<p>ಮಂಡ್ಯ: ವಿದ್ಯಾನಗರದಲ್ಲಿರುವ ಮಂಗಳ ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ವೈ.ಎಚ್. ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ಮಾಡಿದರು.<br /> <br /> ವೈದ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ದೂರು ನೀಡಿದರೆ ವೃತ್ತಿ ಹೇಗೆ ಮುಂದುವರೆಸುತ್ತೀರಿ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.<br /> <br /> ಘಟನೆಯು ಕ್ಲಿನಿಕ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ವೈದ್ಯರ ಆಸ್ಪತ್ರೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.<br /> <br /> ಹಲ್ಲು ಕೀಳಿಸಲು ಬಂದಿದ್ದ ಸೌಮ್ಯ ಎಂಬುವವರು ಅವ್ಯಾಚ್ಯ ನಿಂದಿಸಿ ಹೋದರು. ನಂತರ ಅವರ ಪತಿ ಎನ್ನಲಾದ ಅರುಣ್ ಅವರೊಂದಿಗೆ 10ಕ್ಕೂ ಹೆಚ್ಚು ಮಂದಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದರು ಎಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.<br /> <br /> <strong>ಮಹಿಳಾ ದಿನಾಚರಣೆ: ಸೀತಾಪಹರಣ ನಾಟಕ</strong><br /> ಮಂಡ್ಯ: ಭೈರವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ದಿನ ಅಂಗವಾಗಿ ಮಾ.8 ರಂದು ನಗರದ ಕಲಾ ಮಂದಿರದಲ್ಲಿ ಹವ್ಯಾಸಿ ಮಹಿಳಾ ಕಲಾವಿದರೇ ಅಭಿನಯಿಸಿರುವ ‘ಸೀತಾಪಹರಣ’ ನಾಟಕ ಪ್ರದರ್ಶನಗೊಳ್ಳಲಿದೆ.<br /> <br /> ಗುರುವಾರ ಸುದ್ದಿಗಾರರಿಗೆ ವಿಷಯ ತಿಳಿಸಿದ ಸಂಘದ ಖಜಾಂಚಿ ಮಹಾಲಕ್ಷ್ಮಿ ಕೋಮಲಕುಮಾರ್ ಅವರು, ಮಹಿಳೆಯರೇ ಎಲ್ಲ ಪಾತ್ರಗಳಲ್ಲಿ ಅಭಿನಯಿಸಬೇಕು ಎಂದು ಸಮಾನ ಮನಸ್ಕರು ಕೂಡಿಕೊಂಡು ನಾಟಕ ಮಾಡಿದ್ದೇವೆ ಎಂದರು.<br /> <br /> ರಂಗಶಿಲ್ಪಿ ಎಚ್.ಎನ್. ರಾಮಲಿಂಗಯ್ಯ ಅವರ ನಿರ್ದೇಶನದಲ್ಲಿ ನಾಟಕ ತಾಲೀಮು ನಡೆಸಿದ್ದೇವೆ. ಐದು ಗಂಟೆಗಳ ನಾಟಕ ಇದಾಗಿದೆ. 1.20 ಲಕ್ಷ ರೂಪಾಯಿ ಖರ್ಚಾಗಿದ್ದು, ವಿವಿಧ ಇಲಾಖೆ ಹಾಗೂ ದಾನಿಗಳ ನೆರವಿನಿಂದ ನಾಟಕ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.<br /> <br /> ನಾಟಕ ಪ್ರದರ್ಶನವನ್ನು ಸಂಸದೆ ರಮ್ಯಾ ಉದ್ಘಾಟಿಸಲಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಗಮಿಸಲಿದ್ದಾರೆ ಎಂದರು.<br /> ಸಂಘದ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷೆ ಭಾರತಿ ರವಿಕುಮಾರ್ ಉಪಸ್ಥಿತರಿದ್ದರು.<br /> <br /> <strong>ಪಂಪ ಭಾರತ ನಾಟಕ ಮಾ.8 ರಂದು ಪ್ರದರ್ಶನ</strong><br /> ಮಂಡ್ಯ: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಕೆ.ಎಸ್್. ಸಚ್ಚಿದಾನಂದ ಹಾಗೂ ಲೈಬ್ರರಿ ಶಿವರಾಂ ಅವರ ಸ್ಮರಣೆ ಅಂಗವಾಗಿ ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ‘ಪಂಪ ಭಾರತ’ ನಾಟಕವು ಮಾ.8 ರಂದು ಸಂಜೆ 6 ಗಂಟೆಗೆ ನಗರದ ವಿವೇಕಾನಂದ ರಂಗಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.<br /> <br /> ಪ್ರಮೋದ್ ಶಿಗ್ಗಾಂವ್್ ನಿರ್ದೇಶಿಸಿದ್ದು, ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಲಿದೆ. ಗಜಾನನ ಹೆಗಡೆ ಸಂಗೀತ ನೀಡಿದ್ದಾರೆ ಎಂದು ಗುರುವಾರ ಸುದ್ದಿಗಾರರಿಗೆ ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಂ. ರವಿ ತಿಳಿಸಿದರು.<br /> <br /> ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಪಿಇಎಸ್ ಅಧ್ಯಕ್ಷ ಎಚ್್.ಡಿ. ಚೌಡಯ್ಯ ವಹಿಸಲಿದ್ದಾರೆ ಎಂದರು. ರಾಕೇಶ್, ಶಿವಾನಂದ, ಮುರುಳಿಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ವಿದ್ಯಾನಗರದಲ್ಲಿರುವ ಮಂಗಳ ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ವೈ.