<p><span style="font-size: 26px;">ಮಂಡ್ಯ: ರಕ್ತ ಬೇಕಾಗಿದೆ !</span><br /> ಅಪಘಾತ, ಪ್ರಸವ, ಶಸ್ತ್ರ ಚಿಕಿತ್ಸೆ ಅಥವಾ ರಕ್ತ ಅಗತ್ಯವಿರುವ ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ರೋಗಿಯ ಸಂಬಂಧಿಕರಿಗೆ ಗಂಭೀರವಾಗಿ ಕಾಡುವ ಪ್ರಶ್ನೆ ಇದು.<br /> <br /> ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಹೆಸರೇನು, ರಕ್ತದ ಗುಂಪು ಯಾವುದು ಎಂಬ ಪ್ರಶ್ನೆ ಜೊತೆಗೆ, `.. ಗುಂಪಿನ ರಕ್ತ ಬೇಕು. ಡೋನರ್ಸ್ ಇದ್ರೆ ನೋಡಿ' ಎಂಬ ಸಲಹೆಯೂ ಬರುತ್ತದೆ. ದಾನಿಗಳನ್ನು ಹುಡುಕುತ್ತಾ ಹೊರಟಾಗ ಪ್ರತಿಕ್ರಿಯೆ ಪಾಸಿಟಿವ್ ಇದ್ದರೆ ಗೆದ್ದೆವು. ನೆಗೆಟಿವ್ ಆದರೆ ಸಂಬಂಧಿಕರ ಪರಿಸ್ಥಿತಿ, ರೋಗಿಗಿಂತಲೂ ಗಂಭೀರ !<br /> <br /> ಅದರಲ್ಲೂ, ಪಾಸಿಟಿವ್ ಗುಂಪಿನ ರಕ್ತ ಸಿಗಬಹುದೇನೋ. ಗುಂಪು ನೆಗೆಟಿವ್ ಇದ್ದರಂತೂ ಪರಿಸ್ಥಿತಿ ವಿವರಿಸುವುದೇ ಬೇಡ. ಆತಂಕ, ದುಃಖದಿಂದಾಗಿ ಆಗ ಕಣ್ಣಲ್ಲಿ ನೀರಷ್ಟೇ ಅಲ್ಲ; ರಕ್ತವೇ ಹರಿಯಬಹುದೇನೋ !<br /> <br /> ಹೀಗೆ, ಎದುರಾದ ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಪಾಸಿಟಿವ್ ಆಗಿ ಪರಿಗಣಿಸಿದ ಯುವಕನೊಬ್ಬ ರಕ್ತ ಸಂಗ್ರಹದ ಅಭಿಯಾನ ಅರಂಭಿಸಿದ ಬೆಳವಣಿಗೆ ಇದು.<br /> ಸ್ವತಃ ರಕ್ತದಾನ ಮಾಡುವುದರ ಜತೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ, ಅದೆಷ್ಟೋ, ಜೀವಗಳ ಪಾಲಿಗೆ ಅಕ್ಷರಶಃ `ಜೀವ ರಕ್ಷಕ'ನಾಗಿದ್ದಾರೆ. ಅವರು ಎಸ್.ಎಂ. ನಟರಾಜು. ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಹುಟ್ಟೂರು. ಮಂಡ್ಯದ ಮಾರುಕಟ್ಟೆಯ ಅಂಗಳದಲ್ಲಿ ಪುಟ್ಟದೊಂದು ಕ್ಯಾಂಟೀನ್ ನಡೆಸುತ್ತಾರೆ. ಅದು, ಅವರ ಬದುಕಿನ ಜೀವಧಾರೆ.<br /> <br /> `ನೊಂದ ಮನಗಳ ಜೊತೆಗೆ ನಮ್ಮ ಹೆಜ್ಜೆ' ಎನ್ನುವ ಟ್ಯಾಗ್ಲೈನ್ನೊಂದಿಗೆ ಸಮಾನಮನಸ್ಕ ಗೆಳೆಯರೊಡಗೂಡಿ `ಜೀವಧಾರೆ ಟ್ರಸ್ಟ್' ಸ್ಥಾಪಿಸ್ದ್ದಿದಾರೆ. ಕಷ್ಟದಲ್ಲಿದ್ದವರಿಗೆ ರಕ್ತದ ನೆರವು ಒದಗಿಸಿ ಅವರಿಗೂ ಜೀವಧಾರೆ ಆಗುವುದು ಇದರ ಉದ್ದೇಶ.