ಸುದ್ದಿಗಾರರೊಂದಿಗೆ ಮಾತನಾಡಿದ ನಾಗಮಂಗಲ ಕಟ್ಟೆಮನೆ ಯಜಮಾನರ ಕುಟುಂಬಸ್ಥ ಎನ್.ಕೆ.ರಾಜು, ಈ ಬಾರಿಯೂ ಡಿ.24ಕ್ಕೆ ವಿಜೃಂಭಣೆಯಿಂದ ಜಾತ್ರೆ ಜರುಗಬೇಕಿತ್ತು. ಆದರೆ, ರಾಜ್ಯದ ವಿವಿಧೆಡೆಗಳಿಂದ 25 ರಿಂದ 30 ಸಾವಿರಕ್ಕೂ ಅಧಿಕ ಭಕ್ತರು ಬರುವುದರಿಂದ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಮಾಡಿ ಸಾಂಪ್ರದಾಯಿಕ ಪೂಜೆಗಳಿಗೆ ಸೀಮಿತ ಮಾಡಲಾಗಿದೆ ಎಂದರು.