ಈತ ದುರ್ಗಿಗುಡಿ ಬಳಿ ಈಚೆಗೆ ಹತ್ಯೆಯಾದ ಮಾರ್ಕೆಟ್ ಗಿರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಕೊಲೆಯ ನಂತರ ತಲೆಮರೆಸಿಕೊಂಡಿದ್ದ. ಮೂರು ಕೊಲೆ ಪ್ರಕರಣ, ಒಂದು ಕೋಕಾ ಪ್ರಕರಣ ಆತನ ಮೇಲಿತ್ತು.ಪೊಲೀಸರ ಕಣ್ಣು ತಪ್ಪಿಸಿ ಬಂದು ಹೋಗುತ್ತಿದ್ದ ಗೋವಿಂದ್ ಮಾಹಿತಿ ಪಡೆದ ಗಿರಿ ಹುಡುಗರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.