<br /> <br /> 2002ನೇ ಇಸವಿಯಲ್ಲಿ ಅನಾರೋಗ್ಯದಿಂದ ಇದ್ದ ಗೆಳೆಯನ ಪತ್ನಿಗೆ ರಕ್ತಕ್ಕೆ ಒದಗಿಸಲು ಎದುರಾದ ಸಮಸ್ಯೆಯೇ ಇವರಿಗೆ ರಕ್ತದಾನ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ.<br /> <br /> `ಒಳ್ಳೆಯ ಕೆಲಸ ಮಾಡ್ತಿದ್ದಿ ಮುಂದುವರೆಸು...' ಎಂಬ ಶಿಕ್ಷಕ ಸಿದ್ದಯ್ಯ, ಅಣ್ಣ ಪರಶಿವಮೂರ್ತಿ ಮಾತುಗಳೂ ಉತ್ಸಾಹ ಮೂಡಿಸಿತ್ತು. ವ್ಯವಸ್ಥಿತವಾಗಿ ಈ ಕಾಯಕ ಮುಂದುವರೆಸಬೇಕೆಂಬ ಸ್ನೇಹಿತರ ಸಲಹೆಯೇ `ಜೀವಧಾರೆ ಸ್ವಯಂ ಪ್ರೇರಿತ ರಕ್ತದಾನಿಗಳ ಟ್ರಸ್ಟ್' ಹುಟ್ಟಿಗೆ ಕಾರಣವಾಯಿತು' ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾರೆ ನಟರಾಜ್.<br /> <br /> `ರಕ್ತದಾನಿಗಳೇ ನಮ್ಮಡನೆ ಬನ್ನಿ, ಜೀವ ಜೀವಗಳ ಬೆಸುಗೆ ಹಾಕೋಣ' ಎನ್ನುವ ಪ್ರೀತಿಯ ಕರೆಗೆ ಸುಮಾರು 2500ಕ್ಕೂ ಹೆಚ್ಚು ಮಂದಿ ಓಗೊಟ್ಟಿದ್ದಾರೆ. ಆಟೋ ಚಾಲಕರು, ಕಾರ್ಮಿಕರು, ಗ್ರಾಮೀಣ ಯುವಕರು, ಕಾಲೇಜು ವಿದ್ಯಾರ್ಥಿಗಳು, ಕೆಲ ಉದ್ಯೋಗಿಗಳು, ತರಕಾರಿ ವ್ಯಾಪಾರಿಗಳೇ `ಜೀವಧಾರೆ' ಕುಟುಂಬದ ಸದಸ್ಯರು.<br /> <br /> `ಜೀವ ರಕ್ಷಕ' ಯುವ ಪಡೆಯಲ್ಲಿ ಪಿ.ಪ್ರಶಾಂತ್, ಜಿ.ಕಿರಣ್, ಎ.ಆರ್.ರವಿ, ಶಶಿಧರ್, ಕೆ.ಟಿ.ಹನುಮೇಶ್, ಎಂ.ಸಿ.ಲಂಕೇಶ್, ಆನಂದ್, ವೈರಮುಡಿ, ಚೆಲುವರಾಜು, ಪ್ರಶಾಂತ್, ಜಿ.ಎಸ್.ಶಿಲ್ಪಾ ಸೇರಿದಂತೆ ಅನೇಕರು ಇದ್ದಾರೆ. ಮಂಡ್ಯದಲ್ಲಷ್ಟೇ ಅಲ್ಲದೆ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರದಲ್ಲೂ ಈ ಟ್ರಸ್ಟ್ ಕೆಲಸ ನಿರ್ವಹಿಸುತ್ತಿದೆ. `150ಕ್ಕೂ ಹೆಚ್ಚು ಶಿಬಿರ ಸಂಘಟಿಸಿದ್ದೇನೆ, 11,000ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ನೀಡಿದ್ದೇನೆ. ದಿನದ 24 ಗಂಟೆಯೂ ಸೇವೆಗೆ ಲಭ್ಯ. ರಕ್ತ ಅಗತ್ಯವಿರುವವರು ಕರೆ ಮಾಡಿದರೆ, ಆಯಾ ಜಿಲ್ಲೆಯಲ್ಲೇ, ರಕ್ತದಾನಿಗಳಿಂದ ರಕ್ತಕ್ಕೆ ವ್ಯವಸ್ಥೆ ಮಾಡತ್ತೇನೆ' ಎನ್ನುತ್ತಾರೆ ನಟರಾಜು.