ಗಣೇಶ ಸ್ತುತಿಯೊಂದಿಗೆ ಕಛೇರಿ ಆರಂಭಿಸಿದ ಅವರು, ಅಜ್ಜ ಸುಚೀಂದ್ರಂ ಎಸ್.ಪಿ.ಶಿವಸುಬ್ರಹ್ಮಣಿಯಮ್ ಸಂಯೋಜಿಸಿರುವ‘ಮುರುಗ’ ದೇವರ ಕುರಿತ ‘ಘನಪಂಚ ರಾಗಮಾಲಿಕೆ’ಯ ‘ಕೇಟ್ಟ ವರಂ ತರುವಾನ್’ ಕೃತಿಯನ್ನುಪ್ರಸ್ತುತ ಪಡಿಸಿದರು.‘ನಾಟ’, ‘ಗೌಳಿ’, ‘ಆರಭಿ’, ‘ವರಾಳಿ’, ‘ಶ್ರೀ’ ರಾಗಗಳ ಆರೋಹ, ಅವರೋಹಗಳು ಶ್ರೋತೃಗಳನ್ನು ತಲೆದೂಗಿಸಿದವು.