<p><strong>ಮದ್ದೂರು:</strong> ‘ದೇವಸ್ಥಾನಗಳು ಭಕ್ತಿ ಭಾವ, ಸಂಸ್ಕೃತಿಗಳ ನೆಲೆಯಾಗಿದ್ದು, ದೇವರ ಆರಾಧನೆಯಿಂದ ನಮಗೆ ಒಳಿತಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ತಾಲ್ಲೂಕಿನ ದೊಡ್ಡ ಅಂಕನಹಳ್ಳಿಯಲ್ಲಿ ಸೋಮವಾರ ಹುಚ್ಚಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.</p>.<p>‘ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.</p>.<p>‘ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು’ ಎಂದರು.</p>.<p>ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ದೇಹ ಅಶುದ್ಧವಾದರೆ ಸ್ನಾನ ಮಾಡಿ ಸ್ವಚ್ಛಗೊಳ್ಳುವಂತೆ ಮನಸ್ಸಿನ ಮಾಲಿನ್ಯವನ್ನು ತೊಡೆಯುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.</p>.<p>‘ಬದುಕಿನ ಜಂಜಾಟದಲ್ಲಿ ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಿ ಶಾಂತಿ, ನೆಮ್ಮದಿ ನೀಡಿ ಸಂತೈಸುವ ತಾಣ ದೇವಾಲಯಗಳಾಗಿವೆ, ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಯ ಕೇಂದ್ರಗಳಾಗಿವೆ’ ಎಂದರು.</p>.<p>‘ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಗಳಿಸುವ ಮತ್ತು ಕಳೆದುಕೊಳ್ಳುವ ಯಾವುದೇ ಆಸ್ತಿ, ಹಣ ಅವನ ಬದುಕನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡದು. ಬದಲಾಗಿ ಸಮಾಜಮುಖಿ ಚಿಂತನೆ, ಸ್ವಯಂಪ್ರೇರಿತವಾಗಿ ತೊಡಗುವ ಮಹಾನ್ ಕಾರ್ಯಗಳಲ್ಲಿ ನೆರವಾದವರಿಗೆ ದೇವರು ಹೆಚ್ಚಿನ ಶಕ್ತಿ ನೀಡುತ್ತಾನೆ’ ಎಂದರು.</p>.<p>ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಮಾತನಾಡಿದರು. ಭಕ್ತರಿಗೆ ಅನ್ನಸಂರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.</p>.<p>ಮಾಜಿ ಸಚಿವ ಗೋಪಾಲಯ್ಯ, ಕದಂಬ ಜಂಗದ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೋರಯ್ಯ, ಪ್ರಸನ್ನ, ರವಿ, ಶೇಖರ್, ನವೀನ್, ಧರ್ಮವೀರ್, ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯ, ಶಿವು, ಆನಂದ್, ಶರತ್, ಚಿಕ್ಕಮೊಗ ಸೇರಿದಂತೆ ಗ್ರಾಮದ ಮುಖಂಡರು, ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು.</p>
<p><strong>ಮದ್ದೂರು:</strong> ‘ದೇವಸ್ಥಾನಗಳು ಭಕ್ತಿ ಭಾವ, ಸಂಸ್ಕೃತಿಗಳ ನೆಲೆಯಾಗಿದ್ದು, ದೇವರ ಆರಾಧನೆಯಿಂದ ನಮಗೆ ಒಳಿತಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ತಾಲ್ಲೂಕಿನ ದೊಡ್ಡ ಅಂಕನಹಳ್ಳಿಯಲ್ಲಿ ಸೋಮವಾರ ಹುಚ್ಚಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.</p>.<p>‘ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.</p>.<p>‘ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು’ ಎಂದರು.</p>.<p>ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ದೇಹ ಅಶುದ್ಧವಾದರೆ ಸ್ನಾನ ಮಾಡಿ ಸ್ವಚ್ಛಗೊಳ್ಳುವಂತೆ ಮನಸ್ಸಿನ ಮಾಲಿನ್ಯವನ್ನು ತೊಡೆಯುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.</p>.<p>‘ಬದುಕಿನ ಜಂಜಾಟದಲ್ಲಿ ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಿ ಶಾಂತಿ, ನೆಮ್ಮದಿ ನೀಡಿ ಸಂತೈಸುವ ತಾಣ ದೇವಾಲಯಗಳಾಗಿವೆ, ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಯ ಕೇಂದ್ರಗಳಾಗಿವೆ’ ಎಂದರು.</p>.<p>‘ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಗಳಿಸುವ ಮತ್ತು ಕಳೆದುಕೊಳ್ಳುವ ಯಾವುದೇ ಆಸ್ತಿ, ಹಣ ಅವನ ಬದುಕನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡದು. ಬದಲಾಗಿ ಸಮಾಜಮುಖಿ ಚಿಂತನೆ, ಸ್ವಯಂಪ್ರೇರಿತವಾಗಿ ತೊಡಗುವ ಮಹಾನ್ ಕಾರ್ಯಗಳಲ್ಲಿ ನೆರವಾದವರಿಗೆ ದೇವರು ಹೆಚ್ಚಿನ ಶಕ್ತಿ ನೀಡುತ್ತಾನೆ’ ಎಂದರು.</p>.<p>ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಮಾತನಾಡಿದರು. ಭಕ್ತರಿಗೆ ಅನ್ನಸಂರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.</p>.<p>ಮಾಜಿ ಸಚಿವ ಗೋಪಾಲಯ್ಯ, ಕದಂಬ ಜಂಗದ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೋರಯ್ಯ, ಪ್ರಸನ್ನ, ರವಿ, ಶೇಖರ್, ನವೀನ್, ಧರ್ಮವೀರ್, ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯ, ಶಿವು, ಆನಂದ್, ಶರತ್, ಚಿಕ್ಕಮೊಗ ಸೇರಿದಂತೆ ಗ್ರಾಮದ ಮುಖಂಡರು, ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು.</p>