<p><strong>ಶ್ರೀರಂಗಪಟ್ಟಣ</strong>: ಪಟ್ಟಣದ ಸೆಂದಿಲ್ ಕೋಟೆ ಆವರಣಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯಾವಳಿ ರಂಜಿಸಿತು.</p>.<p>ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘವು, ಮಾಚಿದೇವರ ಜಯಂತಿ ನಿಮಿತ್ತ ಕುಸ್ತಿ ಪಂದ್ಯಾವಳಿ ಏರ್ಪಡಿಸಿತ್ತು.</p>.<p>ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಟೂರ್ನಿಗೆ ಚಾಲನೆ ನೀಡಿದರು.</p>.<p>‘ಕೊರೊನಾ ಭೀತಿಯಿಂದಾಗಿ ಒಂದು ವರ್ಷದಿಂದ ಪಟ್ಟಣದಲ್ಲಿ ಕುಸ್ತಿ ನಡೆದಿರಲಿಲ್ಲ. ಮಡಿವಾಳ ಮಾಚಿದೇವರ ಸಂಘ ಧೈರ್ಯ ಮಾಡಿ ಕುಸ್ತಿ ಏರ್ಪಡಿಸಿದೆ. ಕಂಠೀರವ ನರಸರಾಜ ಒಡೆಯರ್ ಕಾಲದಲ್ಲಿ ಕುಸ್ತಿ ಉತ್ತುಂಗದ ಸ್ಥಿತಿಯಲ್ಲಿತ್ತು. ಈ ಗಂಡು ಕಲೆ ಮುಂದಿನ ಪೀಳಿಗೆಗೂ ಉಳಿಯಬೇಕು’ ಎಂದು ಅವರು ಹೇಳಿದರು.</p>.<p>ಟೂರ್ನಿಯಲ್ಲಿ 30ಕ್ಕೂ ಹೆಚ್ಚು ಜತೆ ಪೈಲ್ವಾನರು ಸೆಣೆಸಾಟ ನಡೆಸಿದರು.</p>.<p>ಮೈಸೂರಿನ ಹೈದರಾಲಿ ಮತ್ತು ಗಂಜಾಂನ ತೇಜ್ ಮಿರಿಂಡಾ ನಡುವೆ 20 ನಿಮಿಷಗಳ ಕಾಲ ನಡೆದ ಕುಸ್ತಿ ಗಮನ ಸೆಳೆಯಿತು. ಈ ಪಂದ್ಯದಲ್ಲಿ ತೇಜ್ ಮಿರಿಂಡಾ ಜಯಗಳಿಸಿದರು.</p>.<p>ಬನ್ನೂರಿನ ಮನೋಜ್ಗೌಡ ಮತ್ತು ಅರಳಕುಪ್ಪೆಯ ನವೀನ್ ನಡುವೆ ನಡೆದ ಕುಸ್ತಿ ರೋಚಕವಾಗಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.</p>.<p>ಕುಸ್ತಿ ಪಂದ್ಯಾವಳಿ ವೀಕ್ಷಿಸಲು ವಿವಿಧ ಊರುಗಳಿಂದಲೂ ಕುಸ್ತಿ ಪ್ರಿಯರು ಆಗಮಿಸಿದ್ದರು.</p>.<p>ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ಮಜ್ಜಿಗೆಪುರ ಶ್ರೀನಿವಾಸ್, ಪೈ.ಬಾಲು, ಬೆಳಗೊಳ ಸುರೇಶ್, ಪಾಲಹಳ್ಳಿ ನರಸಿಂಹ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ</strong>: ಪಟ್ಟಣದ ಸೆಂದಿಲ್ ಕೋಟೆ ಆವರಣಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯಾವಳಿ ರಂಜಿಸಿತು.</p>.<p>ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘವು, ಮಾಚಿದೇವರ ಜಯಂತಿ ನಿಮಿತ್ತ ಕುಸ್ತಿ ಪಂದ್ಯಾವಳಿ ಏರ್ಪಡಿಸಿತ್ತು.</p>.<p>ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಟೂರ್ನಿಗೆ ಚಾಲನೆ ನೀಡಿದರು.</p>.<p>‘ಕೊರೊನಾ ಭೀತಿಯಿಂದಾಗಿ ಒಂದು ವರ್ಷದಿಂದ ಪಟ್ಟಣದಲ್ಲಿ ಕುಸ್ತಿ ನಡೆದಿರಲಿಲ್ಲ. ಮಡಿವಾಳ ಮಾಚಿದೇವರ ಸಂಘ ಧೈರ್ಯ ಮಾಡಿ ಕುಸ್ತಿ ಏರ್ಪಡಿಸಿದೆ. ಕಂಠೀರವ ನರಸರಾಜ ಒಡೆಯರ್ ಕಾಲದಲ್ಲಿ ಕುಸ್ತಿ ಉತ್ತುಂಗದ ಸ್ಥಿತಿಯಲ್ಲಿತ್ತು. ಈ ಗಂಡು ಕಲೆ ಮುಂದಿನ ಪೀಳಿಗೆಗೂ ಉಳಿಯಬೇಕು’ ಎಂದು ಅವರು ಹೇಳಿದರು.</p>.<p>ಟೂರ್ನಿಯಲ್ಲಿ 30ಕ್ಕೂ ಹೆಚ್ಚು ಜತೆ ಪೈಲ್ವಾನರು ಸೆಣೆಸಾಟ ನಡೆಸಿದರು.</p>.<p>ಮೈಸೂರಿನ ಹೈದರಾಲಿ ಮತ್ತು ಗಂಜಾಂನ ತೇಜ್ ಮಿರಿಂಡಾ ನಡುವೆ 20 ನಿಮಿಷಗಳ ಕಾಲ ನಡೆದ ಕುಸ್ತಿ ಗಮನ ಸೆಳೆಯಿತು. ಈ ಪಂದ್ಯದಲ್ಲಿ ತೇಜ್ ಮಿರಿಂಡಾ ಜಯಗಳಿಸಿದರು.</p>.<p>ಬನ್ನೂರಿನ ಮನೋಜ್ಗೌಡ ಮತ್ತು ಅರಳಕುಪ್ಪೆಯ ನವೀನ್ ನಡುವೆ ನಡೆದ ಕುಸ್ತಿ ರೋಚಕವಾಗಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.</p>.<p>ಕುಸ್ತಿ ಪಂದ್ಯಾವಳಿ ವೀಕ್ಷಿಸಲು ವಿವಿಧ ಊರುಗಳಿಂದಲೂ ಕುಸ್ತಿ ಪ್ರಿಯರು ಆಗಮಿಸಿದ್ದರು.</p>.<p>ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ಮಜ್ಜಿಗೆಪುರ ಶ್ರೀನಿವಾಸ್, ಪೈ.ಬಾಲು, ಬೆಳಗೊಳ ಸುರೇಶ್, ಪಾಲಹಳ್ಳಿ ನರಸಿಂಹ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>