<br /> <br /> ರಕ್ತದಾನ ಬಗೆಗೆ ಜಾಗೃತಿ ಕಾರ್ಯಕ್ರಮಗಳು, ಶಿಬಿರಗಳನ್ನೂ ನಡೆಸುತ್ತಾ ಬಂದಿರುವ ಟ್ರಸ್ಟ್ಗೆ, ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ದಾನಿಗಳಿಗೆ ಹಣ್ಣುಹಂಪಲು, ಮೊಳಕೆ ಕಾಳು ನೀಡಬೇಕು. ಆ ವೆಚ್ಚವನ್ನಾದರೂ ಭರಿಸಲು ಹಣ ಬೇಕು. ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡುತ್ತಾರೆ.<br /> ನಟರಾಜು ಅವರ ನಿಸ್ವಾರ್ಥ ಕಾಯಕಕ್ಕೆ ಜಿಲ್ಲಾ ಯುವ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಸ್ವೀಕರಿಸಿದ ನಾನು ಸಾಂಕೇತಿಕ. ಇದರ ಶ್ರೇಯ, ನನ್ನ ಜೊತೆ ನಿಂತ `ರಕ್ತದಾನಿ'ಗಳಿಗೆ ಸಲ್ಲಬೇಕು ಎನ್ನುತ್ತಾರೆ.<br /> <br /> `ಪ್ರಾಣ ಕೊಟ್ಟೇವು, ರಕ್ತ ಕೊಟ್ಟೇವು..' ಎಂಬ ಘೋಷಣೆಗಳು ಆಗಾಗ್ಗೆ ಕೇಳಿಬಂದರೂ ರಕ್ತದ ಅಗತ್ಯ ಇದ್ದಾಗ ಇಂಥವು ನೆರವಿಗೆ ಬರುವುದಿಲ್ಲ. ಆದರೆ, ಇದಕ್ಕೆ ಭಿನ್ನ ಎನ್ನುವಂತೆ ನಟರಾಜ್ ಮತ್ತು ಆತನ `ಜೀವ ರಕ್ಷಕ ಪಡೆ' ಸದ್ದಿಲ್ಲದೆ ಕೆಲಸ ಮುಂದುವರೆಸಿಕೊಂಡು ಹೋಗುತ್ತದೆ. ನಟರಾಜು ಅವರ ಮೊ.ಸಂ. 97431-91816.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಮಂಡ್ಯ: ರಕ್ತ ಬೇಕಾಗಿದೆ !</span><br /> ಅಪಘಾತ, ಪ್ರಸವ, ಶಸ್ತ್ರ ಚಿಕಿತ್ಸೆ ಅಥವಾ ರಕ್ತ ಅಗತ್ಯವಿರುವ ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ರೋಗಿಯ ಸಂಬಂಧಿಕರಿಗೆ ಗಂಭೀರವಾಗಿ ಕಾಡುವ ಪ್ರಶ್ನೆ ಇದು.<br /> <br /> ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಹೆಸರೇನು, ರಕ್ತದ ಗುಂಪು ಯಾವುದು ಎಂಬ ಪ್ರಶ್ನೆ ಜೊತೆಗೆ, `.. ಗುಂಪಿನ ರಕ್ತ ಬೇಕು. ಡೋನರ್ಸ್ ಇದ್ರೆ ನೋಡಿ' ಎಂಬ ಸಲಹೆಯೂ ಬರುತ್ತದೆ. ದಾನಿಗಳನ್ನು ಹುಡುಕುತ್ತಾ ಹೊರಟಾಗ ಪ್ರತಿಕ್ರಿಯೆ ಪಾಸಿಟಿವ್ ಇದ್ದರೆ ಗೆದ್ದೆವು. ನೆಗೆಟಿವ್ ಆದರೆ ಸಂಬಂಧಿಕರ ಪರಿಸ್ಥಿತಿ, ರೋಗಿಗಿಂತಲೂ ಗಂಭೀರ !<br /> <br /> ಅದರಲ್ಲೂ, ಪಾಸಿಟಿವ್ ಗುಂಪಿನ ರಕ್ತ ಸಿಗಬಹುದೇನೋ. ಗುಂಪು ನೆಗೆಟಿವ್ ಇದ್ದರಂತೂ ಪರಿಸ್ಥಿತಿ ವಿವರಿಸುವುದೇ ಬೇಡ. ಆತಂಕ, ದುಃಖದಿಂದಾಗಿ ಆಗ ಕಣ್ಣಲ್ಲಿ ನೀರಷ್ಟೇ ಅಲ್ಲ; ರಕ್ತವೇ ಹರಿಯಬಹುದೇನೋ !