<p><strong>ಮಂಡ್ಯ:</strong> ಐತಿಹಾಸಿಕ ಮಹತ್ವ ಪಡೆದಿರುವ ಮದ್ದೂರು ತಾಲ್ಲೂಕಿನ ಅರೆ ತಿಪ್ಪೂರು ಗ್ರಾಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಕನಕತೀರ್ಥ ಕೊಳವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.<br /> <br /> ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ್ ಅವರು ‘ಗ್ರಾಮದಲ್ಲಿ ವಾಸ್ತವ್ಯ ಮಾಡಿ ವಾಸ್ತವ ನೋಡು’ ಕಾರ್ಯಕ್ರಮದಡಿ ಶುಕ್ರವಾರ ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದ್ದರು.<br /> <br /> ಪರಿಸರವನ್ನು ಉಳಿಸುವ ಕುರಿತು ಅಮರನಾರಾಯಣ್ ಅವರು ಗ್ರಾಮಸ್ಥರಿಗೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ತಾವೂ ಪರಿಸರ ಬೆಳೆಸಲು ಮಾಡಿದ ಕಾರ್ಯಗಳನ್ನೂ ತಿಳಿಸಿದರು. ನಂತರ ಪಟ, ವೀರಗಾಸೆ ಮುಂತಾದ ಜನಪದ ಕಲಾ ತಂಡಗಳು ಪ್ರದರ್ಶನವನ್ನು ನೀಡಿದವು.<br /> <br /> ಗ್ರಾಮಸ್ಥರು ಕುಡಿಯಲು ಬಳಸುವ ಕನಕತೀರ್ಥ ಕೊಳದಲ್ಲಿ ಬಹಳಷ್ಟು ಮಣ್ಣು ಸೇರಿಕೊಂಡಿತ್ತು. ಅದನ್ನು ಸ್ವಚ್ಛಗೊಳಿಸಲು ಸ್ವಾಮಿ ವಿವೇಕಾನಂದ ಯುವಕರ ತಂಡ ನಿರ್ಧರಿಸಿತ್ತು. ಅದಕ್ಕೆ ಕಾರ್ಯದರ್ಶಿ ಅವರ ಗಮನಕ್ಕೆ ತಂದಾಗ ಅವರೂ ಮುಂದಾದರು.<br /> ಮಂಡ್ಯದ ಪಿಇಎಸ್, ಮದ್ದೂರಿನ ಎಚ್ .ಕೆ. ವೀರಣ್ಣಗೌಡ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಎನ್ಎಸ್ ಎಸ್ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.<br /> <br /> ಕೊಳದಲ್ಲಿ ಮಣ್ಣು, ಕಲ್ಲನ್ನು ಹೊರಕ್ಕೆ ತೆಗೆದು ಹಾಕಲಾಯಿತು. ಕೊಳವೆಬಾವಿಯಿಂದ ಕೊಳಕ್ಕೆ ಸಂಪರ್ಕ ಕೊಡಿಸಲಾಗಿತ್ತು. ಸ್ವಚ್ಛತೆಯ ನಂತರ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಜೈನಮುನಿಗಳ ವಿಗ್ರಹ, ಕೆತ್ತನೆ ಮಾಡಿದ ಕಲ್ಲುಗಳೂ ಪತ್ತೆಯಾದವು.<br /> <br /> ಅಮರನಾರಾಯಣ್ ಮಾತನಾಡಿ, ಐತಿಹಾಸಿಕ ಮಹತ್ವ ಪಡೆದಿರುವ ಇಂತಹ ಕೊಳವನ್ನು ಉಳಿಸುವುದು ಬಹುಮುಖ್ಯ ಕೆಲಸವಾಗಿದೆ. ಇಲ್ಲಿನ ಐತಿಹಾಸಿಕ ಮಹತ್ವವನ್ನು ಸಾರಬೇಕಾಗಿದೆ. ಜೊತೆಗೆ ಸಂರಕ್ಷಿಸುವ ಕೆಲಸವೂ ಆಗಬೇಕಿದೆ ಎಂದರು.<br /> <br /> ಜಿಲ್ಲಾಧಿಕಾರಿ ಬಿ.ಎನ್ . ಕೃಷ್ಣಯ್ಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್ .