂದು ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿಯ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>'ಮಂಡ್ಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಬೇಳೆ ವಿತರಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಅಧಿಕಾರಿಗಳು ಕೂಡಲೇ ಇದನ್ನು ವಾಪಸು ಪಡೆದು, ಗುಣಮಟ್ಟದ ಬೇಳೆ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಆಗ್ರಹಿಸಿದರು.</p>.<p>**</p>.<p>ಕೆಲವೆಡೆ ಬಂದಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದೆ ಎಂಬ ದೂರುಗಳಿವೆ. ಅದನ್ನು ವಾಪಸು ಪಡೆದು ಹೊಸ ದಾಸ್ತಾನು ತರಿಸಿ ವಿತರಿಸಲಾಗುತ್ತದೆ.<br /><em><strong>-ಕುಮುದಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>