<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ಕೃಷಿ ಭೂಮಿಗೆ ನೀರುಣಿಸುವ ವಿರಿಜಾ ವಿತರಣಾ ನಾಲೆಯನ್ನು ಎರಡೂ ಗ್ರಾಮಗಳ ರೈತರು ಭಾನುವಾರ ಸ್ವಚ್ಛಗೊಳಿಸಿದರು.</p>.<p>ಬೆಳಗೊಳ ಸಮೀಪದ ಬಲಮುರಿ ಬಳಿ ಕಾವೇರಿ ನದಿಯಿಂದ ಆರಂಭವಾಗುವ ವಿರಿಜಾ ನಾಲೆಯ 4ನೇ ಮೈಲಿಯ ಕಾಲುವೆಯನ್ನು ಸ್ವಚ್ಛಗೊಳಿಸಿದರು.</p>.<p>ವಿತರಣಾ ನಾಲೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಸಾಗಿಸಿದರು. ಆಳೆತ್ತರ ಬೆಳೆದಿದ್ದ ಕಳೆ ಗಿಡಗಳನ್ನು ಕಿತ್ತರು. ಒಂದು ಕಿ.ಮೀ. ಉದ್ದದಷ್ಟು ನಾಲೆಯ ಸ್ವಚ್ಛತೆ ಕೈಗೊಂಡರು. ನಾಲೆಯ ಸ್ವಚ್ಛತೆಯಿಂದ ಕಡೇ ಭಾಗದವರೆಗೆ ನೀರು ಹರಿಯಲು ಅನುಕೂಲವಾಗಿದೆ.</p>.<p>‘ವಿರಿಜಾ ನಾಲೆಯ 4ನೇ ಮೈಲಿಯ ವಿತರಣಾ ನಾಲೆ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಆದರೆ ಈ ನಾಲೆಯನ್ನು ನಿರ್ವಹಣೆ ಮಾಡದ ಕಾರಣ ಮುಂದಿನ ಭಾಗಕ್ಕೆ ನೀರು ಹರಿಯದೆ ರೈತರು ತೊಂದರೆ ಅನುಭವಿಸುತ್ತಿದ್ದೇವೆ. ಈ ನಾಲೆಯನ್ನು ಸಿಮೆಂಟೀಕರಣ ಮಾಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ರೈತ ಬೆಳಗೊಳ ವಿಷಕಂಠು ದೂರಿದರು.</p>.<p>‘ಈ ವಿತರಣಾ ನಾಲೆಯಲ್ಲಿ ಹೂಳು ತುಂಬಿಕೊಂಡು ವಿಪರೀತ ಕಳೆ ಗಿಡಗಳು ಬೆಳೆದಿದ್ದವು. ನೀರಾವರಿ ಇಲಾಖೆ ನಾಲೆ ಸ್ವಚ್ಛ ಮಾಡದ ಕಾರಣ ರೈತರೇ ಶ್ರಮದಾನ ಮಾಡಿ ನೀರು ಹರಿಯುವಂತೆ ಮಾಡಿದ್ದೇವೆ’ ಎಂದು ಕಾರೇಕುರ ಗ್ರಾಮದ ರೈತ ಯೋಗೇಶ್ ಹೇಳಿದರು.</p>.<p>ರವಿಕುಮಾರ್, ರಾಜು, ಮುರಳಿ, ಚಂದ್ರು, ನಾಗರಾಜು, ಮಹದೇವು, ವಂಕಟೇಶ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ಕೃಷಿ ಭೂಮಿಗೆ ನೀರುಣಿಸುವ ವಿರಿಜಾ ವಿತರಣಾ ನಾಲೆಯನ್ನು ಎರಡೂ ಗ್ರಾಮಗಳ ರೈತರು ಭಾನುವಾರ ಸ್ವಚ್ಛಗೊಳಿಸಿದರು.</p>.<p>ಬೆಳಗೊಳ ಸಮೀಪದ ಬಲಮುರಿ ಬಳಿ ಕಾವೇರಿ ನದಿಯಿಂದ ಆರಂಭವಾಗುವ ವಿರಿಜಾ ನಾಲೆಯ 4ನೇ ಮೈಲಿಯ ಕಾಲುವೆಯನ್ನು ಸ್ವಚ್ಛಗೊಳಿಸಿದರು.</p>.<p>ವಿತರಣಾ ನಾಲೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಸಾಗಿಸಿದರು. ಆಳೆತ್ತರ ಬೆಳೆದಿದ್ದ ಕಳೆ ಗಿಡಗಳನ್ನು ಕಿತ್ತರು. ಒಂದು ಕಿ.ಮೀ. ಉದ್ದದಷ್ಟು ನಾಲೆಯ ಸ್ವಚ್ಛತೆ ಕೈಗೊಂಡರು. ನಾಲೆಯ ಸ್ವಚ್ಛತೆಯಿಂದ ಕಡೇ ಭಾಗದವರೆಗೆ ನೀರು ಹರಿಯಲು ಅನುಕೂಲವಾಗಿದೆ.</p>.<p>‘ವಿರಿಜಾ ನಾಲೆಯ 4ನೇ ಮೈಲಿಯ ವಿತರಣಾ ನಾಲೆ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಆದರೆ ಈ ನಾಲೆಯನ್ನು ನಿರ್ವಹಣೆ ಮಾಡದ ಕಾರಣ ಮುಂದಿನ ಭಾಗಕ್ಕೆ ನೀರು ಹರಿಯದೆ ರೈತರು ತೊಂದರೆ ಅನುಭವಿಸುತ್ತಿದ್ದೇವೆ. ಈ ನಾಲೆಯನ್ನು ಸಿಮೆಂಟೀಕರಣ ಮಾಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ರೈತ ಬೆಳಗೊಳ ವಿಷಕಂಠು ದೂರಿದರು.</p>.<p>‘ಈ ವಿತರಣಾ ನಾಲೆಯಲ್ಲಿ ಹೂಳು ತುಂಬಿಕೊಂಡು ವಿಪರೀತ ಕಳೆ ಗಿಡಗಳು ಬೆಳೆದಿದ್ದವು. ನೀರಾವರಿ ಇಲಾಖೆ ನಾಲೆ ಸ್ವಚ್ಛ ಮಾಡದ ಕಾರಣ ರೈತರೇ ಶ್ರಮದಾನ ಮಾಡಿ ನೀರು ಹರಿಯುವಂತೆ ಮಾಡಿದ್ದೇವೆ’ ಎಂದು ಕಾರೇಕುರ ಗ್ರಾಮದ ರೈತ ಯೋಗೇಶ್ ಹೇಳಿದರು.</p>.<p>ರವಿಕುಮಾರ್, ರಾಜು, ಮುರಳಿ, ಚಂದ್ರು, ನಾಗರಾಜು, ಮಹದೇವು, ವಂಕಟೇಶ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>