<p><strong>ಮೈಸೂರು: </strong>ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಪೋಷಕರು, ಶಿಕ್ಷಕರು ವೀಕ್ಷಿಸುವುದು ಸಾಮಾನ್ಯ. ಆದರೆ, ಇಲ್ಲಿ ಮಕ್ಕಳೇ ತಮ್ಮ ಪೋಷಕರ ಹಾಗೂ ಶಿಕ್ಷಕರ ಪ್ರತಿಭೆಗಳನ್ನು ಕಣ್ತುಂಬಿಕೊಂಡರು. ಅವರ ಗಾಯನಕ್ಕೆ, ನರ್ತನಕ್ಕೆ, ಅಭಿನಯಕ್ಕೆ ಮನಸೋತು ಚಪ್ಪಾಳೆ ತಟ್ಟಿದರು.</p>.<p>ಇಂತಹದ್ದೊಂದು ಅಪರೂಪದ ಹಾಗೂ ವಿಶಿಷ್ಟವಾದ ದೃಶ್ಯಗಳು ಶನಿವಾರ ಅರಿವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ‘ಅರಿವು ಹಬ್ಬ’ದಲ್ಲಿ ಕಂಡು ಬಂತು.</p>.<p>ಇಲ್ಲಿ ಮಕ್ಕಳು ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಕೇವಲ ಪ್ರೇಕ್ಷಕರಾಗಿಯಷ್ಟೇ ಕುಳಿತರು. ಇವರ ಪೋಷಕರು ಹಾಗೂ ಶಿಕ್ಷಕರು ವಿವಿಧ ತಂಡಗಳನ್ನಾಗಿ ರಚಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<p>ಮೊದಲಿಗೆ ಪೋಷಕರ ತಂಡವು ವಚನ ಗಾಯನವನ್ನು ಪ್ರಸ್ತುತಪಡಿಸಿದರೆ, ನಂತರ ಶಿಕ್ಷಕರ ತಂಡವು ಜಾನಪದ ನೃತ್ಯವನ್ನು ಪ್ರದರ್ಶಿಸಿ ಮಕ್ಕಳಿಗೆ ಭರಪೂರ ಮನರಂಜನೆ ಒದಗಿಸಿದರು.</p>.<p>ಪೋಷಕರ ವಿವಿಧ ತಂಡಗಳಿಂದ ಹಾಡುಗಳು ಹಾಗೂ ನೃತ್ಯಗಳು ಪ್ರದರ್ಶನಗೊಂಡವು. ಮನೋಹರ ಅವರು ಬರೆದು ನಿರ್ದೇಶಿಸಿದ್ದ ‘ಜಸ್ಟ್ ಮಿಸ್’ ನಾಟಕವನ್ನು ಪೋಷಕರು ಹಾಗೂ ಶಿಕ್ಷಕರು ಪ್ರದರ್ಶಿಸಿದರು.</p>.<p>ವರ್ಷಪೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದವರಿಗೆ ರಂಗಕರ್ಮಿ ಜಯರಾಮಪಾಟೀಲ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಪೋಷಕರು, ಶಿಕ್ಷಕರು ವೀಕ್ಷಿಸುವುದು ಸಾಮಾನ್ಯ. ಆದರೆ, ಇಲ್ಲಿ ಮಕ್ಕಳೇ ತಮ್ಮ ಪೋಷಕರ ಹಾಗೂ ಶಿಕ್ಷಕರ ಪ್ರತಿಭೆಗಳನ್ನು ಕಣ್ತುಂಬಿಕೊಂಡರು. ಅವರ ಗಾಯನಕ್ಕೆ, ನರ್ತನಕ್ಕೆ, ಅಭಿನಯಕ್ಕೆ ಮನಸೋತು ಚಪ್ಪಾಳೆ ತಟ್ಟಿದರು.</p>.<p>ಇಂತಹದ್ದೊಂದು ಅಪರೂಪದ ಹಾಗೂ ವಿಶಿಷ್ಟವಾದ ದೃಶ್ಯಗಳು ಶನಿವಾರ ಅರಿವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ‘ಅರಿವು ಹಬ್ಬ’ದಲ್ಲಿ ಕಂಡು ಬಂತು.</p>.<p>ಇಲ್ಲಿ ಮಕ್ಕಳು ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಕೇವಲ ಪ್ರೇಕ್ಷಕರಾಗಿಯಷ್ಟೇ ಕುಳಿತರು. ಇವರ ಪೋಷಕರು ಹಾಗೂ ಶಿಕ್ಷಕರು ವಿವಿಧ ತಂಡಗಳನ್ನಾಗಿ ರಚಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<p>ಮೊದಲಿಗೆ ಪೋಷಕರ ತಂಡವು ವಚನ ಗಾಯನವನ್ನು ಪ್ರಸ್ತುತಪಡಿಸಿದರೆ, ನಂತರ ಶಿಕ್ಷಕರ ತಂಡವು ಜಾನಪದ ನೃತ್ಯವನ್ನು ಪ್ರದರ್ಶಿಸಿ ಮಕ್ಕಳಿಗೆ ಭರಪೂರ ಮನರಂಜನೆ ಒದಗಿಸಿದರು.</p>.<p>ಪೋಷಕರ ವಿವಿಧ ತಂಡಗಳಿಂದ ಹಾಡುಗಳು ಹಾಗೂ ನೃತ್ಯಗಳು ಪ್ರದರ್ಶನಗೊಂಡವು. ಮನೋಹರ ಅವರು ಬರೆದು ನಿರ್ದೇಶಿಸಿದ್ದ ‘ಜಸ್ಟ್ ಮಿಸ್’ ನಾಟಕವನ್ನು ಪೋಷಕರು ಹಾಗೂ ಶಿಕ್ಷಕರು ಪ್ರದರ್ಶಿಸಿದರು.</p>.<p>ವರ್ಷಪೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದವರಿಗೆ ರಂಗಕರ್ಮಿ ಜಯರಾಮಪಾಟೀಲ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>