ಪಿ. ಮಂಜುಳಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಐತಿಹಾಸಿಕ ಮಹತ್ವ ಪಡೆದಿರುವ ಮದ್ದೂರು ತಾಲ್ಲೂಕಿನ ಅರೆ ತಿಪ್ಪೂರು ಗ್ರಾಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಕನಕತೀರ್ಥ ಕೊಳವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.<br /> <br /> ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ್ ಅವರು ‘ಗ್ರಾಮದಲ್ಲಿ ವಾಸ್ತವ್ಯ ಮಾಡಿ ವಾಸ್ತವ ನೋಡು’ ಕಾರ್ಯಕ್ರಮದಡಿ ಶುಕ್ರವಾರ ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದ್ದರು.<br /> <br /> ಪರಿಸರವನ್ನು ಉಳಿಸುವ ಕುರಿತು ಅಮರನಾರಾಯಣ್ ಅವರು ಗ್ರಾಮಸ್ಥರಿಗೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ತಾವೂ ಪರಿಸರ ಬೆಳೆಸಲು ಮಾಡಿದ ಕಾರ್ಯಗಳನ್ನೂ ತಿಳಿಸಿದರು. ನಂತರ ಪಟ, ವೀರಗಾಸೆ ಮುಂತಾದ ಜನಪದ ಕಲಾ ತಂಡಗಳು ಪ್ರದರ್ಶನವನ್ನು ನೀಡಿದವು.<br /> <br /> ಗ್ರಾಮಸ್ಥರು ಕುಡಿಯಲು ಬಳಸುವ ಕನಕತೀರ್ಥ ಕೊಳದಲ್ಲಿ ಬಹಳಷ್ಟು ಮಣ್ಣು ಸೇರಿಕೊಂಡಿತ್ತು. ಅದನ್ನು ಸ್ವಚ್ಛಗೊಳಿಸಲು ಸ್ವಾಮಿ ವಿವೇಕಾನಂದ ಯುವಕರ ತಂಡ ನಿರ್ಧರಿಸಿತ್ತು. ಅದಕ್ಕೆ ಕಾರ್ಯದರ್ಶಿ ಅವರ ಗಮನಕ್ಕೆ ತಂದಾಗ ಅವರೂ ಮುಂದಾದರು.<br /> ಮಂಡ್ಯದ ಪಿಇಎಸ್, ಮದ್ದೂರಿನ ಎಚ್ .ಕೆ. ವೀರಣ್ಣಗೌಡ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಎನ್ಎಸ್ ಎಸ್ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.<br /> <br /> ಕೊಳದಲ್ಲಿ ಮಣ್ಣು, ಕಲ್ಲನ್ನು ಹೊರಕ್ಕೆ ತೆಗೆದು ಹಾಕಲಾಯಿತು. ಕೊಳವೆಬಾವಿಯಿಂದ ಕೊಳಕ್ಕೆ ಸಂಪರ್ಕ ಕೊಡಿಸಲಾಗಿತ್ತು. ಸ್ವಚ್ಛತೆಯ ನಂತರ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಜೈನಮುನಿಗಳ ವಿಗ್ರಹ, ಕೆತ್ತನೆ ಮಾಡಿದ ಕಲ್ಲುಗಳೂ ಪತ್ತೆಯಾದವು.<br /> <br /> ಅಮರನಾರಾಯಣ್ ಮಾತನಾಡಿ, ಐತಿಹಾಸಿಕ ಮಹತ್ವ ಪಡೆದಿರುವ ಇಂತಹ ಕೊಳವನ್ನು ಉಳಿಸುವುದು ಬಹುಮುಖ್ಯ ಕೆಲಸವಾಗಿದೆ. ಇಲ್ಲಿನ ಐತಿಹಾಸಿಕ ಮಹತ್ವವನ್ನು ಸಾರಬೇಕಾಗಿದೆ. ಜೊತೆಗೆ ಸಂರಕ್ಷಿಸುವ ಕೆಲಸವೂ ಆಗಬೇಕಿದೆ ಎಂದರು.<br /> <br /> ಜಿಲ್ಲಾಧಿಕಾರಿ ಬಿ.ಎನ್ . ಕೃಷ್ಣಯ್ಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್ .ಪಿ. ಮಂಜುಳಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>