ರಜನಿಯ ತಂದೆ-ತಾಯಿ ಚಿತ್ರದುರ್ಗದವರಾಗಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಮಗಳನ್ನು ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಮಾನಸಿಕ ಅಸ್ವಸ್ಥ ಸಂತೋಷ್ ಬಾಲಕಿಯ ಸೋದರ ಮಾವ. ಮೊಬೈಲ್ ತೆಗೆದುಕೊಳ್ಳುವ ವಿಷಯಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದನು. ಜಗಳದ ನಂತರ ತಂದೆ ಸಂತೋಷನಿಗೆ ಮೊಬೈಲ್ ಕೊಡಿಸಿದ್ದರು. ಆದರೆ ಈ ಮೊಬೈಲನ್ನು ಬಾಲಕಿ ಒಂದು ಬಾರಿ ಹಾಳು ಮಾಡಿದ್ದಳು ಎಂಬ ಕೋಪ ಆತನಿಗೆ ಇತ್ತು. ಹೀಗಾಗಿ ರಜನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.