ಮಳವಳ್ಳಿ ತಾಲ್ಲೂಕಿನ ರಾವಣಿ ಗ್ರಾಮದ ಕೃಷಿಕ ನಂಜುಂಡಸ್ವಾಮಿ– ರೇಣುಕಾ ದಂಪತಿಯ ಮಗನಾಗಿ ಜನಿಸಿದ ಅನಿಕೇತನ್ ಅವರಿಗೆ ಬಾಲ್ಯದಿಂದಲೂ ಆಟೋಟಗಳೆಂದರೆ ಅಚ್ಚುಮೆಚ್ಚು. ಮಳವಳ್ಳಿಯ ರೋಟರಿ ಪ್ರೌಢಶಾಲೆಯಲ್ಲಿ ಓದುವಾಗಲೇ 100 ಮೀಟರ್, 200ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಥ್ರೋಬಾಲ್, ಕಬಡ್ಡಿ ಆಟಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಬಹುಮಾನ ಪಡೆದಿದ್ದರು. ಕಾಲೇಜು ವ್ಯಾಸಂಗಕ್ಕಾಗಿ ಆರ್.ಕೆ. ಪಿಯು ಕಾಲೇಜಿಗೆ ಬಂದಾಗ ಇವರನ್ನು ಟೆನ್ನಿಕಾಯ್ಟ್ ಕ್ರೀಡೆ ಆಕರ್ಷಿಸಿತು. ಬೀದಿ ಬದಿಯಲ್ಲಿ ಎಸೆದಾಡುತ್ತಿದ್ದ ರಿಂಗ್ ಆಟಕ್ಕೆ ನಿಯಮಾವಳಿಗಳಿವೆ ಎಂದು ತಿಳಿದಿದ್ದು ಇಲ್ಲಿಗೆ ಬಂದ ನಂತರವೇ.