<p><span style="font-size: 26px;"><strong>ಮಂಡ್ಯ</strong>: ನಗರದಲ್ಲಿ ಈಗ ಅಲ್ಲಲ್ಲಿ ಜನರು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯ, ಸಾಲ ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿರುತ್ತಾರೆ.</span><br /> <br /> ಕಳೆದ ಒಂದು ವಾರದಿಂದ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮುಂದೆ ನಿಗಮದ ವಿವಿಧ ಯೋಜನೆಗಳಡಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ಪಡೆಯಲು ಉದ್ದನೆಯ ಸಾಲು ಕಾಣ ಸಿಗುತ್ತಿದೆ.<br /> <br /> ಅರಿವು, ಚೈತನ್ಯ, ಗಂಗ ಕಲ್ಯಾಣ, ಸ್ವಪೂರ್ಣಿಮಾ ಸೇರಿದಂತೆ ಹಲವು ಯೋಜನೆಗಳಿಗೆ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.<br /> <br /> ಕಚೇರಿ ಬೆಳಿಗ್ಗೆ 10.30ಕ್ಕೆ ಆರಂಭವಾ ಗುತ್ತದೆಯಾದರೂ ಕಚೇರಿ ಮುಂದೆ ಬೆಳಿಗ್ಗೆ 8 ಗಂಟೆಯಿಂದಲೇ ಜನರು ಅರ್ಜಿ ಸಲ್ಲಿಸಲು ಕಾದು ಕುಳಿತಿರುತ್ತಾರೆ. ಸಂಜೆ 5 ಗಂಟೆಯವರೆಗೂ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ.<br /> <br /> ಪ್ರತಿ ವರ್ಷ 4,500 ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಈ ಬಾರಿ ಈಗಾಗಲೇ ಆ ಸಂಖ್ಯೆ ಮುಟ್ಟಿದೆ. ಇನ್ನೂ 2 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.<br /> <br /> ಹಿಂದಿನ ಬಾರಿ ಅರ್ಜಿ ಹಾಕಿದ್ದೇವು ಸಾಲ ಲಭಿಸಿರಲಿಲ್ಲ. ಈ ಬಾರಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಸಿಗುವುದೆಂಬ ವಿಶ್ವಾಸವಿದೆ ಎನ್ನುತ್ತಾರೆ ಮದ್ದೂರಿನ ನಿವಾಸಿ ಕಾಳೇಗೌಡ.<br /> <br /> ಆಧಾರ: ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಆಧಾರ ಕಾರ್ಡ್ ಪಡೆಯಲೂ ನಗರದ ಅಂಚೆ ಕಚೇರಿ ಮುಂದೆ ಬೆಳಿಗ್ಗೆ 7 ಗಂಟೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ.<br /> <br /> ದಿನಕ್ಕೆ 40 ರಿಂದ 50 ಆಧಾರ್ ಕಾರ್ಡ್ಗಳನ್ನು ಮಾತ್ರ ವಿತರಿಸುವುದರಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಒಮ್ಮೆಮ್ಮ ಕಾರ್ಡ್ ಸಿಗುವುದಿಲ್ಲ.<br /> ಬೇರೆ, ಬೇರೆ ಕಡೆ ಕಾರ್ಡ್ ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ. ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳನ್ನು ನೀಡದ್ದರಿಂದಾಗಿ ಅಲ್ಲಿಯೂ ಸರಿಯಾಗಿ ನಡೆಯತ್ತಿಲ್ಲ. ಕಾರ್ಡ್ ಪಡೆಯಲು ಜನರು ಹರಸಾಹಸ ಪಡುವಂತಾಗಿದೆ.<br /> <br /> ಪಡಿತರ ಚೀಟಿ: ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಅಕ್ಕಿ ನೀಡಲು ಆರಂಭಿಸಿದ ಮೇಲೆ ಬಿಪಿಎಲ್ ಪಡಿತರ ಚೀಟಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪಡಿತರ ಚೀಟಿ ವಿತರಣಾ ಕೇಂದ್ರಗಳ ಮುಂದೆ ಜನರ ಸಾಲೂ ದೊಡ್ಡದಾಗಿದೆ.<br /> <br /> ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿಗಳ ಸಲ್ಲಿಕೆಯಾಗುತ್ತಲೇ ಇದೆ. ಚೀಟಿ ಪಡೆಯುವ ಪ್ರಕ್ರಿಯೆಯೂ ನಡೆದೇ ಇದೆ. ಒಂದು ದಿನ ಕೆಲಸಕ್ಕೆ ಹೋಗುವುದನ್ನು ಬಿಟ್ಟು ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.<br /> <br /> ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆದಾಯ ಪ್ರಮಾಣಪತ್ರ ಪಡೆಯಲೂ ತಹಶೀಲ್ದಾರ್ ಕಚೇರಿಯ ಮುಂದೆ ಸಾಲಿರುತ್ತದೆ.