ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಶಸ್ತ್ರಚಿಕಿತ್ಸೆ: ವೈದ್ಯರಿಗೆ ಅಭಿನಂದನೆ

Last Updated 4 ಫೆಬ್ರುವರಿ 2023, 12:44 IST
ಅಕ್ಷರ ಗಾತ್ರ

ಮಂಡ್ಯ: ಗರ್ಭದಲ್ಲಿ ಮಗುವಿನ ಸುತ್ತ ಸುತ್ತಿಕೊಂಡಿದ್ದ ಕರುಳು ಬೇರ್ಪಡಿಸಿ ಮಿಮ್ಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆ ಮೂಲಕ ಮದ್ದೂರು ತಾಲ್ಲೂಕು ಎಸ್‌.ಐ.ಹಾಲಗಹಳ್ಳಿ ಗ್ರಾಮದ ಮಹಿಳೆಗೆ ಬದುಕು ನೀಡಿದ್ದಾರೆ.

ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯ ತಾಯಿ, ಮಗು ಆರೋಗ್ಯದಿಂದ ಇದ್ದಾರೆ. 7 ತಿಂಗಳ ಗರ್ಭಿಣಿ ಭುವನಾ ಅವರ ಗರ್ಭದಲ್ಲಿ ಮಗುವಿನ ಸುತ್ತಲೂ ದೊಡ್ಡ ಕರುಳು ಸುತ್ತಿಕೊಂಡು ಅವರ ಪ್ರಾಣಕ್ಕೆ ಕುತ್ತು ಉಂಟಾಗಿತ್ತು. ಭುವನಾ, ಅವರ ಪತಿ ತೇಜಸ್‌ ಹಲವು ಆಸ್ಪತ್ರೆ ಸುತ್ತಿದ್ದರು. ಕಡೆಗೆ ಗರ್ಭಿಣಿಯನ್ನು ಮಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದರು.

ಸಮಸ್ಯೆಯನ್ನು ಪರಿಶೀಲಿಸಿದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಮನೋಹರ್‌ ಮತ್ತು ತಂಡದ ಸದಸ್ಯರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಸ್ತ್ರಚಿಕಿತ್ಸೆ ನಡೆಸಿದರು. ಡಾ.ಮನೋಹರ್‌ ಅವರಿಗೆ ಡಾ.ಲಿಂಗರಾಜು, ಡಾ.ಅನಿತಾರಾಣಿ, ಡಾ.ಸಂಧ್ಯಾ, ಡಾ.ನಂದಿನಿ, ಡಾ.ಅಭಿ, ಡಾ.ಶಿವಕುಮಾರ್ ಸಹಕಾರ ನೀಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಭುವನಾ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ವಿವಿಧ ಸಂಘಟನೆಗಳ ಸದಸ್ಯರು, ಭುವನಾ ಕುಟುಂಬ ಸದಸ್ಯರು ವೈದ್ಯರನ್ನು ಶನಿವಾರ ಅಭಿನಂದಿಸಿದರು. ಮಿಮ್ಸ್‌ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ.ತಮ್ಮಣ್ಣ, ಡಾ.ಪಿ.ವಿ.ಶ್ರೀಧರ್, ಒಕ್ಕಲಿಗರ ಸಂಘದ ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೂರು ಮನು, ವಕೀಲ ನಂದೀಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT