<p>ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಬುಧವಾರ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ರೈತರಿಗೆ ಕೃಷಿ ಜಾತ್ರೆಯಾಗಿ ಪರಿಣಿಮಿಸಿತು.<br /> <br /> ಮಂಡ್ಯದ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು, ಇತರೆ ಸಂಘಸಂಸ್ಥೆಗಳ ಸಹಕಾರ ದೊಂದಿಗೆ ಏರ್ಪಡಿಸಿದ್ದ ಕೃಷಿ ವಸ್ತ ಪ್ರದರ್ಶನ ಶಸ್ವಿಯಾಗಿ ಜರುಗಿತು.<br /> <br /> ಬೇಸಾಯ ಭೂಮಿಯ ಮಣ್ಣಿನ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬ ವಿವರ ಮತ್ತು ಮಣ್ಣು ರೈತನ ಕಣ್ಣು, ಮಣ್ಣು ಪರೀಕ್ಷೆ ಮಾಡಿಸಿದರೆ ರಕ್ತ ಪರೀಕ್ಷೆ ಮಾಡಿಸಿದಂತೆ ಎಂಬ ನುಡಿಗಟ್ಟುಗಳು ಕೃಷಿಕರು ಮಣ್ಣಿನ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ತಿಳಿಸುತ್ತಿದ್ದವು.<br /> <br /> ಭತ್ತದ ತಳಿಗಳಾದ ಜಯ, ತನು, ಐಆರ್ 64, ಪರಿಚಯ, ನಾಟಿ ಪದ್ದತಿ-ವೈಜ್ಞಾನಿಕ ಪದ್ದತಿಗಳ ಅಳವಡಿಸುವಿಕೆ. ರಾಗಿ ಬ್ರಹ್ಮ ರಾಗಿ ಲಕ್ಷ್ಮಣಯ್ಯ ಸಂಶೋಧನೆ ಮಾಡಿದ ರಾಗಿ ತಳಿಗಳ ಪ್ರದರ್ಶನ, `ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ~ ಫಲಕ ರಾಗಿಯ ಅವಶ್ಯಕತೆಗಳನ್ನು ತಿಳಿಯಪಡಿಸಿದರೆ, ಕಬ್ಬು ಬೆಳೆಯಿರಿ ಹೆಚ್ಚು ಲಾಭ ಗಳಿಸಿರಿ ಎಂಬ ಪ್ರೇರಣೆಯ ಮಾತು. ಕಬ್ಬಿನ ತರಗನ್ನು ಸುಡಬೇಡಿ ಗೊಬ್ಬರವಾದೀತು ಎಂಬ ನುಡಿ ರೈತರಿಗೆ ಕಬ್ಬಿನ ವಿವಿಧ ಬಗೆಯ ಅನುಕೂಲತೆಗಳ ಅರಿವನ್ನು ತಿಳಿಸುತ್ತಿತ್ತು.<br /> <br /> ಜಾನುವಾರುಗಳಿಗೆ ಬೇಕಾದ ವಿವಿಧ ಮೇವಿನ ಬೆಳೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅಣಬೆ ಬೇಸಾಯ ಮತ್ತು ಜೈವಿಕ ಗೊಬ್ಬರ ಬಳಕೆಯ ಅಗತ್ಯತೆಯನ್ನು ಪ್ರಚುರಪಡಿಸಲಾಯಿತು. <br /> <br /> ರೈತ ಮಿತ್ರ ಎರೆಹುಳುವಿನ ಎರೆಗೊಬ್ಬರ, ಜಪಾನ್ ಮಾದರಿ ತೊಟ್ಟಿ ಗೊಬ್ಬರ, ದ್ರವ ರೂಪದ ಗೊಬ್ಬರಗಳು ಬೇಸಾಯಕ್ಕೆ ಹೇಗೆ ಪೂರಕವಾಗಿ ಪರಿಣಮಿಸಿವೆ, ಕೃಷಿ ಯಂತ್ರೋಪಕರಣಗಳಿಂದ ಆಧುನಿಕ ಬೇಸಾಯ ಕೈಗೊಳ್ಳುವುದು ಹೇಗೆ, ಜಮೀನು ಉಳುವ, ನಾಟಿ ಮಾಡುವ, ಕಳೆ ತೆಗೆಯುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.<br /> <br /> ರಾಗಿ ಶಾವಿಗೆ, ರಾಗಿ ಬಿಸ್ಕತ್, ರಾಗಿ ನಿಪ್ಪಟ್ಟು, ರಾಗಿ ಉಂಡೆ, ರಾಗಿ ಚಕ್ರಮನಿ ಸೇವು, ಹಪ್ಪಳ ಮುಂತಾದ ಪ್ರದರ್ಶನಗಳು ಉದ್ದಿಮೆಗಾಗಿ ಸಿದ್ದ ಪಡಿಸಬಹುದಾದ ಮೌಲ್ಯ ವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದಾದ ಬಗ್ಗೆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬಿದವು.<br /> <br /> ಸುತ್ತಮುತ್ತಲಿನ ರೈತರು ಪ್ರದರ್ಶನಕ್ಕಿಟ್ಟಿದ್ದ ದೇಸಿಯ ತಳಿಗಳಾದ ಹಳ್ಳಿಕಾರ್ ಎತ್ತುಗಳು, ಹಸುಗಳು. ಸಂವರ್ಧನೆಗಾಗಿ ಟಗರಿನ ಆಯ್ಕೆಯ ಬರಹ ಹಾಗೂ ಕುರಿ, ಮೇಕೆ, ಟಗರು, ನಾಟಿ ಕೋಳಿ, ಮೊಲದ ಸಾಕಣೆಯ ಪ್ರದರ್ಶನಗಳು ರೈತರು ಬೇಸಾಯದ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಬುಧವಾರ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ರೈತರಿಗೆ ಕೃಷಿ ಜಾತ್ರೆಯಾಗಿ ಪರಿಣಿಮಿಸಿತು.