<br /> ಕೆಲವು ಕಡೆಗಳಲ್ಲಿ ಕೌಂಟರ್ ಅಥವಾ ಕೇಂದ್ರಗಳನ್ನು ಹೆಚ್ಚಿಸಬೇಕು. ಆ ಮೂಲಕ ಒತ್ತಡವನ್ನು ಕಡಿಮೆ ಮಾಡಿ, ಜನರು ಶೀಘ್ರವಾಗಿ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮಂಡ್ಯ</strong>: ನಗರದಲ್ಲಿ ಈಗ ಅಲ್ಲಲ್ಲಿ ಜನರು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯ, ಸಾಲ ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿರುತ್ತಾರೆ.</span><br /> <br /> ಕಳೆದ ಒಂದು ವಾರದಿಂದ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮುಂದೆ ನಿಗಮದ ವಿವಿಧ ಯೋಜನೆಗಳಡಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ಪಡೆಯಲು ಉದ್ದನೆಯ ಸಾಲು ಕಾಣ ಸಿಗುತ್ತಿದೆ.<br /> <br /> ಅರಿವು, ಚೈತನ್ಯ, ಗಂಗ ಕಲ್ಯಾಣ, ಸ್ವಪೂರ್ಣಿಮಾ ಸೇರಿದಂತೆ ಹಲವು ಯೋಜನೆಗಳಿಗೆ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.<br /> <br /> ಕಚೇರಿ ಬೆಳಿಗ್ಗೆ 10.30ಕ್ಕೆ ಆರಂಭವಾ ಗುತ್ತದೆಯಾದರೂ ಕಚೇರಿ ಮುಂದೆ ಬೆಳಿಗ್ಗೆ 8 ಗಂಟೆಯಿಂದಲೇ ಜನರು ಅರ್ಜಿ ಸಲ್ಲಿಸಲು ಕಾದು ಕುಳಿತಿರುತ್ತಾರೆ. ಸಂಜೆ 5 ಗಂಟೆಯವರೆಗೂ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ.<br /> <br /> ಪ್ರತಿ ವರ್ಷ 4,500 ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಈ ಬಾರಿ ಈಗಾಗಲೇ ಆ ಸಂಖ್ಯೆ ಮುಟ್ಟಿದೆ. ಇನ್ನೂ 2 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.<br /> <br /> ಹಿಂದಿನ ಬಾರಿ ಅರ್ಜಿ ಹಾಕಿದ್ದೇವು ಸಾಲ ಲಭಿಸಿರಲಿಲ್ಲ. ಈ ಬಾರಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಸಿಗುವುದೆಂಬ ವಿಶ್ವಾಸವಿದೆ ಎನ್ನುತ್ತಾರೆ ಮದ್ದೂರಿನ ನಿವಾಸಿ ಕಾಳೇಗೌಡ.<br /> <br /> ಆಧಾರ: ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಆಧಾರ ಕಾರ್ಡ್ ಪಡೆಯಲೂ ನಗರದ ಅಂಚೆ ಕಚೇರಿ ಮುಂದೆ ಬೆಳಿಗ್ಗೆ 7 ಗಂಟೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ.<br /> <br /> ದಿನಕ್ಕೆ 40 ರಿಂದ 50 ಆಧಾರ್ ಕಾರ್ಡ್ಗಳನ್ನು ಮಾತ್ರ ವಿತರಿಸುವುದರಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಒಮ್ಮೆಮ್ಮ ಕಾರ್ಡ್ ಸಿಗುವುದಿಲ್ಲ.<br /> ಬೇರೆ, ಬೇರೆ ಕಡೆ ಕಾರ್ಡ್ ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ. ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳನ್ನು ನೀಡದ್ದರಿಂದಾಗಿ ಅಲ್ಲಿಯೂ ಸರಿಯಾಗಿ ನಡೆಯತ್ತಿಲ್ಲ. ಕಾರ್ಡ್ ಪಡೆಯಲು ಜನರು ಹರಸಾಹಸ ಪಡುವಂತಾಗಿದೆ.<br /> <br /> ಪಡಿತರ ಚೀಟಿ: ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಅಕ್ಕಿ ನೀಡಲು ಆರಂಭಿಸಿದ ಮೇಲೆ ಬಿಪಿಎಲ್ ಪಡಿತರ ಚೀಟಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪಡಿತರ ಚೀಟಿ ವಿತರಣಾ ಕೇಂದ್ರಗಳ ಮುಂದೆ ಜನರ ಸಾಲೂ ದೊಡ್ಡದಾಗಿದೆ.<br /> <br /> ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿಗಳ ಸಲ್ಲಿಕೆಯಾಗುತ್ತಲೇ ಇದೆ. ಚೀಟಿ ಪಡೆಯುವ ಪ್ರಕ್ರಿಯೆಯೂ ನಡೆದೇ ಇದೆ. ಒಂದು ದಿನ ಕೆಲಸಕ್ಕೆ ಹೋಗುವುದನ್ನು ಬಿಟ್ಟು ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.<br /> <br /> ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆದಾಯ ಪ್ರಮಾಣಪತ್ರ ಪಡೆಯಲೂ ತಹಶೀಲ್ದಾರ್ ಕಚೇರಿಯ ಮುಂದೆ ಸಾಲಿರುತ್ತದೆ.<br /> ಕೆಲವು ಕಡೆಗಳಲ್ಲಿ ಕೌಂಟರ್ ಅಥವಾ ಕೇಂದ್ರಗಳನ್ನು ಹೆಚ್ಚಿಸಬೇಕು. ಆ ಮೂಲಕ ಒತ್ತಡವನ್ನು ಕಡಿಮೆ ಮಾಡಿ, ಜನರು ಶೀಘ್ರವಾಗಿ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>