<br /> <br /> ಹೀಗೆ, ಎದುರಾದ ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಪಾಸಿಟಿವ್ ಆಗಿ ಪರಿಗಣಿಸಿದ ಯುವಕನೊಬ್ಬ ರಕ್ತ ಸಂಗ್ರಹದ ಅಭಿಯಾನ ಅರಂಭಿಸಿದ ಬೆಳವಣಿಗೆ ಇದು.<br /> ಸ್ವತಃ ರಕ್ತದಾನ ಮಾಡುವುದರ ಜತೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ, ಅದೆಷ್ಟೋ, ಜೀವಗಳ ಪಾಲಿಗೆ ಅಕ್ಷರಶಃ `ಜೀವ ರಕ್ಷಕ'ನಾಗಿದ್ದಾರೆ. ಅವರು ಎಸ್.ಎಂ. ನಟರಾಜು. ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಹುಟ್ಟೂರು. ಮಂಡ್ಯದ ಮಾರುಕಟ್ಟೆಯ ಅಂಗಳದಲ್ಲಿ ಪುಟ್ಟದೊಂದು ಕ್ಯಾಂಟೀನ್ ನಡೆಸುತ್ತಾರೆ. ಅದು, ಅವರ ಬದುಕಿನ ಜೀವಧಾರೆ.<br /> <br /> `ನೊಂದ ಮನಗಳ ಜೊತೆಗೆ ನಮ್ಮ ಹೆಜ್ಜೆ' ಎನ್ನುವ ಟ್ಯಾಗ್ಲೈನ್ನೊಂದಿಗೆ ಸಮಾನಮನಸ್ಕ ಗೆಳೆಯರೊಡಗೂಡಿ `ಜೀವಧಾರೆ ಟ್ರಸ್ಟ್' ಸ್ಥಾಪಿಸ್ದ್ದಿದಾರೆ. ಕಷ್ಟದಲ್ಲಿದ್ದವರಿಗೆ ರಕ್ತದ ನೆರವು ಒದಗಿಸಿ ಅವರಿಗೂ ಜೀವಧಾರೆ ಆಗುವುದು ಇದರ ಉದ್ದೇಶ.<br /> <br /> 2002ನೇ ಇಸವಿಯಲ್ಲಿ ಅನಾರೋಗ್ಯದಿಂದ ಇದ್ದ ಗೆಳೆಯನ ಪತ್ನಿಗೆ ರಕ್ತಕ್ಕೆ ಒದಗಿಸಲು ಎದುರಾದ ಸಮಸ್ಯೆಯೇ ಇವರಿಗೆ ರಕ್ತದಾನ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ.<br /> <br /> `ಒಳ್ಳೆಯ ಕೆಲಸ ಮಾಡ್ತಿದ್ದಿ ಮುಂದುವರೆಸು...' ಎಂಬ ಶಿಕ್ಷಕ ಸಿದ್ದಯ್ಯ, ಅಣ್ಣ ಪರಶಿವಮೂರ್ತಿ ಮಾತುಗಳೂ ಉತ್ಸಾಹ ಮೂಡಿಸಿತ್ತು. ವ್ಯವಸ್ಥಿತವಾಗಿ ಈ ಕಾಯಕ ಮುಂದುವರೆಸಬೇಕೆಂಬ ಸ್ನೇಹಿತರ ಸಲಹೆಯೇ `ಜೀವಧಾರೆ ಸ್ವಯಂ ಪ್ರೇರಿತ ರಕ್ತದಾನಿಗಳ ಟ್ರಸ್ಟ್' ಹುಟ್ಟಿಗೆ ಕಾರಣವಾಯಿತು' ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾರೆ ನಟರಾಜ್.<br /> <br /> `ರಕ್ತದಾನಿಗಳೇ ನಮ್ಮಡನೆ ಬನ್ನಿ, ಜೀವ ಜೀವಗಳ ಬೆಸುಗೆ ಹಾಕೋಣ' ಎನ್ನುವ ಪ್ರೀತಿಯ ಕರೆಗೆ ಸುಮಾರು 2500ಕ್ಕೂ ಹೆಚ್ಚು ಮಂದಿ ಓಗೊಟ್ಟಿದ್ದಾರೆ. ಆಟೋ ಚಾಲಕರು, ಕಾರ್ಮಿಕರು, ಗ್ರಾಮೀಣ ಯುವಕರು, ಕಾಲೇಜು ವಿದ್ಯಾರ್ಥಿಗಳು, ಕೆಲ ಉದ್ಯೋಗಿಗಳು, ತರಕಾರಿ ವ್ಯಾಪಾರಿಗಳೇ `ಜೀವಧಾರೆ' ಕುಟುಂಬದ ಸದಸ್ಯರು.