ಎಚ್. ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ಮಾಡಿದರು.<br /> <br /> ವೈದ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ದೂರು ನೀಡಿದರೆ ವೃತ್ತಿ ಹೇಗೆ ಮುಂದುವರೆಸುತ್ತೀರಿ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.<br /> <br /> ಘಟನೆಯು ಕ್ಲಿನಿಕ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ವೈದ್ಯರ ಆಸ್ಪತ್ರೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.<br /> <br /> ಹಲ್ಲು ಕೀಳಿಸಲು ಬಂದಿದ್ದ ಸೌಮ್ಯ ಎಂಬುವವರು ಅವ್ಯಾಚ್ಯ ನಿಂದಿಸಿ ಹೋದರು. ನಂತರ ಅವರ ಪತಿ ಎನ್ನಲಾದ ಅರುಣ್ ಅವರೊಂದಿಗೆ 10ಕ್ಕೂ ಹೆಚ್ಚು ಮಂದಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದರು ಎಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.<br /> <br /> <strong>ಮಹಿಳಾ ದಿನಾಚರಣೆ: ಸೀತಾಪಹರಣ ನಾಟಕ</strong><br /> ಮಂಡ್ಯ: ಭೈರವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ದಿನ ಅಂಗವಾಗಿ ಮಾ.8 ರಂದು ನಗರದ ಕಲಾ ಮಂದಿರದಲ್ಲಿ ಹವ್ಯಾಸಿ ಮಹಿಳಾ ಕಲಾವಿದರೇ ಅಭಿನಯಿಸಿರುವ ‘ಸೀತಾಪಹರಣ’ ನಾಟಕ ಪ್ರದರ್ಶನಗೊಳ್ಳಲಿದೆ.<br /> <br /> ಗುರುವಾರ ಸುದ್ದಿಗಾರರಿಗೆ ವಿಷಯ ತಿಳಿಸಿದ ಸಂಘದ ಖಜಾಂಚಿ ಮಹಾಲಕ್ಷ್ಮಿ ಕೋಮಲಕುಮಾರ್ ಅವರು, ಮಹಿಳೆಯರೇ ಎಲ್ಲ ಪಾತ್ರಗಳಲ್ಲಿ ಅಭಿನಯಿಸಬೇಕು ಎಂದು ಸಮಾನ ಮನಸ್ಕರು ಕೂಡಿಕೊಂಡು ನಾಟಕ ಮಾಡಿದ್ದೇವೆ ಎಂದರು.<br /> <br /> ರಂಗಶಿಲ್ಪಿ ಎಚ್.ಎನ್. ರಾಮಲಿಂಗಯ್ಯ ಅವರ ನಿರ್ದೇಶನದಲ್ಲಿ ನಾಟಕ ತಾಲೀಮು ನಡೆಸಿದ್ದೇವೆ. ಐದು ಗಂಟೆಗಳ ನಾಟಕ ಇದಾಗಿದೆ. 1.20 ಲಕ್ಷ ರೂಪಾಯಿ ಖರ್ಚಾಗಿದ್ದು, ವಿವಿಧ ಇಲಾಖೆ ಹಾಗೂ ದಾನಿಗಳ ನೆರವಿನಿಂದ ನಾಟಕ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.<br /> <br /> ನಾಟಕ ಪ್ರದರ್ಶನವನ್ನು ಸಂಸದೆ ರಮ್ಯಾ ಉದ್ಘಾಟಿಸಲಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಗಮಿಸಲಿದ್ದಾರೆ ಎಂದರು.<br /> ಸಂಘದ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷೆ ಭಾರತಿ ರವಿಕುಮಾರ್ ಉಪಸ್ಥಿತರಿದ್ದರು.<br /> <br /> <strong>ಪಂಪ ಭಾರತ ನಾಟಕ ಮಾ.8 ರಂದು ಪ್ರದರ್ಶನ</strong><br /> ಮಂಡ್ಯ: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಕೆ.ಎಸ್್. ಸಚ್ಚಿದಾನಂದ ಹಾಗೂ ಲೈಬ್ರರಿ ಶಿವರಾಂ ಅವರ ಸ್ಮರಣೆ ಅಂಗವಾಗಿ ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ‘ಪಂಪ ಭಾರತ’ ನಾಟಕವು ಮಾ.8 ರಂದು ಸಂಜೆ 6 ಗಂಟೆಗೆ ನಗರದ ವಿವೇಕಾನಂದ ರಂಗಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.<br /> <br /> ಪ್ರಮೋದ್ ಶಿಗ್ಗಾಂವ್್ ನಿರ್ದೇಶಿಸಿದ್ದು, ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಲಿದೆ. ಗಜಾನನ ಹೆಗಡೆ ಸಂಗೀತ ನೀಡಿದ್ದಾರೆ ಎಂದು ಗುರುವಾರ ಸುದ್ದಿಗಾರರಿಗೆ ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಂ. ರವಿ ತಿಳಿಸಿದರು.<br /> <br /> ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಪಿಇಎಸ್ ಅಧ್ಯಕ್ಷ ಎಚ್್.ಡಿ. ಚೌಡಯ್ಯ ವಹಿಸಲಿದ್ದಾರೆ ಎಂದರು. ರಾಕೇಶ್, ಶಿವಾನಂದ, ಮುರುಳಿಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>