ಸಮಸ್ಯೆಯನ್ನು ಪರಿಶೀಲಿಸಿದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಮನೋಹರ್ ಮತ್ತು ತಂಡದ ಸದಸ್ಯರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಸ್ತ್ರಚಿಕಿತ್ಸೆ ನಡೆಸಿದರು. ಡಾ.ಮನೋಹರ್ ಅವರಿಗೆ ಡಾ.ಲಿಂಗರಾಜು, ಡಾ.ಅನಿತಾರಾಣಿ, ಡಾ.ಸಂಧ್ಯಾ, ಡಾ.ನಂದಿನಿ, ಡಾ.ಅಭಿ, ಡಾ.ಶಿವಕುಮಾರ್ ಸಹಕಾರ ನೀಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಭುವನಾ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.