<br /> <br /> `ಜೀವ ರಕ್ಷಕ' ಯುವ ಪಡೆಯಲ್ಲಿ ಪಿ.ಪ್ರಶಾಂತ್, ಜಿ.ಕಿರಣ್, ಎ.ಆರ್.ರವಿ, ಶಶಿಧರ್, ಕೆ.ಟಿ.ಹನುಮೇಶ್, ಎಂ.ಸಿ.ಲಂಕೇಶ್, ಆನಂದ್, ವೈರಮುಡಿ, ಚೆಲುವರಾಜು, ಪ್ರಶಾಂತ್, ಜಿ.ಎಸ್.ಶಿಲ್ಪಾ ಸೇರಿದಂತೆ ಅನೇಕರು ಇದ್ದಾರೆ. ಮಂಡ್ಯದಲ್ಲಷ್ಟೇ ಅಲ್ಲದೆ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರದಲ್ಲೂ ಈ ಟ್ರಸ್ಟ್ ಕೆಲಸ ನಿರ್ವಹಿಸುತ್ತಿದೆ. `150ಕ್ಕೂ ಹೆಚ್ಚು ಶಿಬಿರ ಸಂಘಟಿಸಿದ್ದೇನೆ, 11,000ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ನೀಡಿದ್ದೇನೆ. ದಿನದ 24 ಗಂಟೆಯೂ ಸೇವೆಗೆ ಲಭ್ಯ. ರಕ್ತ ಅಗತ್ಯವಿರುವವರು ಕರೆ ಮಾಡಿದರೆ, ಆಯಾ ಜಿಲ್ಲೆಯಲ್ಲೇ, ರಕ್ತದಾನಿಗಳಿಂದ ರಕ್ತಕ್ಕೆ ವ್ಯವಸ್ಥೆ ಮಾಡತ್ತೇನೆ' ಎನ್ನುತ್ತಾರೆ ನಟರಾಜು.<br /> <br /> ರಕ್ತದಾನ ಬಗೆಗೆ ಜಾಗೃತಿ ಕಾರ್ಯಕ್ರಮಗಳು, ಶಿಬಿರಗಳನ್ನೂ ನಡೆಸುತ್ತಾ ಬಂದಿರುವ ಟ್ರಸ್ಟ್ಗೆ, ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ದಾನಿಗಳಿಗೆ ಹಣ್ಣುಹಂಪಲು, ಮೊಳಕೆ ಕಾಳು ನೀಡಬೇಕು. ಆ ವೆಚ್ಚವನ್ನಾದರೂ ಭರಿಸಲು ಹಣ ಬೇಕು. ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡುತ್ತಾರೆ.<br /> ನಟರಾಜು ಅವರ ನಿಸ್ವಾರ್ಥ ಕಾಯಕಕ್ಕೆ ಜಿಲ್ಲಾ ಯುವ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಸ್ವೀಕರಿಸಿದ ನಾನು ಸಾಂಕೇತಿಕ. ಇದರ ಶ್ರೇಯ, ನನ್ನ ಜೊತೆ ನಿಂತ `ರಕ್ತದಾನಿ'ಗಳಿಗೆ ಸಲ್ಲಬೇಕು ಎನ್ನುತ್ತಾರೆ.<br /> <br /> `ಪ್ರಾಣ ಕೊಟ್ಟೇವು, ರಕ್ತ ಕೊಟ್ಟೇವು..' ಎಂಬ ಘೋಷಣೆಗಳು ಆಗಾಗ್ಗೆ ಕೇಳಿಬಂದರೂ ರಕ್ತದ ಅಗತ್ಯ ಇದ್ದಾಗ ಇಂಥವು ನೆರವಿಗೆ ಬರುವುದಿಲ್ಲ. ಆದರೆ, ಇದಕ್ಕೆ ಭಿನ್ನ ಎನ್ನುವಂತೆ ನಟರಾಜ್ ಮತ್ತು ಆತನ `ಜೀವ ರಕ್ಷಕ ಪಡೆ' ಸದ್ದಿಲ್ಲದೆ ಕೆಲಸ ಮುಂದುವರೆಸಿಕೊಂಡು ಹೋಗುತ್ತದೆ. ನಟರಾಜು ಅವರ ಮೊ.ಸಂ. 97431-91816.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>