<p><strong>ಮೈಸೂರು:</strong> ಪಾಲಿಕೆ ಸದಸ್ಯ ಅಯಾಜ್ ಪಾಷಾ (ಪಂಡು) ಅವರ ಅಳಿಯ ಶಹಬಾಜ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿದೆ.</p>.<p>ಆರ್.ಟಿ.ನಗರದ ಸಾಹಿಲ್, ಗೌಸಿಯಾನಗರದ ಸುಹೇಲ್, ಬೆಂಗಳೂರಿನ ಗೋರಿಪಾಳ್ಯದ ಲಡ್ಡಾ ಕಲೀಂ ಮತ್ತು ಆವಳಹಳ್ಳಿಯ ಹಬೀಬ್ ಸುಖ್ಖಾ ಬಂಧಿತ ಆರೋಪಿಗಳು. ಈ ಹಿಂದೆ ಅಫ್ನೈನ್, ಫರಾಜ್ ಹಾಗೂ ಜೀಶಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.</p>.<p>ಇವರು ಹಾಗೂ ತಂಡದ ಇತರ ಸದಸ್ಯರು ಮೇ 12ರಂದು ಶಹಬಾಜ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದರು. ತುಂಡಾದ ಕೈಯನ್ನು ಸ್ವತಃ ಶಹಬಾಜ್ ಅವರೇ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು.</p>.<p>ಈ ಹಿಂದೆ ತಮ್ಮ ಗುಂಪಿನ ಮೇಲೆ ಶಹಬಾಜ್ ಅವರು ಹಲ್ಲೆ ನಡೆಸಿದ್ದರು ಎಂಬ ಕಾರಣಕ್ಕೆ ಕೈ ತುಂಡರಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.</p>.<p>ಡಿಸಿಪಿ ಪ್ರಕಾಶ್ಗೌಡ ಹಾಗೂ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಉದಯಗಿರಿ ಇನ್ಸ್ಪೆಕ್ಟರ್ ಪೂಣಚ್ಚ, ಸಬ್ಇನ್ಸ್ಪೆಕ್ಟರ್ ಜಯಕೀರ್ತಿ ಕಾರ್ಯಾಚರಣೆ ಕೈಗೊಂಡಿದ್ದರು.</p>.<p><strong>ವ್ಯಕ್ತಿ ಆತ್ಮಹತ್ಯೆ</strong></p>.<p>ಮೈಸೂರು: ಇಲ್ಲಿನ ಚಾಮುಂಡಿಪುರಂ ಮೊದಲನೇ ಮೇನ್ನಲ್ಲಿ ವಾಸವಿದ್ದ ಕೃಷ್ಣ (43) ಎಂಬುವವರು ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಇವರು ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದವರು.</p>.<p>ಅವಿವಾಹಿತರಾಗಿದ್ದ ಇವರು, ಇಲ್ಲಿ ಟೈಲರ್ ಕೆಲಸ ಮಾಡಿಕೊಂಡು ಒಬ್ಬರೇ ಬಾಡಿಗೆ ಕೋಣೆಯೊಂದರಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಪಾಲಿಕೆ ಸದಸ್ಯ ಅಯಾಜ್ ಪಾಷಾ (ಪಂಡು) ಅವರ ಅಳಿಯ ಶಹಬಾಜ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿದೆ.</p>.<p>ಆರ್.ಟಿ.ನಗರದ ಸಾಹಿಲ್, ಗೌಸಿಯಾನಗರದ ಸುಹೇಲ್, ಬೆಂಗಳೂರಿನ ಗೋರಿಪಾಳ್ಯದ ಲಡ್ಡಾ ಕಲೀಂ ಮತ್ತು ಆವಳಹಳ್ಳಿಯ ಹಬೀಬ್ ಸುಖ್ಖಾ ಬಂಧಿತ ಆರೋಪಿಗಳು. ಈ ಹಿಂದೆ ಅಫ್ನೈನ್, ಫರಾಜ್ ಹಾಗೂ ಜೀಶಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.</p>.<p>ಇವರು ಹಾಗೂ ತಂಡದ ಇತರ ಸದಸ್ಯರು ಮೇ 12ರಂದು ಶಹಬಾಜ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದರು. ತುಂಡಾದ ಕೈಯನ್ನು ಸ್ವತಃ ಶಹಬಾಜ್ ಅವರೇ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು.</p>.<p>ಈ ಹಿಂದೆ ತಮ್ಮ ಗುಂಪಿನ ಮೇಲೆ ಶಹಬಾಜ್ ಅವರು ಹಲ್ಲೆ ನಡೆಸಿದ್ದರು ಎಂಬ ಕಾರಣಕ್ಕೆ ಕೈ ತುಂಡರಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.</p>.<p>ಡಿಸಿಪಿ ಪ್ರಕಾಶ್ಗೌಡ ಹಾಗೂ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಉದಯಗಿರಿ ಇನ್ಸ್ಪೆಕ್ಟರ್ ಪೂಣಚ್ಚ, ಸಬ್ಇನ್ಸ್ಪೆಕ್ಟರ್ ಜಯಕೀರ್ತಿ ಕಾರ್ಯಾಚರಣೆ ಕೈಗೊಂಡಿದ್ದರು.</p>.<p><strong>ವ್ಯಕ್ತಿ ಆತ್ಮಹತ್ಯೆ</strong></p>.<p>ಮೈಸೂರು: ಇಲ್ಲಿನ ಚಾಮುಂಡಿಪುರಂ ಮೊದಲನೇ ಮೇನ್ನಲ್ಲಿ ವಾಸವಿದ್ದ ಕೃಷ್ಣ (43) ಎಂಬುವವರು ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಇವರು ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದವರು.</p>.<p>ಅವಿವಾಹಿತರಾಗಿದ್ದ ಇವರು, ಇಲ್ಲಿ ಟೈಲರ್ ಕೆಲಸ ಮಾಡಿಕೊಂಡು ಒಬ್ಬರೇ ಬಾಡಿಗೆ ಕೋಣೆಯೊಂದರಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>