<br /> <br /> ಮಂಡ್ಯದ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು, ಇತರೆ ಸಂಘಸಂಸ್ಥೆಗಳ ಸಹಕಾರ ದೊಂದಿಗೆ ಏರ್ಪಡಿಸಿದ್ದ ಕೃಷಿ ವಸ್ತ ಪ್ರದರ್ಶನ ಶಸ್ವಿಯಾಗಿ ಜರುಗಿತು.<br /> <br /> ಬೇಸಾಯ ಭೂಮಿಯ ಮಣ್ಣಿನ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬ ವಿವರ ಮತ್ತು ಮಣ್ಣು ರೈತನ ಕಣ್ಣು, ಮಣ್ಣು ಪರೀಕ್ಷೆ ಮಾಡಿಸಿದರೆ ರಕ್ತ ಪರೀಕ್ಷೆ ಮಾಡಿಸಿದಂತೆ ಎಂಬ ನುಡಿಗಟ್ಟುಗಳು ಕೃಷಿಕರು ಮಣ್ಣಿನ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ತಿಳಿಸುತ್ತಿದ್ದವು.<br /> <br /> ಭತ್ತದ ತಳಿಗಳಾದ ಜಯ, ತನು, ಐಆರ್ 64, ಪರಿಚಯ, ನಾಟಿ ಪದ್ದತಿ-ವೈಜ್ಞಾನಿಕ ಪದ್ದತಿಗಳ ಅಳವಡಿಸುವಿಕೆ. ರಾಗಿ ಬ್ರಹ್ಮ ರಾಗಿ ಲಕ್ಷ್ಮಣಯ್ಯ ಸಂಶೋಧನೆ ಮಾಡಿದ ರಾಗಿ ತಳಿಗಳ ಪ್ರದರ್ಶನ, `ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ~ ಫಲಕ ರಾಗಿಯ ಅವಶ್ಯಕತೆಗಳನ್ನು ತಿಳಿಯಪಡಿಸಿದರೆ, ಕಬ್ಬು ಬೆಳೆಯಿರಿ ಹೆಚ್ಚು ಲಾಭ ಗಳಿಸಿರಿ ಎಂಬ ಪ್ರೇರಣೆಯ ಮಾತು. ಕಬ್ಬಿನ ತರಗನ್ನು ಸುಡಬೇಡಿ ಗೊಬ್ಬರವಾದೀತು ಎಂಬ ನುಡಿ ರೈತರಿಗೆ ಕಬ್ಬಿನ ವಿವಿಧ ಬಗೆಯ ಅನುಕೂಲತೆಗಳ ಅರಿವನ್ನು ತಿಳಿಸುತ್ತಿತ್ತು.<br /> <br /> ಜಾನುವಾರುಗಳಿಗೆ ಬೇಕಾದ ವಿವಿಧ ಮೇವಿನ ಬೆಳೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅಣಬೆ ಬೇಸಾಯ ಮತ್ತು ಜೈವಿಕ ಗೊಬ್ಬರ ಬಳಕೆಯ ಅಗತ್ಯತೆಯನ್ನು ಪ್ರಚುರಪಡಿಸಲಾಯಿತು. <br /> <br /> ರೈತ ಮಿತ್ರ ಎರೆಹುಳುವಿನ ಎರೆಗೊಬ್ಬರ, ಜಪಾನ್ ಮಾದರಿ ತೊಟ್ಟಿ ಗೊಬ್ಬರ, ದ್ರವ ರೂಪದ ಗೊಬ್ಬರಗಳು ಬೇಸಾಯಕ್ಕೆ ಹೇಗೆ ಪೂರಕವಾಗಿ ಪರಿಣಮಿಸಿವೆ, ಕೃಷಿ ಯಂತ್ರೋಪಕರಣಗಳಿಂದ ಆಧುನಿಕ ಬೇಸಾಯ ಕೈಗೊಳ್ಳುವುದು ಹೇಗೆ, ಜಮೀನು ಉಳುವ, ನಾಟಿ ಮಾಡುವ, ಕಳೆ ತೆಗೆಯುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.<br /> <br /> ರಾಗಿ ಶಾವಿಗೆ, ರಾಗಿ ಬಿಸ್ಕತ್, ರಾಗಿ ನಿಪ್ಪಟ್ಟು, ರಾಗಿ ಉಂಡೆ, ರಾಗಿ ಚಕ್ರಮನಿ ಸೇವು, ಹಪ್ಪಳ ಮುಂತಾದ ಪ್ರದರ್ಶನಗಳು ಉದ್ದಿಮೆಗಾಗಿ ಸಿದ್ದ ಪಡಿಸಬಹುದಾದ ಮೌಲ್ಯ ವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದಾದ ಬಗ್ಗೆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬಿದವು.<br /> <br /> ಸುತ್ತಮುತ್ತಲಿನ ರೈತರು ಪ್ರದರ್ಶನಕ್ಕಿಟ್ಟಿದ್ದ ದೇಸಿಯ ತಳಿಗಳಾದ ಹಳ್ಳಿಕಾರ್ ಎತ್ತುಗಳು, ಹಸುಗಳು. ಸಂವರ್ಧನೆಗಾಗಿ ಟಗರಿನ ಆಯ್ಕೆಯ ಬರಹ ಹಾಗೂ ಕುರಿ, ಮೇಕೆ, ಟಗರು, ನಾಟಿ ಕೋಳಿ, ಮೊಲದ ಸಾಕಣೆಯ ಪ್ರದರ್ಶನಗಳು ರೈತರು ಬೇಸಾಯದ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>